ತ್ಯಾಜ್ಯ ವಿಲೇವಾರಿ ಘಟಕಕ್ಕೆ ಚಾಲನೆ
Team Udayavani, Feb 22, 2020, 11:24 AM IST
ಹುಬ್ಬಳ್ಳಿ: ಮಹಾನಗರ ಪಾಲಿಕೆಯಿಂದ ಬೆಂಗೇರಿಯಲ್ಲಿ ನಿರ್ಮಿಸಿರುವ ದ್ವಿತೀಯ ಹಂತದ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಶುಕ್ರವಾರ ಚಾಲನೆ ನೀಡಿದರು.
ಘಟಕದ ಕುರಿತು ಮಾಹಿತಿ ನೀಡಿದ ಮಹಾನಗರ ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ, ಘಟಕ ಈ ಭಾಗದ 10 ವಾರ್ಡ್ಗಳಿಂದ ಸಂಗ್ರಹಿಸುವ ತ್ಯಾಜ್ಯದ ವಿಲೇವಾರಿಯಲ್ಲಿ ದ್ವಿತೀಯ ಹಂತವಾಗಿ ಕಾರ್ಯ ನಿರ್ವಹಿಸಲಿದೆ. ಈ ಭಾಗದ ಸುಮಾರು 30 ಸಾವಿರ ಮನೆಗಳ ತ್ಯಾಜ್ಯ ಇಲ್ಲಿಗೆ ತಂದು ಕಾಂಪ್ಯಾಕ್ಟ್ ಕಂಟೇನರ್ಗಳಿಗೆ ಹಾಕಲಾಗುತ್ತಿದೆ. ಇದರಿಂದ ಈ ಭಾಗದ ಜನರಿಗೆ ವಾಸನೆ ಸೇರಿದಂತೆ ಇತರೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದರು. ಘಟಕ ಆರಂಭವಾಗಿರುವುದರಿಂದ ಈ ಭಾಗದ ಆಟೋ ಟಿಪ್ಪರ್ ತುಂಬಿದ ತಕ್ಷಣ ಕಾರವಾರ ರಸ್ತೆಯ ಕಸಮಡ್ಡಿಗೆ ಹೋಗುವುದು ತಪ್ಪುತ್ತದೆ.
ಇದರಿಂದ ಜನರಿಗೆ ಉತ್ತಮ ಹಾಗೂ ಹೆಚ್ಚಿನ ಸೇವೆ ನೀಡಬಹುದಾಗಿದೆ. ಘಟಕದಲ್ಲಿ 10 ಟನ್ ಸಾಮರ್ಥ್ಯದ 5 ಕಂಟೇನರ್ಗಳಿದ್ದು, 50 ಟನ್ ಕಸ ಇಲ್ಲಿ ಸಂಗ್ರಹಿಸಿ ಸಾಗಿಸಬಹುದಾಗಿದೆ. ಒಂದು ಹುಕ್ ಲೋಟರ್ ವಾಹನ ಇದೆ ಎಂದು ಮಾಹಿತಿ ನೀಡಿದರು. ಮಹಾನಗರದಲ್ಲಿ ಏಳು ಕಾಂಪ್ಯಾಕ್ಟ್ ಘಟಕಗಳನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು. ಈಗಾಗಲೇ ಎರಡು ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ನಂದಿನಿ ನಗರ ಹಾಗೂ ಧಾರವಾಡದ ಕಲ್ಯಾಣನಗರದ ಘಟಕಗಳನ್ನು ಮುಂದಿನ ತಿಂಗಳು ಉದ್ಘಾಟನೆ ಮಾಡಲಾಗುವುದು. ಧಾರವಾಡದ ಇನ್ನೊಂದು ಘಟಕ ನಿರ್ಮಾಣದ ಕುರಿತು ಸ್ಥಳ ನಿಗದಿಯಾಗಿಲ್ಲ ಎಂದು ಹೇಳಿದರು.
ಪಾಲಿಕೆ ಹೆಚ್ಚುವರಿ ಆಯುಕ್ತ ಅಜೀಜ್ ದೇಸಾಯಿ, ಅಧೀಕ್ಷಕ ಅಭಿಯಂತ ಇ. ತಿಮ್ಮಪ್ಪ, ಅಧಿಕಾರಿಗಳಾದ ಎಸ್.ಸಿ. ಬೇವೂರು, ಬಸವರಾಜ ಲಮಾಣಿ, ವಿಜಯ ಗಣಾಚಾರಿ, ವಿಜಯಕುಮಾರ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ
LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ
Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ
Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ
MUST WATCH
ಹೊಸ ಸೇರ್ಪಡೆ
Drama: ಪ್ರೇಕ್ಷಕರ ಮನಗೆದ್ದ “ಸೀತಾರಾಮ ಚರಿತಾ”
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್