ಇಂದು ನವಲಗುಂದ ಗಣೇಶನ ರಥೋತ್ಸವ
Team Udayavani, Sep 10, 2019, 10:03 AM IST
ನವಲಗುಂದ: ಇಲ್ಲಿನ ಇತಿಹಾಸ ಪ್ರಸಿದ್ಧ ವಿನಾಯಕ ಪೇಟೆಯ ಗಣಪತಿ ದೇವಸ್ಥಾನದಲ್ಲಿ ಗಣೇಶ ಹಬ್ಬದ ನಿಮಿತ್ತ 8 ದಿನಗಳ ವರೆಗೆ ನಿತ್ಯ ವಾಹನೋತ್ಸವ ನಡೆದು 9ನೇ ದಿನವಾದ ಸೆ. 10ರಂದು ಶ್ರೀ ಗಣಪತಿಯ ಮಹಾರಥೋತ್ಸವ ಜರುಗಲಿದೆ.
ಪೇಶ್ವೆಯವರ ಕಾಲದಿಂದ ಈ ಉತ್ಸವ ನಡೆದು ಬಂದಿದ್ದು, ಮಧ್ಯದಲ್ಲಿ ನಿಂತು ಹೋಗಿತ್ತು. 2014ರಿಂದ ಮತ್ತೆ ಗಣೇಶ ಜಾತ್ರೆ ಆರಂಭವಾಗಿ ವರ್ಷದಿಂದ ವರ್ಷಕ್ಕೆ ಸಾವಿರಾರು ಭಕ್ತರು ಶ್ರೀ ವಿಘ್ನೕಶ್ವರನ ದರ್ಶನ ಪಡೆಯುತ್ತಿದ್ದಾರೆ.
ಇತಿಹಾಸ: 1734ರಲ್ಲಿ ಅವರಾದಿ ವಿಠಲಪ್ಪಗೌಡರ ವಂಶಸ್ಥ ಎರಡನೇ ಜಾಯಗೊಂಡ ದೊರೆ ನವಲಗುಂದದ ಅಧಿಪತಿಯಾಗಿದ್ದರು. ಅವರು ಪೇಶ್ವೇಯವರನ್ನು ನವಲಗುಂದಕ್ಕೆ ಆಹ್ವಾನಿಸಿದರು. ಪೇಶ್ವೇಯವರು ಇಲ್ಲಿಗೆ ಬಂದ ಮರುದಿನವೇ ಗಣೇಶ ಚತುರ್ಥಿ ಹಬ್ಬ. ಪೇಶ್ವೆ ಗಣೇಶನ ಪರಮಭಕ್ತ. ದೂರದ ಪುಣೆ ತಲುಪಿ ಉತ್ಸವದಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲವಲ್ಲ ಎಂದು ಚಡಪಡಿಸಿದರಂತೆ. ಆಗ ಜಾಯಗೊಂಡರು ಅಂದೇ ಖ್ಯಾತ ಶಿಲ್ಪಿಯನ್ನು ಕರೆಸಿ ಒಂದೇ ದಿನದಲ್ಲಿ ವಿನಾಯಕ ಮೂರ್ತಿ, ಮಂದಿರ ನಿರ್ಮಾಣವಾಗಬೇಕು ಎಂದರಂತೆ.
ಆ ಶಿಲ್ಪಿಯು ತನ್ನ ದೈವವನ್ನು ನೆನೆದು ಮೂರ್ತಿ ಕೆತ್ತಲು ಆರಂಭಿಸಿದರೆ ಬೆಳಗಾಗುವ ಮುನ್ನವೇ ಗಣೇಶನ ಮೂರ್ತಿ ಹಾಗೂ ಮಂದಿರ ನಿರ್ಮಾಣಗೊಂಡಿತ್ತು. ಆತ ಮೂರ್ತಿಯನ್ನು ಪಾದದಿಂದ ಆರಂಭಿಸಿ ದೇಹ, ಮುಖ ರಚಿಸಿ ಪೂರ್ಣಗೊಳಿಸಿದನಂತೆ. ಈ ರೀತಿಯ ರಚನೆಯಿಂದ ಮೂರ್ತಿ ಮಹಿಮೆಗೆ ಸಾಕ್ಷಿಯಾಗುತ್ತದೆ ಎಂದು ಶಿಲ್ಪಿ ಹೇಳಿದನಂತೆ. ಮುಂದೆ ಜಾಯಗೊಂಡರ ವಂಶದ ರಾಜ್ಯಭಾರ ಕೊನೆಗೊಂಡಿತು. ಈ ಗಣೇಶನ ಮೂರ್ತಿ ಅಗೋಚರ ಶಕ್ತಿಗೆ ಸಾಕ್ಷಿಯಾಯಿತು.
ಪಂಚಲೋಹ ಮೂರ್ತಿ ಹಿನ್ನೆಲೆ: ಗಣೇಶೋತ್ಸವಕ್ಕೆ ಮೆರಗು ಕೊಡಲು ದೇವಸ್ಥಾನದಲ್ಲಿರುವ ವಿಗ್ರಹದಂತೆ ಉತ್ಸವ ಮೂರ್ತಿಯನ್ನು ಬಂಗಾರದಿಂದ ತಯಾರಿಸಲು ಜಾಯಗೊಂಡ ದೊರೆ ಯೋಚಿಸಿ ತನ್ನ ವಾಡೆಯಲ್ಲಿಯೇ ಮೂರ್ತಿ ತಯಾರಿಸಲು ಲೋಹ ಶಿಲ್ಪಿಗೆ ಆದೇಶಿಸಿದರಂತೆ. ಆದರೆ ಬಂಗಾರದ ವ್ಯಾಮೋಹ ಹೊಂದಿದ್ದ ಲೋಹ ಶಿಲ್ಪಿಯು ದೊರೆ ಮನೆಯಲ್ಲಿ ಚಿನ್ನದ ಮೂರ್ತಿ ನಿರ್ಮಿಸಿ, ಅಂಥದೇ ಪಂಚಲೋಹದ ಮೂರ್ತಿಯನ್ನು ತನ್ನ ಮನೆಯಲ್ಲಿ ನಿರ್ಮಿಸಿದನಂತೆ.
ಮೂರ್ತಿ ಪ್ರತಿಷ್ಠಾಪನೆ ಮುನ್ನಾದಿನ ಬಂಗಾರದ ಮೂರ್ತಿಯನ್ನು ಕೆರೆಯಲ್ಲಿ ಇಟ್ಟು ಮರುದಿನ ದೇವಸ್ಥಾನಕ್ಕೆ ತರುವಂತೆ ದೊರೆ ಸೂಚಿಸಿದ್ದರಂತೆ. ಶಿಲ್ಪಿ ಯಾರಿಗೂ ತಿಳಿಯದಂತೆ ಪಂಚಲೋಹದ ಮೂರ್ತಿಯನ್ನು ರಾತ್ರಿ ಕೆರೆಯಲ್ಲಿ ಬಚ್ಚಿಟ್ಟು ಮರುದಿನ ನಸುಕಿನ ಜಾವ ಮೆರವಣಿಗೆ ಹೊರಡುವ ಸಂದರ್ಭದಲ್ಲಿ ಮೂರ್ತಿಯನ್ನು ಬದಲಾಯಿಸಿ ದೇವಸ್ಥಾನಕ್ಕೆ ತಂದನಂತೆ. ಯಾವುದೇ ಸಂಶಯ ಪಡದ ದೊರೆ ಮೂರ್ತಿಯನ್ನು ಸ್ವೀಕರಿಸಿ ದೇವಾಲಯದಲ್ಲಿ ಪ್ರತಿಷ್ಠಾಪಿಸಿದ್ದರಂತೆ. ಆದರೆ ದಿನಗಳೆದಂತೆ ಶಿಲ್ಪಿ ತನ್ನ ಕೃತ್ಯದಿಂದ ಪಶ್ಚಾತ್ತಾಪ ಪಟ್ಟು ರಾಜನ ಬಳಿ ನಿಜ ಸಂಗತಿ ತಿಳಿಸಿ ಮೂರ್ತಿ ಒಪ್ಪಿಸಿದನಂತೆ. ಕ್ಷಮಾಗುಣದ ರಾಜ ಶಿಲ್ಪಿಯನ್ನು ಕ್ಷಮಿಸಿದನಂತೆ.
47 ಕೆಜಿ ಭಾರದ ಪಂಚಲೋಹದ ಮೂರ್ತಿಯೇ ಉತ್ಸವ ಮೂರ್ತಿಯಾಗಿ ಎಂಟು ದಿನಗಳವರೆಗೆ ಅಷ್ಟ ಗಣಪತಿ ದರ್ಶನ ನೀಡುವ ಮೂಲಕ ವಾಹನೋತ್ಸವ ನಡೆಯುತ್ತದೆ. ಮೊದಲ ದಿನ ಸಿಂಹ ವಾಹನ, ಎರಡನೇ ದಿನ ಮಯೂರ, ಮೂರನೇ ದಿನ ಮೂಷಿಕ ವಾಹನ, ನಾಲ್ಕನೇ ದಿನ ನಂದಿ, ಐದನೇ ದಿನ ಗಂಡಭೇರುಂಡ, ಆರನೇ ದಿನ ಗರುಡ, ಏಳನೇ ದಿನ ಗಜವಾಹನ, ಎಂಟನೇ ದಿನ ಕಮಲಾಸನಾರೂಢನಾಗಿ ಕಂಗೊಳಿಸುತ್ತಾನೆ. ಕೊನೆಯದಾಗಿ ಒಂಭತ್ತನೇ ದಿನದಂದು ರಥೋತ್ಸವ ನಿಮಿತ್ತ ಊರಿನ ಭಕ್ತರೆಲ್ಲ ಕರಿಗಡಬು ಸಿದ್ಧಪಡಿಸಿ ನೈವೇದ್ಯ ಅರ್ಪಿಸುತ್ತಾರೆ. ಅದನ್ನೇ ಪ್ರಸಾದವಾಗಿ ಅನ್ನಸಂತರ್ಪಣೆಯಲ್ಲಿ ವಿತರಿಸುತ್ತಾರೆ.
•ಪುಂಡಲೀಕ ಮುಧೋಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ
LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ
Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ
MUST WATCH
ಹೊಸ ಸೇರ್ಪಡೆ
Sirsi Festival: ನಾವು ಬಂದೇವ ಶಿರಸಿ ಜಾತ್ರೆ ನೋಡಲಿಕ್ಕೆ !
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್ ಬೈಕ್ನಲ್ಲಿ 64ರ ಹಿರಿಯರ ಸಾಹಸ ಯಾನ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ