ಮೋದಿ ಹೆಸರಲ್ಲಿ ಮತ ಯಾಚಿಸಿದರೆ ತಪ್ಪೇನು?
Team Udayavani, Apr 20, 2019, 11:12 AM IST
ಹುಬ್ಬಳ್ಳಿ: ಧಾರವಾಡ ಕ್ಷೇತ್ರದ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ಸಹಕಾರ ನೀಡಿದ್ದಾರೆ. ಅವರ ಹೆಸರಲ್ಲಿ ಮತ ಕೇಳುವುದಲ್ಲಿ ತಪ್ಪೇನಿದೆ. ಕಳೆದ 15 ವರ್ಷಗಳಲ್ಲಿ ಸುಸಂಸ್ಕೃತ ರಾಜಕಾರಣ ಮಾಡಿದ್ದೇನೆ. 2 ಲಕ್ಷ ಮತಗಳ ಅಂತರದಿಂದ ನನ್ನ ಗೆಲುವು ಖಚಿತ ಎಂದು ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.
ಶುಕ್ರವಾರ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಮೋದಿ ಅಲೆ ಇಲ್ಲ ಎನ್ನುವುದು, ನಂತರ ಮೋದಿ ಅಲೆಯಿಂದ ಗೆದ್ದಿದ್ದಾರೆ ಎನ್ನುವುದು ಕಾಂಗ್ರೆಸ್ ನಾಯಕರ ದೌರ್ಬಲ್ಯ. ದೇಶಕ್ಕಾಗಿ ಮೋದಿ ಶ್ರಮಿಸಿದ್ದರೆ ಕ್ಷೇತ್ರದ ಅಭಿವೃದ್ಧಿಗೆ ನಾನು ಶಕ್ತಿಮೀರಿ ಶ್ರಮಿಸಿದ್ದೇನೆ. ಅವರೊಂದಿಗೆ ಆತ್ಮೀಯ ಸಂಬಂಧವಿದೆ. ಅಭಿಮಾನವಿದೆ. ಹೀಗಾಗಿ ನನ್ನನ್ನು ಅವರ ಬೆಂಬಲಿಗ, ಅಭಿಮಾನಿ ಅಥವಾ ಭಕ್ತ ಎಂದು ಕರೆದರೂ ಸಂತಸದಿಂದ ಸ್ವೀಕರಿಸುತ್ತೇನೆ ಎಂದರು.
ಹಿಂದಿನ ಕೆಲ ಚುನಾವಣೆಗಳು ಋಣಾತ್ಮಕ ಅಥವಾ ಭಾವನಾತ್ಮಕ ವಿಚಾರಗಳ ಮೇಲೆ ನಡೆದಿರಬಹುದು. ಈ ಚುನಾವಣೆ ಅಭಿವೃದ್ಧಿ ಕಾರ್ಯಗಳು ಹಾಗೂ ಗುಣಾತ್ಮಕ ಅಂಶಗಳ ಮೇಲೆ ನಡೆಯುತ್ತಿದೆ. ಕಿಮ್ಸ್ಗೆ ಅನುದಾನ, ಐಐಟಿ, ಐಐಐಟಿ, ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗೆ 1200 ಕೋಟಿ ರೂ. ಅನುದಾನ, 30 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಕ್ರೀಡಾಂಗಣ, ಬಿಐಎಸ್ ಕಚೇರಿ, ಖಾದಿ ಮತ್ತು ಗ್ರಾಮೋದ್ಯೋಗ ಮಿಷನ್ ಕಚೇರಿ, 72 ಸಾವಿರ ಕುಟುಂಬಗಳಿಗೆ ಉಜ್ವಲ್ ಯೋಜನೆ ಗ್ಯಾಸ್ ವಿತರಣೆ, ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬೈಪಾಸ್ ರಸ್ತೆಗಳು ಸೇರಿದಂತೆ ಹಲವು ಯೋಜನೆಗಳು ಆಗಿವೆ. ರಾಜಕೀಯ ಲಾಭವಿಲ್ಲದಿದ್ದರೂ ಜಿಲ್ಲೆಯ ಶೈಕ್ಷಣಿಕ ಪ್ರಗತಿಗಾಗಿ ಶಾಲೆಗಳಿಗೆ 15000 ಡೆಸ್ಕ್ ನೀಡಲಾಗಿದ್ದು, ಸ್ಮಾರ್ಟ್ ಕ್ಲಾಸ್, ಶೌಚಾಲಯಗಳನ್ನು ನಿರ್ಮಿಸಲಾಗಿದೆ.
ಮುಂದಿನ ಯೋಜನೆಗಳು: ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ-2ರಲ್ಲಿ ಸಂಪರ್ಕ ರಸ್ತೆಗಳು, ಗ್ರಾಮಗಳಲ್ಲಿ ಮೂಲಸೌಲಭ್ಯ, ಕುಡಿಯುವ ನೀರಿನ ಯೋಜನೆ, ಹು-ಧಾ ಮಹಾನಗರದಲ್ಲಿ ಸುಗಮ ಸಂಚಾರಕ್ಕೆ ಯೋಜನೆ, ಸಣ್ಣ ನೀರಾವರಿಗೆ ಹೆಚ್ಚಿನ ಒತ್ತು ಕೊಡಲು ಯೋಜನೆ ಸಿದ್ಧಪಡಿಸಿಕೊಂಡಿದ್ದೇನೆ.
ರಾಜ್ಯದ ಇತರೇ ಸಂಸದರ ಆದರ್ಶ ಗ್ರಾಮಗಳಿಗೆ ಹೋಲಿಕೆ ಮಾಡಿದರೆ ನಾನು ಒಂದನೇ ಸ್ಥಾನದಲ್ಲಿದ್ದೇನೆ. ಸ್ಥಳೀಯ ರಾಜಕಾರಣದ ಪ್ರಭಾವದಿಂದ ಹಿಂದಿನ ಜಿಲ್ಲಾಡಳಿತದಿಂದ ಸಕಾರಾತ್ಮಕ ಸ್ಪಂದನೆ ದೊರೆಯಲಿಲ್ಲ. ಒಂದೆರೆಡು ಘಟನೆಗಳನ್ನು ಹೊರತುಪಡಿಸಿ ನಮ್ಮ ಸರಕಾರಗಳ ಅವಧಿಯಲ್ಲಿ ಯಾವುದೇ ಗಲಭೆಗಳು ಇಲ್ಲ. ಧಾರವಾಡದಲ್ಲಿ ನಡೆದ ಘಟನೆಯಲ್ಲಿ ರಾಜ್ಯ ಸರಕಾರದ ಪೊಲೀಸರ ಕೆಟ್ಟ ತೀರ್ಮಾನದಿಂದ ಒಂದಿಬ್ಬರು ನೌಕರಿ ಕಳೆದುಕೊಂಡರೆ ಕೇಂದ್ರ ಸರಕಾರ ಅಥವಾ ನಾನು ಜವಾಬ್ದಾರನಲ್ಲ ಎಂದರು.
ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗ ವಿಚಾರದಲ್ಲಿ ಕೆಲವರು ಅಡ್ಡಗಾಲು ಹಾಕುತ್ತಿದ್ದಾರೆ. ಹೀಗಾಗಿ ಗೊಂದಲ ಸೃಷ್ಟಿಯಾಗಿದ್ದು, ಈ ವಿಚಾರ ಹಸಿರು ವನ್ಯಜೀವಿ ಮಂಡಳಿ ಮುಂದಿರುವುದರಿಂದ ಯೋಜನೆಗೆ ತಡೆಯಾಜ್ಞೆ ನೀಡಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಸೂಕ್ತ ಸಮಜಾಯಿಷಿ ನೀಡುವ ಮೂಲಕ ಯೋಜನೆಗೆ ಒತ್ತು ನೀಡುತ್ತೇವೆ.
ತೇಜಸ್ವಿನಿ ಟಿಕೆಟ್ ತಪ್ಪಿಸಿಲ್ಲ: ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ನಾನು ಸೇರಿದಂತೆ ಬಿ.ಎಸ್. ಯಡಿಯೂರಪ್ಪ, ಕೆ.ಎಸ್. ಈಶ್ವರಪ್ಪ, ಡಿ.ವಿ. ಸದಾನಂದಗೌಡ, ಜಗದೀಶ ಶೆಟ್ಟರ ಅವರಿದ್ದ ಕೋರ್ ಕಮಿಟಿ ತೇಜಸ್ವಿನಿ ಅನಂತಕುಮಾರ ಅವರ ಹೆಸರನ್ನು ಸೂಚಿಸಿತ್ತು. ನಂತರದಲ್ಲಿ ತೇಜಸ್ವಿ ಸೂರ್ಯ ಅವರ ಹೆಸರು ಅಂತಿಮವಾಗಿದೆ. ರಾಷ್ಟ್ರೀಯ ಅಧ್ಯಕ್ಷರು, ವರಿಷ್ಠರು ಯೋಚಿಸಿ ಈ ನಿರ್ಧಾರ ಕೈಗೊಂಡಿರುತ್ತಾರೆ ಎನ್ನುವ ಕಾರಣಕ್ಕೆ ಇದನ್ನು ತೇಜಸ್ವಿನಿ ಅವರು ಒಪ್ಪಿಕೊಂಡಿದ್ದಾರೆ. ಈ ವಿಚಾರದಲ್ಲಿ ನನ್ನನ್ನು ಸೇರಿದಂತೆ ಹಲವರ ಮೇಲೂ ಸುಳ್ಳು ಆರೋಪಗಳು ಕೇಳಿ ಬಂದವು ಎಂದು ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಸ್ಪಷ್ಟಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli ಅಪಾರ್ಟಮೆಂಟ್ ನಲ್ಲಿ ಸಿಕ್ಕ ಕೋಟಿ ಕೋಟಿ ಹಣ ಬ್ಯಾಂಕ್ ಗೆ ಜಮೆ
Hubli: ದಿಂಗಾಲೇಶ್ವರರು ಸ್ಪರ್ಧಿಸುತ್ತಿರುವ ಸಮಯ, ಜಾಗ ಸರಿಯಿಲ್ಲ: ಗುಣಧರನಂದಿ ಮಹಾರಾಜ
L.S Polls: ನಮ್ಮದು ಧರ್ಮ ಯುದ್ಧ, ಧರ್ಮದ ಹಾದಿಯಲ್ಲೇ ಸಾಗುತ್ತೇವೆ: ದಿಂಗಾಲೇಶ್ವರ ಶ್ರೀ
Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಕೋಟಿಗಟ್ಟಲೆ ಹಣ
UPSC ಪರೀಕ್ಷೆಯಲ್ಲಿ 101ನೇ ರ್ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ
MUST WATCH
ಹೊಸ ಸೇರ್ಪಡೆ
Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ
Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ
Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್- ಬಿಜೆಪಿ ನೇರ ಹಣಾಹಣಿ
Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ
Pavagada: ಬೈಕ್ ಗೆ ಕಾಡು ಹಂದಿ ಡಿಕ್ಕಿಯಾಗಿ ಸವಾರ ಸಾವು