ಕಷ್ಟ ಮರೆತು ನಗುವಿನ ಅಲೆಯಲ್ಲಿ ತೇಲಿದ ಅಂಗವಿಕಲರು

ಪಡುಬಿದ್ರಿ ಬೀಚ್‌ನಲ್ಲಿ ಸ್ನೇಹ ಸಮ್ಮಿಲನ

Team Udayavani, Mar 25, 2019, 6:30 AM IST

kasta-maretu

ಉಡುಪಿ: ಪಡುಬಿದ್ರಿ ಬೀಚ್‌ನಲ್ಲಿ ಮಾ. 24ರಂದು ವಿಶೇಷ ಅತಿಥಿಗಳು ನೆರೆದಿದ್ದರು. ಇವರದ್ದೆಲ್ಲಾ ಕಥೆಗಳು ಹಲವು. ಆದರೂ ಇವರ ಕುಟುಂಬವೊಂದೇ. ಕುಂದಾಪುರ, ಕಾರ್ಕಳ, ಬೆಳ್ಮಣ್‌, ಅಡ್ವೆಗಳಿಂದ ಬಂದಿದ್ದ ವಿಕಲಾಂಗರು ಪಡುಬಿದ್ರಿ ಬೀಚ್‌ನಲ್ಲಿ ಸೇರಿ ತಮ್ಮ ತಮ್ಮೊಳಗೇ ಹಾಸ್ಯ ಚಟಾಕಿಗಳನ್ನು ಹಾರಿಸಿಕೊಂಡು, ಕಷ್ಟಗಳನ್ನೆಲ್ಲಾ ಮರೆತು ನಗುವಿನ ಅಲೆಯಲ್ಲೇ ಸಮಯ ಕಳೆದಿದ್ದಾರೆ.

ಎರ್ಮಾಳಿನ ಹಿದಾಯತ್‌ ಕುಟುಂಬವು ನಮ್ಮೂರ ಬೀಚ್‌ ನೋಡಬನ್ನಿ ಎಂದು ತಮ್ಮೆಲ್ಲಾ ಸಹೋದರ, ಸಹೋದರಿಯರನ್ನು ಅಹ್ವಾನಿಸಿದ್ದರು. ಹಾಗಾಗಿ ಕುಂದಾಪುರ ಹೆಮ್ಮಾಡಿಯ ನಂದ್ಯಪ್ಪ ಶೆಟ್ಟಿ, ಶಾರದಾ ಹಟ್ಟಿಯಂಗಡಿ, ಭಾಗ್ಯವತಿ ಮರವಂತೆ, ಶಶಿಧರ ಪೂಜಾರಿ ಕಲ್ಲಮುಂಡ್ಕೂರು, ವಿದ್ಯಾ ಶೆಟ್ಟಿ ಅಡ್ವೆ, ಉಮೇಶ ಶೆಟ್ಟಿ ಕಾರ್ಕಳ ಸೇರಿದಂತೆ ಸುಮಾರು 20ಮಂದಿ ಪಡುಬಿದ್ರಿ ಬೀಚ್‌ನ ಗಾಳಿಗೋಪುರಕ್ಕೆ ಆಗಮಿಸಿ ಸಂಭ್ರಮಿಸಿದರು.

ಈ ವೇಳೆ ಅವರು ಮಾತನಾಡಿ ಜಿಲ್ಲೆಯಲ್ಲಿ ಸುಮಾರು 17000 – 18000 ವಿಕಲಾಂಗರಿದ್ದಾರೆ. ನಮ್ಮನ್ನು ವಿಶ್ವ ವಿಕಲಾಂಗರ ದಿನದಂದು ಜಿಲ್ಲಾಡಳಿತವು ಕರೆಸಿ ಸಮಾರಂಭವನ್ನು ಮಾಡುತ್ತದೆ. ಬಳಿಕ ನೆನಪಾಗುವುದು ಮುಂದಿನ ವರ್ಷ. ಇದು ಸಲ್ಲದು. ನಮಗೆ ಸರಕಾರಿ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು.ನಾವು ಅನ್ಯರಿಗಿಂತ ಉತ್ತಮವಾಗಿ ಕೆಲಸ ನಿಭಾಯಿಸಿ ತೋರಿಸಬಲ್ಲೆವು. ಸಹಾನುಭೂತಿಯ ಅಗತ್ಯ ತಮಗಿಲ್ಲ. ನಮ್ಮ ಹಕ್ಕುಗಳನ್ನು ರಕ್ಷಿಸಿ, ನಮಗೆ ನೀಡಿ ಎಂಬ ಬೇಡಿಕೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

ತ್ರಿಚಕ್ರ ವಾಹನಗಳಿಗೆ ಪೆಟ್ರೋಲ್‌ ಸಬ್ಸಿಡಿ ನೀಡಿ
ಇಂದಿಲ್ಲಿ ಆಗಮಿಸಿದ್ದ ವಿದ್ಯಾ ಶೆಟ್ಟಿ ದೂರದ ಮುಂಬಯಿನಲ್ಲಿ ಫಿಲ್ಮ್ ಶೂಟಿಂಗ್‌ ವೇಳೆ ಬಿದ್ದು ಕಾಲುಗಳ ಸ್ವಾಧೀನವನ್ನು ಕಳೆದುಕೊಂಡು ಈಗ ಅತ್ತಿತ್ತ ಓಡಾಡಲು ವೀಲ್‌ ಚಯರನ್ನೇ ಸದ್ಯ ನೆಚ್ಚಿಕೊಂಡಿದ್ದಾರೆ. ಶಶಿಧರ್‌ ಪೂಜಾರಿ ಅವರು ಲಿಪ್ಟ್ನಿಂದ ಬಿದ್ದು ಬೆನ್ನು ಹುರಿಯ ತೊಂದರೆಗೊಳಗಾಗಿ ಕಾಲಿನ ಸ್ವಾಧೀನವನ್ನು ಕಳೆದುಕೊಂಡಿದ್ದಾರೆ. ಶಾರದಾ ಅವರ ಕಾಲಲ್ಲಿ ಬಲವಿಲ್ಲ. ತೆವಳುತ್ತಲೇ ಸಾಗಬೇಕಾದ ಅನಿವಾರ್ಯತೆಯಿದೆ. ಸಂಕಷ್ಟಕ್ಕೆ ನಾವು ಒಳಗಾಗಿದ್ದರೂ ತಮ್ಮಲ್ಲಿ ಜೀವನೋತ್ಸಾಹವು ಕುಗ್ಗಿಲ್ಲ. ತಮ್ಮಲ್ಲಿ ಕೆಲವರಿಗೆ ಅನುಕಂಪದೊಂದಿಗೆ ರುಡ್‌ಸೆಟ್‌ನಲ್ಲಿ ವಾರದ ತರಬೇತಿ ಸಹಿತ ತ್ರಿಚಕ್ರ ವಾಹನಗಳನ್ನು ನೀಡಲಾಗಿದೆ. ಆದರೆ ತಾವು ಬಳಸುವ ಪೆಟ್ರೋಲ್‌ಗ‌ೂ ಜಿಲ್ಲೆಯಲ್ಲಿ ಮೀನುಗಾರರ ಬೋಟ್‌ಗಳಿಗೆ ನೀಡುವ ಡೀಸೆಲ್‌ ಸಬ್ಸಿಡಿಯಂತೆ ಸಬ್ಸಿಡಿ ನೀಡಬೇಕೆಂಬ ಮನವಿಯನ್ನು ಇವರು ಮಾಡಿಕೊಂಡಿದ್ದಾರೆ.

ಸರಕಾರಿ ಕಚೇರಿ, ಸಾರ್ವಜನಿಕ ಸ್ಥಳಗಳಲ್ಲಿ ರ್‍ಯಾಂಪ್‌ ನಿರ್ಮಿಸಿ
ತಮಗೆ ಜಿಲ್ಲಾ ಸರಕಾರಿ ಕಚೇರಿಗಳಲ್ಲಿ ಒಳಗೆ ಹೋಗಲು ಅನುಕೂಲವಾಗುವಂತೆ ರ್‍ಯಾಂಪ್‌ಗ್ಳನ್ನು ಕಡ್ಡಾಯವಾಗಿ ರಚಿಸಬೇಕು. ಇದೇ ರ್‍ಯಾಂಪನ್ನು ಪ್ರವಾಸೀ ಕೇಂದ್ರಗಳಾಗಿರುವ ಕಾಪು, ಪಡುಬಿದ್ರಿ ಬೀಚ್‌ ಸಹಿತ ಇತರೆಡೆಗಳಲ್ಲೂ ಅವಶ್ಯವಾಗಿ ನಿರ್ಮಿಸಬೇಕೆಂದು ಇವರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ಕಾಪುವಿನಲ್ಲಿ ತಹಶೀಲ್ದಾರರ ಭೇಟಿಗೆ ಮೊದಲನೇ ಮಹಡಿ ಏರುವುದು ಕಷ್ಟಕರರವಾಗಿದೆ ಎಂದು ಒಬ್ಬರು ಹೇಳಿದರೆ, ಈಗ ನಮ್ಮ ಪರವಾಗಿ ಯಾವುದೇ ಅಧಿಕಾರಿ ಅನುಕೂಲ ಮಾಡಿಕೊಡುತ್ತಿಲ್ಲ ಎಂದು ಮತ್ತೂಬ್ಬರು ಬೇಸರ ವ್ಯಕ್ತಪಡಿಸಿದರು.

ಎಲ್ಲರೂ ಮತದಾನ ಮಾಡಿ
ಮತದಾನ ನಮ್ಮ ಹಕ್ಕು. ನಮ್ಮನ್ನೂ ಕಳೆದ ಬಾರಿ ಮತದಾನ ಕುರಿತಾದ ಜಾಗೃತಿಗೆ ಬಳಸಿಕೊಂಡಿದ್ದಾರೆ. ಈ ಬಾರಿಯೂ ಮತದಾನವನ್ನು ಅವಶ್ಯ ಮಾಡುವಂತೆ ಎಲ್ಲಾ ಮತದಾರರನ್ನೂ ವಿನಂತಿಸುತ್ತೇವೆ ಎಂದು ವಿಕಲಾಂಗರು ಮನವಿ ಮಾಡಿದ್ದಾರೆ.

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.