ಮಧುಮೇಹ ನಿಯಂತ್ರಣಕ್ಕೆ ಸಸ್ಯಜನ್ಯ ಥೆರಪಿ
ಮಾತ್ರೆ-ಇನ್ಸುಲಿನ್ಗೆ ಪರ್ಯಾಯವಾಗಿ ನಿರ್ಮಾಣಗೊಂಡ ಮಾರ್ಗ |ಆಹಾರ-ವ್ಯಾಯಾಮವೇ ಆರೋಗ್ಯದ ಗುಟ್ಟು
Team Udayavani, Jul 20, 2019, 9:49 AM IST
ಹುಬ್ಬಳ್ಳಿ: ಮಧುಮೇಹ ನಿಯಂತ್ರಣಕ್ಕೆ ಸಸ್ಯಜನ್ಯ ಥೆರಪಿ ಕುರಿತಾಗಿ ಎಲ್ಐಸಿ ಸಿಬ್ಬಂದಿಗೆ ತರಬೇತಿ.
ಹುಬ್ಬಳ್ಳಿ: ಮಧುಮೇಹ ನಿಯಂತ್ರಣಕ್ಕೆ ಮಾತ್ರೆ, ಇನ್ಸುಲಿನ್ ಪಡೆಯುವುದು ಕಡ್ಡಾಯವಾಗಿದೆ. ಆದರೆ ಇದಕ್ಕೆ ಪರ್ಯಾಯ ಎನ್ನುವಂತೆ ಸಸ್ಯಜನ್ಯ ಆಧಾರಿತ ಆಹಾರ ಸೇವನೆ ಹಾಗೂ ವ್ಯಾಯಾಮದಿಂದ ಮಧುಮೇಹವನ್ನು ಯಾವುದೇ ಮಾತ್ರೆ-ಇನ್ಸುಲಿನ್ ಇಲ್ಲದೆ ನಿಯಂತ್ರಣದಲ್ಲಿಡುವ ಯತ್ನವೊಂದು ಹುಬ್ಬಳ್ಳಿಯಲ್ಲಿ ಕಳೆದ ಒಂದೂವರೆ ವರ್ಷದಿಂದ ಸದ್ದಿಲ್ಲದೆ ನಡೆಯುತ್ತಿದೆ.
ಪುಣೆಯ ಫ್ರೀಡಂ ಫ್ರಾಮ್ ಡಯಾಬಿಟಿಕ್ ಸಂಸ್ಥೆ ಮಾರ್ಗದರ್ಶನದೊಂದಿಗೆ ಇಲ್ಲಿನ ಸ್ಪಿಂಗ್ ಆಫ್ ಹೆಲ್ತ್ ಸಂಸ್ಥೆ ಉತ್ತರ ಕರ್ನಾಟಕದ ಮೊದಲ ಕೇಂದ್ರವನ್ನು ಹುಬ್ಬಳ್ಳಿಯಲ್ಲಿ ಆರಂಭಿಸಿದೆ. ಅನೇಕರು ಇದರ ಪ್ರಯೋಜನ ಪಡೆದು ಮಾತ್ರೆ-ಇನ್ಸುಲಿನ್ ಇಲ್ಲದೆ ಮಧುಮೇಹ ನಿಯಂತ್ರಣದಲ್ಲಿಟ್ಟುಕೊಂಡಿದ್ದಾರೆ. ಈ ಪದ್ಧತಿ ಅನುಕರಣೆ ನಂತರ ಮಧುಮೇಹ ರಿವರ್ಸ್ ಆಗಿದೆ ಎಂಬುದು ಕೆಲವರ ಅಭಿಮತ.
ದೇಹದಲ್ಲಿ ಆಮ್ಲ ವಾತಾವರಣ ಉಂಟಾದರೆ ದೇಹದೊಳಗಿನ ಜೀವಕೋಶಗಳು ಉಬ್ಬಿಕೊಳ್ಳುತ್ತವೆ. ಇದು ಕೂಡ ಮಧುಮೇಹಕ್ಕೆ ಕಾರಣವಾಗಬಹುದಾಗಿದೆ. ಅದೇ ರೀತಿ ಇನ್ಸುಲಿನ್ ಲೈಕ್ ಗ್ರೋಥ್ ಫ್ಯಾಕ್ಟರ್(ಐಜಿಎಫ್), ದೇಹದಲ್ಲಿನ ಕೊಬ್ಬು, ಲಘು ಪೋಷಕಾಂಶಗಳ ಕೊರತೆ, ಲಸಿಕೆ, ಮಾನಸಿಕ ಒತ್ತಡ ಕಾರಣಗಳಿಂದ ಮಧುಮೇಹ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ. ಮಧುಮೇಹ ನಿಯಂತ್ರಣಕ್ಕೆ ಮಾತ್ರೆ-ಇನ್ಸುಲಿನ್ ಅಲ್ಲದೆ ಅನೇಕ ಕ್ರಮಗಳು ಇವೆ. ಅದರಲ್ಲಿ ಸಸ್ಯಜನ್ಯ ಆಧಾರಿತ ಪದ್ಧತಿಯೂ ಒಂದಾಗಿದೆ.
ಪುಣೆಯ ಫ್ರೀಡಂ ಫಾರ್ ಡಯಾಬಿಟಿಕ್ ಕೇಂದ್ರದಿಂದ ತರಬೇತಿ ಪಡೆದು ಹುಬ್ಬಳ್ಳಿಯಲ್ಲಿ ಒಂದೂವರೆ ವರ್ಷದಿಂದ ತರಬೇತಿ ನೀಡುತ್ತಿದ್ದೇನೆ. ಮಧುಮೇಹಕ್ಕೆ ಕಾರಣವಾಗುವ ಅಂಶಗಳನ್ನು ಮನದಟ್ಟು ಮಾಡಿ, ಸಸ್ಯಜನ್ಯ ಆಹಾರ ಹಾಗೂ ವ್ಯಾಯಾಮದಿಂದ ಹೇಗೆ ಮಧುಮೇಹ ನಿಯಂತ್ರಣ ಸಾಧ್ಯ ಎಂಬ ತರಬೇತಿ ನೀಡಲಾಗುತ್ತದೆ. ತರಬೇತಿ ಪಡೆದ ಅನೇಕರು ಮಾತ್ರೆ-ಇನ್ಸುಲಿನ್ ಇಲ್ಲದೆ ಮಧುಮೇಹ ನಿಯಂತ್ರಣದೊಂದಿಗೆ ಜೀವಿಸುತ್ತಿದ್ದಾರೆ.• ವೀರನಾರಾಯಣ ಕುಲಕರ್ಣಿ,ಸ್ಪಿಂಗ್ ಆಫ್ ಹೆಲ್ತ್ ಸಂಸ್ಥಾಪಕ
(ಮಾಹಿತಿಗೆ ಮೊ: 98455 88781)
•ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ
ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ
Loksabha; ಧಾರವಾಡ ಕ್ಷೇತ್ರದ ಅಭ್ಯರ್ಥಿ ಬದಲಾವಣೆಯಿಲ್ಲ: ಯಡಿಯೂರಪ್ಪ ಸ್ಪಷ್ಟನೆ
Pralhad Joshi; ಧಾರವಾಡದ ಬಿಜೆಪಿ ಅಭ್ಯರ್ಥಿ ಬದಲಿಸಬೇಕು: ದಿಂಗಾಲೇಶ್ವರ ಸ್ವಾಮೀಜಿ
Kannada; ಹಿರಿಯ ಸಾಹಿತಿ ಡಾ.ಗುರುಲಿಂಗ ಕಾಪಸೆ ಇನ್ನಿಲ್ಲ: ದೇಹ ದಾನ
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ