ಸಂಪ್ರದಾಯ ಸ್ಪರ್ಶದ ಚಟ್ನಿಪುಡಿ-ಮಸಾಲೆ ಕುಟ್ಟುವ ಯಂತ್ರ

ಒಂದು ಬಾರಿಗೆ ಅರ್ಧ ಕೆಜಿ ಪದಾರ್ಥ ತಯಾರಿ-ನಿರ್ವಹಣೆಯೂ ಸುಲಭ

Team Udayavani, Jun 2, 2020, 9:07 AM IST

ಸಂಪ್ರದಾಯ ಸ್ಪರ್ಶದ ಚಟ್ನಿಪುಡಿ-ಮಸಾಲೆ ಕುಟ್ಟುವ ಯಂತ್ರ

ಹುಬ್ಬಳ್ಳಿ: ಖಾರ, ಮಸಾಲೆ, ಅರಿಶಿಣ, ಚಟ್ನಿಪುಡಿ ಇನ್ನಿತರ ಪದಾರ್ಥಗಳನ್ನು ತಯಾರಿಸಲು ಮನೆಯಲ್ಲಿಯೇ ಇರಿಸಬಹುದಾದ ಪುಟ್ಟ ಯಂತ್ರವೊಂದು ರೂಪುಗೊಂಡಿದೆ. ಕೇವಲ 6 ಕೆಜಿ ತೂಕದ ಈ ಯಂತ್ರ ಸಾಂಪ್ರದಾಯಿಕ ರೀತಿಯಲ್ಲಿ ಪದಾರ್ಥ ತಯಾರಿಸಲಿದೆ.

ಖಾರ-ಅರಿಶಿಣ ಪುಡಿಗಾಗಿ ರೆಡಿಮೇಡ್‌ ಪಾಕೆಟ್‌ ತರಬೇಕು ಇಲ್ಲವೇ ಕುಟ್ಟುವ ಯಂತ್ರಗಳಿದ್ದಲ್ಲಿಗೆ ಹೋಗಬೇಕು. ಚಟ್ನಿಪುಡಿ, ಮಸಾಲೆ ಇನ್ನಿತರ ಪದಾರ್ಥಗಳನ್ನು ತಯಾರಿಸಬೇಕಾದರೆ ಮಿಕ್ಸಿ ಮೊರೆ ಹೋಗಬೇಕಾಗಿದೆ. ಈ ಹಿಂದೆ ಇವುಗಳನ್ನು ಸಾಂಪ್ರದಾಯಿಕ ರೀತಿ ಒರಳಿನಲ್ಲಿ ಕಲ್ಲು ಇಲ್ಲವೇ ಕಬ್ಬಿಣದ ಹಾರೆಯಿಂದ ತಯಾರಿಸಲಾಗುತ್ತಿತ್ತು. ಇದೀಗ ಅದೇ ಮಾದರಿಯಲ್ಲಿ ಸಣ್ಣ ಯಂತ್ರವೊಂದನ್ನು ವಿಜಯಪುರ ಜಿಲ್ಲೆಯ ಗ್ರಾಮೀಣ ಯುವಕರೊಬ್ಬರು ರೂಪಿಸಿದ್ದಾರೆ.

ಕೃಷಿ-ವೈದ್ಯಕೀಯ ಕ್ಷೇತ್ರಕ್ಕೆ ಉಪಯುಕ್ತ ಯಂತ್ರ, ಸಲಕರಣೆ ರೂಪಿಸುವಲ್ಲಿ ತೊಡಗಿರುವ ವಿಜಯಪುರದ ಕೃಷಿ ತರಂಗ ಫಾರ್ಮ್ ಟೆಕ್‌ ಎಎಲ್‌ಪಿ ಸಂಸ್ಥೆ ಸಂಸ್ಥಾಪಕ ಗಿರೀಶ ಭದ್ರಗೊಂಡ ಅವರು ಗೃಹ ಬಳಕೆಗೆ ಅನುಕೂಲವಾಗುವ ಖಾರ-ಮಸಾಲೆ ಇನ್ನಿತರ ಪದಾರ್ಥ ಕುಟ್ಟುವ ಯಂತ್ರ ತಯಾರಿಸಿದ್ದಾರೆ. ಕೃಷಿ ಕುಟುಂಬ ಹಿನ್ನೆಲೆಯ ಗಿರೀಶ ಸದಾ ಹೊಸತನದ ಚಿಂತನೆಯಲ್ಲಿರುವವರು, ರೈತರು ಹಾಗೂ ಜನರಿಗೆ ಸಣ್ಣ ಸಣ್ಣ ಪ್ರಮಾಣದಲ್ಲಿ ಕೈಗೆಟಕುವ ದರದಲ್ಲಿ ಸಾಧನ-ಸಲಕರಣೆ, ಯಂತ್ರಗಳನ್ನು ನೀಡಬೇಕು ಎಂಬ ಉದ್ದೇಶದೊಂದಿಗೆ ಈಗಾಗಲೇ ಅಂಧರು ಸಹ ಕೃಷಿ ಮಾಡಬಹುದಾದ ತಂತ್ರಜ್ಞಾನ ರೂಪಿಸಿದ್ದಾರೆ. ಸೆನ್ಸರ್‌ ಬಳಕೆಯೊಂದಿಗೆ ಅಂಧರು ಸಹ ಕೃಷಿ ಕಾಯಕದಲ್ಲಿ ತೊಡಗಬಹುದಾಗಿದೆ ಎಂಬುದನ್ನು ರೂಪಿಸಿದ್ದಾರೆ. ಅತ್ಯಂತ ಕಡಿಮೆ ದರದಲ್ಲಿ ದೊರೆಯುವ ವೆಂಟಿಲೇಟರ್‌ ಅಭಿವೃದ್ಧಿ ಪಡಿಸಿದ್ದಾರೆ. ಜೋಳ ಕೊಯ್ಲು ಯಂತ್ರ ಅಭಿವೃದ್ಧಿ ಪಡಿಸಿದ್ದಾರೆ. ಬೆಳೆಗಳಿಗೆ ಬರುವ ಹಕ್ಕಿಗಳನ್ನು ಓಡಿಸುವ ಯಂತ್ರ ಅಭಿವೃದ್ಧಿ ಪಡಿಸಿದ್ದಾರೆ.

ಸಾಂಪ್ರದಾಯಿಕ ಸಲಕರಣೆಗಳನ್ನು ಮರೆತಿದ್ದು, ಮತ್ತೆ ನಮ್ಮ ಅಜ್ಜಿಯರ ಸಂಪ್ರದಾಯದ ರುಚಿ ರುಚಿಯ ಪದಾರ್ಥಗಳು ದೊರೆಯುವ ನಿಟ್ಟಿನಲ್ಲಿ ತಂತ್ರಜ್ಞಾನ ಸ್ಪರ್ಶ ನೀಡುವ ಕೆಲಸ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ರೈತರು ತಾವೇ ಮನೆಯಲ್ಲಿ ಸಿರಿಧಾನ್ಯಗಳನ್ನು ಸಂಸ್ಕರಣೆ ಮಾಡುವ ಎರಡು-ಮೂರು ಕೆಜಿ ಸಾಮರ್ಥ್ಯದ ಸಿರಿಧಾನ್ಯ ಸಂಸ್ಕರಣೆ ಯಂತ್ರ ಅಭಿವೃದ್ಧಿ ಪಡಿಸುವ ಕಾರ್ಯದಲ್ಲಿ ತೊಡಗಿದ್ದೇನೆ. –ಗಿರೀಶ ಭದ್ರಗೊಂಡ, ಸಂಸ್ಥಾಪಕ, ಕೃಷಿ ತರಂಗ ಫಾರ್ಮ್ಟೆಕ್‌ ಎಲ್‌ಎಲ್‌ಪಿ

ರುಚಿ ತಗ್ಗೊದಿಲ್ಲ-ಜನರ ಕಿಸೆಗೂ ಭಾರವಾಗಲ್ಲ : ಮನೆಗಳಲ್ಲಿ ಅಲ್ಪ ಸ್ವಲ್ಪ ಪ್ರಮಾಣದ ಮಸಾಲೆ, ಚಟ್ನಿ ಪುಡಿ ಮಾಡಿಕೊಳ್ಳಬೇಕಾದರೆ ಮಿಕ್ಸಿ ಬಳಸಲಾಗುತ್ತಿದೆ. ಮಿಕ್ಸಿ ಬಳಸಿದರೆ ಶಾಖದಿಂದಾಗಿ ರುಚಿ ಕುಗ್ಗಲಿದೆ. ಕೆಲ ಪೋಷಕಾಂಶಗಳು ನಷ್ಟವಾಗುವ ಸಾಧ್ಯತೆಯೂ ಇರುತ್ತದೆ. ಆದರೆ, ಈ ಯಂತ್ರದಿಂದ ಚಟ್ನಿ ಪುಡಿ ತಯಾರಿಸಿದರೆ ಸಾಂಪ್ರದಾಯಿಕ ರುಚಿ ದೊರೆಯಲಿದೆ. 2,000-2,500 ರೂ. ಒಳಗೆ ಯಂತ್ರವನ್ನು ಜನರ ಕೈಗಿಡಲು ಸಂಸ್ಥೆ ಯೋಜಿಸಿದೆ.

ಅಕ್ಷರಮಾಲೆ ಚಕ್ಕುಲಿ : ಪ್ರಸ್ತುತ ಚಕ್ಕುಲಿಯನ್ನು ಗೋಲಾರದಲ್ಲಿತಯಾರಿಸಲಾಗುತ್ತಿದೆ. ಒಂದಿಷ್ಟು ವಿಭಿನ್ನ ರೀತಿಯಲ್ಲಿ ಇರಲಿ ಎಂದು ಆಂಗ್ಲ ಅಕ್ಷರಮಾಲೆ ರೂಪದ ಚಕ್ಕಲಿಗಳನ್ನು ತಯಾರಿಸುವ ಸಾಧನ ತಯಾರಿಸಲಾಗುತ್ತಿದೆ. ಇದು ಮಕ್ಕಳಿಗೆ ಚಕ್ಕುಲಿ ತಿನ್ನುವ ಆಕರ್ಷಣೆ ಜತೆಗೆ ಅಕ್ಷರಮಾಲೆ ನೆನಪಿಸುವ ಇಲ್ಲವೆ ಕಲಿಸುವ ಕಾರ್ಯ ಮಾಡಲಿದೆ. ಅದಕ್ಕಾಗಿ ಇದನ್ನು ಕೈಗೊಳ್ಳಲು ಮುಂದಾಗಿದ್ದಾಗಿ ಸಂಸ್ಥೆ ತಿಳಿಸಿದೆ

 

-ಅಮರೇಗೌಡ ಗೋನವಾರ

ಟಾಪ್ ನ್ಯೂಸ್

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.