ಎರಡು ದಿನ ವ್ಯಾಪಾರ-ವಹಿವಾಟು ಬಂದ್‌


Team Udayavani, Aug 15, 2017, 11:57 AM IST

hub6.jpg

ಹುಬ್ಬಳ್ಳಿ: ಇ-ಪಾವತಿ ರದ್ದತಿಗೆ ಒತ್ತಾಯಿಸಿ ಮುಷ್ಕರವನ್ನು ಇನ್ನಷ್ಟು ತೀವ್ರಗೊಳಿಸಲು ಹಾಗೂ ಎಪಿಎಂಸಿಗೆ ಒಳಪಡುವ ಎಲ್ಲ ವ್ಯಾಪಾರಸ್ಥರನ್ನು ಒಗ್ಗೂಡಿಸಿ ವಾರದೊಳಗೆ ರಾಜ್ಯಾದ್ಯಂತ ಎರಡು ದಿನಗಳ ಕಾಲ ವ್ಯಾಪಾರ-ವಹಿವಾಟು ಸಂಪೂರ್ಣ ಬಂದ್‌ ಮಾಡಲು ಎಪಿಎಂಸಿ ವರ್ತಕರು ನಿರ್ಧರಿಸಿದರು. ಸೋಮವಾರ ಇಲ್ಲಿನ ಜೆ.ಸಿ. ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ (ಕೆಸಿಸಿಐ) ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಎಪಿಎಂಸಿಯ ವರ್ತಕರು ಒಕ್ಕೊರಲಿನ ನಿರ್ಣಯ ಕೈಗೊಂಡರು. 

ಎಪಿಎಂಸಿ ಕ್ರಿಯಾ ಸಮಿತಿಯ ಉಪಾಧ್ಯಕ್ಷ ವಿ.ಪಿ. ಲಿಂಗನಗೌಡರ, ಬ್ಯಾಡಗಿಯ ಜಗದೀಶಗೌಡ ಪಾಟೀಲ ಮಾತನಾಡಿ, ಸರಕಾರದೊಂದಿಗೆ ನಡೆದ ಮಾತುಕತೆ ವೇಳೆ ಮುಖ್ಯ ಕಾರ್ಯದರ್ಶಿಯವರು ಸ್ಪಂದಿಸಿದ್ದರಾದರೂ, ಮಾಜಿ ಶಾಸಕ ಡಿ.ಆರ್‌. ಪಾಟೀಲರು ವ್ಯತಿರಿಕ್ತ ಹೇಳಿಕೆ ನೀಡಿ, ಮಾತುಕತೆ ವಿಫ‌ಲಗೊಳಿಸಿದರು. ರೈತರ ಹೆಸರಿನಲ್ಲಿ  ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಂದಾಗಿ ಸಭೆ ವಿಫಲವಾಯಿತು ಎಂದರು.

ಸರ್ಕಾರಕ್ಕೆ ಬಿಸಿ ಮುಟ್ಟಿಸೋಣ: ರಾಣಿಬೆನ್ನೂರಿನ ನೀಲೇಶ, ಬ್ಯಾಡಗಿಯ ದುಂಡಪ್ಪ ಕಬ್ಬೂರ, ಹುಬ್ಬಳ್ಳಿಯ ಬಸವರಾಜ ಯಕಲಾಸಪುರ, ಗದುಗಿನ ಕಾಂತಿಲಾಲ, ರಾಜು ಕುರಡಗಿ, ರಾಜು ಗುಡಿಮನಿ, ಹಾವೇರಿಯ ಶೇಖಪ್ಪ ಗಚ್ಚಿನ, ರಾಣಿಬೆನ್ನೂರಿನ ಬಸವರಾಜ ಪಾಟೀಲ, ಮುಂಡರಗಿಯ ಕೊಟ್ರೇಶ ಅಂಗಡಿ, ಗಜೇಂದ್ರಗಡದ ವರ್ತಕರು ಮಾತನಾಡಿ, ಇ-ಪಾವತಿ ರದ್ದಾಗುವ ವರೆಗೂ ವರ್ತಕರ ನಡುವೆ ಒಡಕು ಆಗದಂತೆ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡೋಣ.

ಎಪಿಎಂಸಿ ಕಾರ್ಮಿಕರು, ಹಮಾಲರು, ಗುಮಾಸ್ತರು, ರೈತರನ್ನು ಸೇರಿಸಿ ಹೋರಾಟ ತೀವ್ರಗೊಳಿಸೋಣ. ನಮ್ಮ ಭಾಗದ ಜನಪ್ರತಿನಿಧಿಗಳಿಗೂ ಹೋರಾಟದ ಬಗ್ಗೆ ಮನವರಿಕೆ ಮಾಡೋಣ. ಯಶಸ್ವಿಯಾಗುವವರೆಗೂ ಹೋರಾಟ ಮಾಡೋಣ, ಕಾಯ್ದೆ ಜಾರಿಗೆ ತಂದವರ ಮನೆ ಎದುರು ಧರಣಿ ನಡೆಸೋಣ. ಬೇರೆ ಬೇರೆ ದಿನಗಳಂದು ನಗರಗಳ ಬಂದ್‌ಗೆ ಕರೆ ಕೊಡೋಣ. ಎಲ್ಲ ಸರಕುಗಳನ್ನು ಎರಡು ದಿನ ಬಂದ್‌ ಮಾಡಿ ಸರಕಾರಕ್ಕೆ ಬಿಸಿ ಮುಟ್ಟಿಸೋಣ ಎಂಬ ಸಲಹೆ ನೀಡಿದರು. 

ಗದುಗಿನ ಬಿ.ಎಸ್‌. ದೇಸಾಯಿಗೌಡ್ರ ಮಾತನಾಡಿ, ರೇಮ್ಸ್‌ ನಮಗೆ ಬೇಡವೇ ಬೇಡ. ದಲ್ಲಾಳರು, ಖರೀದಿದಾರರು ಮತ್ತು ರೈತರ ನಡುವಿನ ವಹಿವಾಟಿನ ಪಾಲನ್ನು ಹಂಚಿಕೆ ಮಾಡಿಕೊಡಲು ಅದೇಕೆ ನಮಗೆ ಬೇಕು? ಕಿರಾಣಿ, ಕಾಯಿಪಲ್ಲೆ, ಕಾಳು-ಕಡಿ ವ್ಯಾಪಾರಸ್ಥರ ಬೆಂಬಲದೊಂದಿಗೆ ಗದಗ ಬಂದ್‌ ಮಾಡಲು  ಚಿಂತನೆ ನಡೆಸಲಾಗಿದೆ ಎಂದರು.

ಮಲ್ಲಿಕಾರ್ಜುನ ಮನೆ ಮುಂದೆ ಧರಣಿ: ದುಂದೂರ ಮಾತನಾಡಿ, ಇ-ಪಾವತಿ ವ್ಯವಸ್ಥೆಯಲ್ಲಿ ಸರಕು ಖರೀದಿಸಿದರೆ ಒಂದೇ ದಿನ ಹಣ ಪಾವತಿ ಮಾಡಲು ಬರುವುದಿಲ್ಲವೆಂಬುದು ಇದನ್ನು ಜಾರಿಗೊಳಿಸಿದವರಿಗೂ ಗೊತ್ತಿದೆ, ಅಧಿಕಾರಿಗಳಿಗೂ ಗೊತ್ತಿದೆ. ಆದ್ದರಿಂದ ಇ-ಪಾವತಿ ರದ್ದಾಗುವವರೆಗೂ ಎಪಿಎಂಸಿ ಮಾರುಕಟ್ಟೆ ಸಚಿವ ಮಲ್ಲಿಕಾರ್ಜುನ ಅವರ ದಾವಣಗೆರೆಯ ಮನೆ ಎದುರು ಪ್ರತಿ ಜಿಲ್ಲೆಯಿಂದ ಒಂದೊಂದು ದಿನ ಧರಣಿ ನಡೆಸಬೇಕು ಎಂದು ಸಲಹೆ ಕೊಟ್ಟರು.

ಕೆಸಿಸಿಐ ಅಧ್ಯಕ್ಷ ರಮೇಶ ಪಾಟೀಲ ಸ್ವಾಗತಿಸಿದರು. ಚನ್ನು ಹೊಸಮನಿ, ಶಿವಶಂಕರಪ್ಪ ಮೂಗಬಸ್ತ, ಸುರೇಶಗೌಡ ಪಾಟೀಲ ಸೇರಿದಂತೆ ಗದಗ, ಬ್ಯಾಡಗಿ, ಹಾವೇರಿ, ಹೊ ಳೆಆಲೂರ, ಮಹಾಲಿಂಗಪುರ, ರಾಣಿ ಬೆ ನ್ನೂರ, ದಾವಣಗೆರೆ, ವಿಜಯಪುರ, ಗದಗ, ಬೈಲಹೊಂಗಲ, ಮುಂಡರಗಿ, ಗಜೇಂದ್ರಗಡ, ನರಗುಂದ, ಹುಬ್ಬಳ್ಳಿ ಹಾಗೂ ವಿವಿಧ ವರ್ತಕರ ಸಂಘ- ಸಂಸ್ಥೆಗಳ ಪ್ರತಿನಿಧಿಗಳು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.   

ಟಾಪ್ ನ್ಯೂಸ್

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Ireland postponed Aussie series

Dublin; ಆಸೀಸ್‌ ಸರಣಿ ಮುಂದೂಡಿದ ಐರ್ಲೆಂಡ್‌

“Will not play T20 World Cup for West Indies”: Sunil Narine

T20 Cricket: “ವಿಂಡೀಸ್‌ ಪರ ಟಿ20 ವಿಶ್ವಕಪ್‌ ಆಡಲ್ಲ’: ಸುನೀಲ್‌ ನಾರಾಯಣ್‌ ಸ್ಪಷ್ಟ ನುಡಿ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

Shotgun

Shotgun ಶೂಟಿಂಗ್‌ ಅರ್ಹತಾ ಸುತ್ತಿನಲ್ಲಿ ಕರಣ್‌: ವಿವಾದ

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Ireland postponed Aussie series

Dublin; ಆಸೀಸ್‌ ಸರಣಿ ಮುಂದೂಡಿದ ಐರ್ಲೆಂಡ್‌

“Will not play T20 World Cup for West Indies”: Sunil Narine

T20 Cricket: “ವಿಂಡೀಸ್‌ ಪರ ಟಿ20 ವಿಶ್ವಕಪ್‌ ಆಡಲ್ಲ’: ಸುನೀಲ್‌ ನಾರಾಯಣ್‌ ಸ್ಪಷ್ಟ ನುಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.