ಸಿದ್ಧಾಂತ್-ಸಾನ್ವಿ, ಅರ್ನವ್-ಆಯುಷಿಗೆ ವಿಜಯಮಾಲೆ
Team Udayavani, Jul 7, 2019, 2:11 PM IST
ಧಾರವಾಡ: ಕಾಸ್ಮಸ್ ಕ್ಲಬ್ ಆವರಣದಲ್ಲಿ ನಡೆದ ರಾಜ್ಯಮಟ್ಟದ ರ್ಯಾಕಿಂಗ್ ಟಿಟಿ ಪಂದ್ಯಾವಳಿಯಲ್ಲಿ ವಿಜೇತ ಆಟಗಾರರು.
ಧಾರವಾಡ: ಇಲ್ಲಿನ ಕಾಸ್ಮಸ್ ಕ್ಲಬ್ ಆವರಣದಲ್ಲಿ ನಡೆದಿರುವ ರಾಜ್ಯಮಟ್ಟದ ರ್ಯಾಂಕಿಂಗ್ ಟೇಬಲ್ ಟೆನಿಸ್ ಪಂದ್ಯಾವಳಿಯ 3ನೇ ದಿನವಾದ ಶನಿವಾರದ ಪಂದ್ಯಗಳು ಗಮನ ಸೆಳೆದವು.
ಕೆಡೆಟ್ ಬಾಯ್ಸ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಸಿದ್ಧಾಂತ್ ವಾಸನ್ 3-2 ಅಂಕಗಳಿಂದ ತೇಶಬ್ ಅವರನ್ನು ಮಣಿಸಿದರೆ ಇದಕ್ಕೂ ಮುನ್ನ ನಡೆದ ಮೊದಲ ಸೆಮಿಸ್ನಲ್ಲಿ ತೇಶಬ್ ಕೆ. ಆಯುಶ್ನನ್ನು 3-2 ರಿಂದ, 2ನೇ ಸೆಮಿಸ್ನಲ್ಲಿ ಸಿದ್ಧಾಂತ್ ವಾಸನ್ ಅವರು ಶೇಶಾಂತ್ ರಾಮಸ್ವಾಮಿ ಅವರನ್ನು 3-0 ಅಂಕಗಳಿಂದ ಮಣಿಸಿ ಫೈನಲ್ ಪ್ರವೇಶ ಮಾಡಿದ್ದರು.
ಮಿನಿ ಕೆಡೆಟ್ ಗಲ್ಸ್ರ್ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಆಯುಷಿ ಬಾಲಕೃಷ್ಣಾ ಘೋಡ್ಸೆ, ಸುಮೇಧಾ ಭಟ್ ಅವರನ್ನು 3-1 ಅಂಕಗಳಿಂದ ಮಣಿಸಿದರು. ಇದಕ್ಕೂ ಮುನ್ನ ನಡೆದ ಮೊದಲ ಸೆಮಿಸ್ನಲ್ಲಿ ಆಯುಷಿ, ಕೈರಾ ಬಾಳಿಗಾ ಅವರನ್ನು 3-2ರಿಂದ, 2ನೇ ಸೆಮಿಸ್ನಲ್ಲಿ ಸುಮೇಧಾ, ಸ್ಮತಿ ಸುದರ್ಶನ ಅವರನ್ನು 3-1 ಅಂಕಗಳಿಂದ ಸೋಲಿಸಿದರು.
ಮಿನಿ ಕೆಡೆಟ್ ಬಾಯ್ಸ ಸಿಂಗಲ್ಸ್ನ ಫೈನಲ್ ಪಂದ್ಯದಲ್ಲಿ ಅರ್ನವ್ ಎನ್., ಅಥರ್ವ ನವರಂಗೆ ಅವರನ್ನು 3-2 ಅಂಕಗಳಿಂದ ಸೋಲಿಸಿದರೆ ಫೈನಲ್ಗೆ ಪ್ರವೇಶಿಸಲು ನಡೆದ ಮೊದಲ ಸೆಮಿಸ್ನಲ್ಲಿ ಅಥರ್ವ, ಸಿದ್ಧನಾಥ ಧಾರಿವಾಲ್ ಅವರನ್ನು 3-0 ಹಾಗೂ 2ನೇ ಸೆಮಿಸ್ನಲ್ಲಿ ಅರ್ನವ್, ವೇದಾಂತ ವಶಿಷ್ಟ ಅವರನ್ನು 3-0 ಅಂಕಗಳಿಂದ ಮಣಿಸಿದರು.
ಕೆಡೆಟ್ ಗಲ್ಸ್ರ್ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಸಾನ್ವಿ ವಿಶಾಲ ಮಾಂಡೇಕರ ಅವರು ರುತು ಪಂಡಿತ ಅವರನ್ನು 3-0 ಅಂಕಗಳಿಂದ ಸೋಲಿಸಿದರು. ಮೊದಲ ಸೆಮಿಸ್ನಲ್ಲಿ ಸಾನ್ವಿ, ಪ್ರಣವಿ ಎಚ್. ಅವರನ್ನು 3-2ರಿಂದ, ರುತು ಅವರು ನೀತಿ ಅಗರವಾಲ್ ಅವರನ್ನು 3-2ರಿಂದ ಸೋಲಿಸಿದ್ದರು. ಜೂನಿಯರ್ಸ್ ಆಟಗಳು ಬಾಕಿ ಇದ್ದು, ರವಿವಾರ ಪಂದ್ಯಾವಳಿಗೆ ತೆರೆ ಬೀಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ
ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ
Loksabha; ಧಾರವಾಡ ಕ್ಷೇತ್ರದ ಅಭ್ಯರ್ಥಿ ಬದಲಾವಣೆಯಿಲ್ಲ: ಯಡಿಯೂರಪ್ಪ ಸ್ಪಷ್ಟನೆ
Pralhad Joshi; ಧಾರವಾಡದ ಬಿಜೆಪಿ ಅಭ್ಯರ್ಥಿ ಬದಲಿಸಬೇಕು: ದಿಂಗಾಲೇಶ್ವರ ಸ್ವಾಮೀಜಿ
Kannada; ಹಿರಿಯ ಸಾಹಿತಿ ಡಾ.ಗುರುಲಿಂಗ ಕಾಪಸೆ ಇನ್ನಿಲ್ಲ: ದೇಹ ದಾನ