ಸೌಲಭ್ಯ ಸದುಪಯೋಗವಾಗಲಿ
Team Udayavani, Jul 28, 2018, 4:11 PM IST
ಸವದತ್ತಿ: ನಿರಂತರ ಪರಿಶ್ರಮದಿಂದ ಅಭ್ಯಸಿಸುವ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಅತ್ಯುತ್ತಮ ಸೌಕರ್ಯಗಳಿವೆ. ಅವುಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಿ ಎಂದು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಎಂ.ಬಿ.ಹೆಗ್ಗಣವರ ಹೇಳಿದರು.
ಕೆಎಲ್ಇ ಸಂಸ್ಥೆಯ ಸ್ಥಳೀಯ ಎಸ್.ವಿ.ಎಸ್. ಬೆಳ್ಳುಬ್ಬಿ ಮಹಾವಿದ್ಯಾಲಯದಲ್ಲಿ ಬಿ.ಎ. ಮತ್ತು ಬಿ.ಕಾಂ. ಪದವಿಯ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಿದ ಪುನಃಶ್ಚೇತನ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಮಹಾವಿದ್ಯಾಲಯದ ವಿವಿಧ ವಿಭಾಗಗಳ ಮತ್ತು ಘಟಕಗಳ ಮುಖ್ಯಸ್ಥ ಪ್ರೊ| ಎಂ.ಎ. ಡೊಂಬರ್ ಅವರು ಶಿಸ್ತು ಪಾಲನೆ ಮತ್ತು ವಾಣಿಜ್ಯ ಸಂಘದ ಕುರಿತು, ಡಾ| ಎನ್.ಆರ್. ಸವತೀಕರ್ ಅವರು ಸರ್ಕಾರದಿಂದ ಮತ್ತು ಸ್ಥಳೀಯ ಸಂಸ್ಥೆ ಹಾಗೂ ದಾನಿಗಳಿಂದ ದೊರೆಯುವ ವಿದ್ಯಾರ್ಥಿ ವೇತನದ ಮಾಹಿತಿ ನೀಡಿದರು.
ಪ್ರೊ| ಕೆ. ರಾಮರೆಡ್ಡಿಯವರು ಕಾಲೇಜು ವಾರ್ಷಿಕ ಪತ್ರಿಕೆ ಕುರಿತು, ಡಾ| ಅರುಂಧತಿ ಬದಾಮಿ ಅವರು ಮಹಿಳಾ ಸಬಲೀಕರಣ ಘಟಕದ ಕುರಿತು, ಪ್ರೊ| ಎಂ.ಜೆ.ಹಡಗಲಿ ಅವರು ಪರಂಪರೆ ಕೂಟ ಮತ್ತು ಯುಥ್ ರೆಡ್ಕ್ರಾಸ್ ಯುನಿಟ್ ಕುರಿತು, ಪ್ರೊ| ಬಿ.ಎಸ್. ಬಳಿಗೇರ ಪಾಟೀಲ ಅವರು ಆಟೋಟ ಹಾಗೂ ಎನ್.ಎಸ್.ಎಸ್. ಮತ್ತು ಎನ್.ಸಿ.ಸಿ. ಕುರಿತು ಪ್ರೊ| ಎಂ.ಸಿ.ಹಾದಿಮನಿ ಹಾಗೂ ಗ್ರಂಥಾಲಯದ ಕುರಿತು ಪ್ರೊ| ಕವಿತಾ ರಂಗನಗೌಡರ ಅವರು ಮಾಹಿತಿ ನೀಡಿದರು. ಪ್ರಾಚಾರ್ಯ ಡಾ| ಎಸ್.ಸಿ. ಮಠಪತಿ ಅಧ್ಯಕ್ಷತೆ ವಹಿಸಿದ್ದರು. ಡಾ| ಅರುಂಧತಿ ಬದಾಮಿ ಸ್ವಾಗತಿಸಿದರು. ಪ್ರೊ| ಮಂಜುನಾಥ ಚಿಕರೆಡ್ಡಿ ವಂದಿಸಿದರು. ಪ್ರೊ| ಜಿ.ಆರ್. ಬಡಿಗೇರ್ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ