ಧಾರವಾಡದಲ್ಲಿ 12ದಿನಕ್ಕೊಮ್ಮೆ ನೀರು!
•24 ಗಂಟೆ ನೀರು ಪೂರೈಕೆ ನಗರದಲ್ಲೇ ಹಾಹಾಕಾರ •ಬತ್ತಿದ ನೀರಸಾಗರ ಕೆರೆ, ಮಲಪ್ರಭಾ ಮೇಲೆ ಒತ್ತಡ
Team Udayavani, May 17, 2019, 11:32 AM IST
ಧಾರವಾಡ: 24/7 ನೀರು ಪೂರೈಕೆ ಸೌಲಭ್ಯದ ದೇಶದ ಮೊದಲ ಮಹಾನಗರ ಎಂಬ ಹಣೆಪಟ್ಟಿ ಹೊತ್ತ ಹುಬ್ಬಳ್ಳಿ-ಧಾರವಾಡ ಮಹಾನಗರ ಹಾಗೂ ಧಾರವಾಡ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಅವಳಿ ನಗರದಲ್ಲಿಯೇ 10-12ದಿನಕ್ಕೊಮ್ಮೆ ನೀರು ನೀಡುತ್ತಿದ್ದು, ಕೆಲವೊಂದು ಹಳ್ಳಿಗಳಿಗೆ ಬೇಸಿಗೆ ಮೊದಲೇ ಟ್ಯಾಂಕರ್ ನೀರು ಆಸರೆಯಾಗಿದೆ.ಹುಬ್ಬಳ್ಳಿ-ಧಾರವಾಡಹುಬ್ಬಳ್ಳಿ-ಧಾರವಾಡಹುಬ್ಬಳ್ಳಿ-ಧಾರವಾಡ
ಅವಳಿ ನಗರದ ವಿವಿಧ ವಾರ್ಡ್ಗಳಲ್ಲಿ 24/7 ನೀರು ಪೂರೈಕೆ ಯೋಜನೆ ಇದೆ. ಜಿಲ್ಲೆಯ ಕೆಲವೊಂದು ಕಡೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಂಡಿದೆ. ಇನ್ನು ಕೆಲವು ಕಡೆ ಪ್ರಸ್ತಾವನೆ ಹಂತದಲ್ಲಿದೆ. ಹಳೇ ಹುಬ್ಬಳ್ಳಿಗೆ ಆಸರೆಯಾಗಿದ್ದ ನೀರಸಾಗರ ಕೆರೆ ಬತ್ತಿದೆ. ಮಲಪ್ರಭಾ ನದಿಯ ಜಲಾಯಶ ನೀರಿನ ಮೇಲಿನ ಅವಲಂಬನೆ ದಿನದಿಂದ ದಿನಕ್ಕೆ ಹೆಚ್ಚತೊಡಗಿದೆ.
ಮಲಪ್ರಭಾ ಜಲಾಶಯದಿಂದ ನೀರು ಪೂರೈಕೆ ಮೇಲೆಯೇ ಅವಳಿನಗರ, ಕೆಲವೊಂದು ಹಳ್ಳಿಗಳು ಅವಲಂಬನೆಯಾಗಿವೆ. ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ, ನೀರು ಪೂರೈಕೆಯಲ್ಲಿ ಸೋರಿಕೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸಮರ್ಪಕವಾಗಿ ಕಾರ್ಯ ನಿರ್ವಹಿಸದಿರುವುದು, ಕುಡಿಯುವ ನೀರಿನ ಬವಣೆ ಹೆಚ್ಚುವಂತೆ ಮಾಡಿದೆ. ವಿಶೇಷವಾಗಿ ಬೇಸಿಗೆಯಲ್ಲಿ ಇದು ಇನ್ನಷ್ಟು ಹೆಚ್ಚುತ್ತಿದೆ.
ಮಲಪ್ರಭಾ ನದಿ ಜಲಾಶಯದಿಂದ ಸಗಟು ನೀರು ಪೂರೈಕೆಗೆ ಮತ್ತೂಂದು ಪೈಪ್ಲೈನ್ ಹಾಕಲು ಅಂದಾಜು 24 ಕೋಟಿ ರೂ.ಗಳ ಪ್ರಸ್ತಾವನೆ ಇದೆಯಾದರೂ ಪಾಲಿಕೆಯಿಂದಲೇ ಹಣ ಭರಿಸುವ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಅನುಮೋದನೆಗೆ ಮೀನಮೇಷ ತೋರಿತ್ತು. ಈಗಲೂ ಯೋಜನೆ ಅತಂತ್ರ ಸ್ಥಿತಿಯಲ್ಲಿಯೇ ಉಳಿಯುವಂತಾಗಿದೆ.
ಒಂದು ಕಡೆ ಹಳೇ ಹುಬ್ಬಳ್ಳಿಗೆ ನೀರು ಪೂರೈಕೆಯ ನೀರಸಾಗರ ಕೆರೆ ಮಳೆ ಕೊರತೆಯಿಂದ ಬತ್ತಿ ಹೋಗಿದೆ. ಇನ್ನೊಂದು ಕಡೆ ಮಲಪ್ರಭಾ ನದಿ ಜಲಾಶಯ ಮೇಲಿನ ನೀರಿನ ಅವಲಂಬನೆ ಹೆಚ್ಚುತ್ತಿದೆ. ಮಹಾನಗರದಲ್ಲಿ ಹೊಸ ಬಡಾವಣೆಗಳು ಹೆಚ್ಚುತ್ತಲೇ ಸಾಗಿವೆ. ಕಳಸಾ-ಬಂಡೂರಿ ನಾಲಾ ಯೋಜನೆಯಿಂದ 5.6 ಟಿಎಂಸಿ ಆಡಿ ನೀರು, ಕಾಳಿ ನದಿ ಯೋಜನೆಯಿಂದ ನೀರು ಹೀಗೆ ಯೋಜನೆಗಳು ಕಾಗದಗಳಲ್ಲಿ ಮೊಳಗುತ್ತಿವೆಯಾದರೂ, ನೀರಿನ ಬವಣೆ ನೀಗಿಸುವ ನಿಟ್ಟಿನಲ್ಲಿ ಸಹಕಾರಿಯಂತೂ ಆಗುತ್ತಿಲ್ಲ.
ಖಾಸಗಿ ಕೊಳವೆ ಬಾವಿಗಳಿಂದಲೂ ನೀರು: ಜಿಲ್ಲೆಯಲ್ಲಿ 17 ಖಾಸಗಿ ಒಡೆತನದ ಕೊಳವೆ ಬಾವಿಗಳನ್ನು ಬಾಡಿಗೆ ಪಡೆದು ಅವುಗಳಿಂದಲೂ ನೀರು ಪೂರೈಸುವ ಕಾರ್ಯ ಸಾಗಿದೆ. ಧಾರವಾಡ ತಾಲೂಕಿನ ತಡಕೋಡ, ಹುಬ್ಬಳ್ಳಿ ತಾಲೂಕಿನ ಛಬ್ಬಿ, ನೂಲ್ವಿ, ಅಂಚಟಗೇರಿ, ಅಗಡಿ, ಸುಳ್ಳ, ಕಲಘಟಗಿ ತಾಲೂಕಿನ ಮುಕ್ಕಲ್, ಕಂಪ್ಲಿ, ಅರಳಿಹೊಂಡ, ಹಟಕಿನಾಳ, ಕುಂದಗೋಳದ ಹಿರೇಗುಂಜಾಳದ ಖಾಸಗಿ ಒಡೆತನದ ಕೊಳವೆ ಬಾವಿಗಳು ನೀರಿನ ಬವಣೆ ನೀಗಿಸುವ ನಿಟ್ಟಿನಲ್ಲಿ ತಮ್ಮದೇ ಸೇವೆ ನೀಡುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ