ದುರಂತ ಸಾವು ಕಂಡ ಸ್ನೇಹಿತರ ಸಾಮೂಹಿಕ ಅಂತಿಮ ಸಂಸ್ಕಾರ


Team Udayavani, Nov 13, 2019, 10:22 AM IST

huballi-tdy-2

ಹುಬ್ಬಳ್ಳಿ: ದೇವರ ಗುಡಿಹಾಳದ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದ ನಾಲ್ವರು ಸ್ನೇಹಿತರ ಸಾಮೂಹಿಕ ಅಂತ್ಯಕ್ರಿಯೆ ಮಂಗಳವಾರ ಮಧ್ಯಾಹ್ನ 2:30ರ ಸುಮಾರಿಗೆ ಇಲ್ಲಿನ ತೊರವಿ ಹಕ್ಕಲದ ಖಬರ್‌ಸ್ಥಾನದಲ್ಲಿ ನೆರವೇರಿತು.

ಕಿಮ್ಸ್‌ನಲ್ಲಿ ಬೆಳಗ್ಗೆ 10 ಗಂಟೆ ಸುಮಾರಿಗೆ ಮೃತರ ಮರಣೋತ್ತರ ಪರೀಕ್ಷೆ ನಡೆಯಿತು. ನಂತರಮೃತದೇಹಗಳನ್ನು 2 ಆಂಬ್ಯುಲೆನ್ಸ್‌ ಗಳಲ್ಲಿ ಗೂಡ್ಸ್‌ಶೆಡ್‌ ರಸ್ತೆ ಗಣೇಶಪೇಟೆಯ ಕುಲಕರ್ಣಿ ಹಕ್ಕಲಕ್ಕೆ ತೆಗೆದುಕೊಂಡು ಹೋಗುತ್ತಿದ್ದಂತೆ ಕುಟುಂಬಸ್ಥರ, ಸಂಬಂಧಿಕರ, ಹಿತೈಷಿಗಳ ಹಾಗೂ ಓಣಿಯ ನಿವಾಸಿಗಳ ಆಕ್ರಂದನ ಹೇಳತೀರದಾಗಿತ್ತು. ಗಣೇಶಪೇಟೆಯ ಬಡೇ ಮಸೀದಿ ಬಳಿ ಮಧ್ಯಾಹ್ನ 1:30 ಗಂಟೆ ಸುಮಾರಿಗೆ ಸಾಮೂಹಿಕ ಪ್ರಾರ್ಥನೆ ನಂತರ ನಾಲ್ವರ ಶವಗಳನ್ನು ತೊರವಿ ಹಕ್ಕಲದ ಖಬರಸ್ಥಾನಕ್ಕೆ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಮೃತರ ನಿವಾಸಕ್ಕೆ ಶಾಸಕ ಪ್ರಸಾದ ಅಬ್ಬಯ್ಯ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಅಂಜುಮನ್‌-ಎ-ಇಸ್ಲಾಂಸಂಸ್ಥೆ ಅಧ್ಯಕ್ಷ ಮಹಮ್ಮದಯುಸೂಫ ಸವಣೂರ, ಉಪಾಧ್ಯಕ್ಷ ಅಲ್ತಾಫ ಕಿತ್ತೂರ, ಖಜಾಂಚಿ ದಾದಾಹೈಯಾತ್‌ ಖೈರಾತಿ ಮೊದಲಾದವರು ಭೇಟಿಕೊಟ್ಟು ಕುಟುಂಬದವರಿಗೆ ಸಾಂತ್ವನ ಹೇಳಿದರು. ಮಡುಗಟ್ಟಿದ ದುಃಖ: ಕುಲಕರ್ಣಿ ಹಕ್ಕಲದಲ್ಲಿ ಒಂದೇ ವಯೋಮಾನದ ಸ್ನೇಹಿತರು ನೀರಿನಲ್ಲಿ ಮುಳುಗಿ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಸೋಮವಾರ ಸಂಜೆಯಿಂದಲೇ ಓಣಿಯಲ್ಲಿ ನೀರವ ಮೌನ ಆವರಿಸಿತ್ತು. ಎಲ್ಲರಲ್ಲೂ ದುಃಖ ಮಡುಗಟ್ಟಿತ್ತು. ಮೃತರ ಕುಟುಂಬದವರು, ಸಂಬಂಧಿಕರು ಮಾತ್ರವಲ್ಲದೆ ಅಕ್ಕ-ಪಕ್ಕದ ನಿವಾಸಿಗಳು ಹಾಗೂ ಓಣಿಯಲ್ಲಿನ ಜನರೆಲ್ಲ ಅದರಲ್ಲೂ ಮಹಿಳೆಯರು ಮೃತರ ಬಗ್ಗೆ ನೆನೆದುಕೊಂಡು ಕಣ್ಣೀರಿಡುತ್ತಿದ್ದರು.

ಎದೆಯೆತ್ತರಕ್ಕೆ ಬೆಳೆದ ಮಕ್ಕಳು ಬಿಟ್ಟು ಹೋದರಲ್ಲ ಎಂದು ರೋದಿಸುತ್ತಿದ್ದುದು ಮನಕಲಕುವಂತಿತ್ತು. ಸ್ವಯಂ ಪ್ರೇರಿತವಾಗಿ ಅಂಗಡಿಗಳನ್ನು ಬಂದ್‌ ಮಾಡಲಾಗಿತ್ತು.

ಘಟನೆ ನಡೆದಿದ್ದು ಹೇಗೆ?:  ಗಣೇಶಪೇಟೆ ಕುಲಕರ್ಣಿ ಹಕ್ಕಲದ ಏಳು ಸ್ನೇಹಿತರು ಈದ್‌ ಮಿಲಾದ್‌ ಮರುದಿನ ಸೋಮವಾರ ಮಧ್ಯಾಹ್ನ ದೇವರ ಗುಡಿಹಾಳಕ್ಕೆ ಊಟಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ಮಧ್ಯಾಹ್ನ 3:30 ಗಂಟೆ ಸುಮಾರಿಗೆ ಸಯ್ಯದ ಸುಬಾನ್‌ ಬಿಲಾಲ ಬುರಬುರಿ (18) ಕೆರೆಗೆ ಇಳಿದಾಗ ಅಲ್ಲಿ ತೆಗೆಯಲಾಗಿದ್ದ ಗುಂಡಿಯಲ್ಲಿ ಬಿದ್ದು ಈಜುಬಾರದೆ ನೀರಿನಲ್ಲಿ ಮುಳುಗುತ್ತಿದ್ದ. ಇದನ್ನು ನೋಡಿದ ಸ್ನೇಹಿತರಾದ ಸೊಹೆಲ್‌ಅಹ್ಮದ ಮುಸ್ತಾಕಅಲಿ ಸಯ್ಯದ (17), ಮಹ್ಮದಆಯನ್‌ ಮೌಲಾಸಾಬ ಉಣಕಲ್‌ (17), ಸುಬಾನ್‌ ಅಹ್ಮದ ಹೊನ್ಯಾಳ (18) ಒಬ್ಬರನ್ನೊಬ್ಬರು ರಕ್ಷಿಸಲು ನೀರಿಗೆ ಇಳಿದಾಗ ಅವರು ಸಹ ಗುಂಡಿಗೆ ಬಿದ್ದು ಈಜು ಬಾರದೆ ಮೃತಪಟ್ಟಿದ್ದಾರೆ.

ಇವರೆಲ್ಲರ ಮೃತದೇಹಗಳನ್ನು ಸಂಜೆ 6 ಗಂಟೆ ಸುಮಾರಿಗೆ ಗ್ರಾಮಸ್ಥರು, ಅಗ್ನಿಶಾಮಕ ದಳ ಸಿಬ್ಬಂದಿ, ಗ್ರಾಮೀಣ ಠಾಣೆ ಪೊಲೀಸರು ಹೊರಕ್ಕೆ ತೆಗೆದಿದ್ದರು. ಇವರೊಂದಿಗೆ ತೆರಳಿದ್ದ ಇನ್ನುಳಿದ ಮೂವರು ಸ್ನೇಹಿತರಾದ ಇಜಾಸ್‌ ಶೇಖ, ಜುನೇದ ಕದಂಪುರ, ಸೊಹೆಲ್‌ ಶಿಕಾರಿ ಬದುಕುಳಿದಿದ್ದಾರೆ.

 

13 ವರ್ಷಗಳ ಬಳಿಕ ಹುಟ್ಟಿದ್ದ: ಆಟೋ ರಿಕ್ಷಾ ಚಾಲಕರಾದ ಬಿಲಾಲ ಬುರಬುರಿ ದಂಪತಿಗೆ ಸಯ್ಯದ ಸುಬಾನ್‌ 13 ವರ್ಷಗಳ ನಂತರ ಹುಟ್ಟಿದ್ದ. ಈತ ಮಗು ಇದ್ದಾಗಲೇ ಡೆಂಘೀಯಿಂದ ಬಳಲುತ್ತಿದ್ದ. ಆಗ ಬಿಲಾಲ ದಂಪತಿಯು ಅವನ ಚಿಕಿತ್ಸೆಗೆ ಸಾಕಷ್ಟು ಖರ್ಚು ಮಾಡಿ ಉಳಿಸಿಕೊಂಡು ಮಗನ ಮರುಜನ್ಮ ಪಡೆದಿದ್ದರು. ನಂತರ ಅವನನ್ನು ಮುದ್ದಿನಿಂದ ಸಾಕಿದ್ದರು. ಮುಂದಿನ ವರ್ಷ ಡಿಪ್ಲೊಮಾ ಕಲಿಸಬೇಕೆಂಬ ವಿಚಾರದಲ್ಲಿದ್ದರು. ಅಷ್ಟರೊಳಗೆ ಇಹಲೋಕ ತ್ಯಜಿಸಿಬಿಟ್ಟ. ವೃದ್ಧ ಬಿಲಾಲ ದಂಪತಿಗೆ ಅವನೊಬ್ಬನೇ ಆಸರೆಯಾಗಿದ್ದ ಎಂದು ಆಸಿಫ್‌ ಬಳ್ಳಾರಿ ಖೇದ ವ್ಯಕ್ತಪಡಿಸಿದರು.

ಪಬ್ಜಿ ಆಡಲು ಹೇಗೆ ಸಾಧ್ಯ?: ದೇವರ ಗುಡಿಹಾಳ ಕೆರೆಯಲ್ಲಿ ಮುಳುಗಿ ಮೃತಪಟ್ಟ ಯುವಕರಿಗೆ ಈಜಲು ಬರುತ್ತಿರಲಿಲ್ಲ. ಅಂಥವರು ಪಬ್ಜಿ ಗೇಮ್‌ ಆಡಲು ಹೇಗೆ ಸಾಧ್ಯ? ಓರ್ವ ನೀರಿನಲ್ಲಿ ಮುಳುಗಿದ್ದನ್ನು ಕಂಡು ಇನ್ನುಳಿದ ಮೂವರು ರಕ್ಷಣೆಗೆ ಹೋದಾಗ ಮೃತಪಟ್ಟಿದ್ದಾರೆ. ಏಳು ಸ್ನೇಹಿತರು ಕೂಡಿ ಹೋದವರಲ್ಲಿ ಯಾರ ಜನ್ಮದಿನಾಚರಣೆಯೂ ಇರಲಿಲ್ಲ. ಓಣಿಯಲ್ಲಿ ಓರ್ವನ ಜನ್ಮದಿನ ಮುಗಿಸಿಕೊಂಡು, ಊಟ ಮಾಡಿಕೊಂಡು ಹೋಗಿದ್ದರು. ನಾಲ್ವರ ಶವಗಳು ಒಂದೇ ಬದಿ ಸಿಕ್ಕಿವೆ ಎಂದು ಗ್ರಾಮೀಣ ಠಾಣೆಯ ಇನ್‌ಚಾರ್ಜ್‌ ಇನ್‌ಸ್ಪೆಕ್ಟರ್‌ ಜಯಂತ ಗವಳಿ “ಉದಯವಾಣಿ’ಗೆ ತಿಳಿಸಿದರು.

10 ಲಕ್ಷ ಪರಿಹಾರ, ಮನೆ ಕೊಡಿ:  ನಾಲ್ವರು ಯುವಕರು ಮೃತಪಟ್ಟರೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ, ಜಿಲ್ಲಾಧಿಕಾರಿ, ತಹಶೀಲ್ದಾರ್‌ ಯಾರೂ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಬರಲಿಲ್ಲ. ಅವರು ಅಲ್ಪಸಂಖ್ಯಾತರ ಕಡೆಗೂ ಗಮನ ಹರಿಸಲಿ. ಮೃತರ ಕುಟುಂಬದವರು ಕಡುಬಡವರಾಗಿದ್ದು, ಸರಿಯಾದ ಮನೆ ಸಹ ಇಲ್ಲ. ಸರಕಾರ ಮೃತರ ಕುಟುಂಬದವರಿಗೆ 10 ಲಕ್ಷ ರೂ. ಪರಿಹಾರ ನೀಡಬೇಕು. ಆಶ್ರಯ ಯೋಜನೆಯಡಿ ಮನೆ ಕೊಡಬೇಕು. ಅಂಜುಮನ್‌ ಸಂಸ್ಥೆಯಿಂದಲೂ ಮೃತರ ಕುಟುಂಬದವರಿಗೆ ಪರಿಹಾರ ನೀಡಲು ಯೋಜಿಸಲಾಗುವುದು ಎಂದು ಅಂಜುಮನ್‌-ಎ-ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಮಹಮ್ಮದಯುಸುಫ್‌ ಸವಣೂರ ಆಗ್ರಹಿಸಿದರು.

ನೀರಿನಲ್ಲಿ ಮುಳುಗಿ ನಾಲ್ವರು ಸ್ನೇಹಿತರು ಮೃತಪಡುವ ಮೂಲಕ ಕುಲಕರ್ಣಿ ಹಕ್ಕಲದಲ್ಲಿ ದೊಡ್ಡ ದುರಂತವಾಗಿದೆ. ಮೃತರ ಕುಟುಂಬದವರು ಕಡುಬಡವರಾಗಿದ್ದಾರೆ. ಅವರಿಗೆ ವಿಶೇಷ ಪರಿಹಾರ ನಿಧಿ ನೀಡುವಂತೆ ಮುಖ್ಯಮಂತ್ರಿ ಬಳಿ ಮನವಿ ಮಾಡುವೆ. ನನ್ನಿಂದಲೂ ಪರಿಹಾರ ನೀಡುವ ಕಾರ್ಯ ಮಾಡುವೆ. ಪ್ರಸಾದ ಅಬ್ಬಯ್ಯ, ಹು-ಧಾ ಪೂರ್ವ ಕ್ಷೇತ್ರದ ಶಾಸಕ

ಟಾಪ್ ನ್ಯೂಸ್

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ

Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ

Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.