ಹೊಳೆಆಲೂರಲ್ಲೂ ಆತಂಕದ ಛಾಯೆ
Team Udayavani, May 7, 2020, 4:42 PM IST
ಹೊಳೆಆಲೂರ: ನೆರೆಯ ಬಾದಾಮಿ ತಾಲೂಕಿನ ಚಿಕ್ಕ ಗ್ರಾಮ ಡಾಣಕಶಿರೂರನಲ್ಲಿ 13 ಕೋವಿಡ್ 19 ಪ್ರಕರಣಗಳು ಪತ್ತೆಯಾಗಿದ್ದು, ಹೊಳೆಆಲೂರ ಹೋಬಳಿಯ ಹಲವು ಗ್ರಾಮಗಳು ಡಾಣಕಶಿರೂರ ಗ್ರಾಮದಿಂದ ಕೇವಲ 3-4 ಕಿ.ಮೀ. ಅಂತರದಲ್ಲಿದ್ದು, ಗ್ರಾಮದಲ್ಲೂ ಆತಂಕ ಮನೆ ಮಾಡಿದೆ.
ಡಾಣಕಶಿರೂರ ರೈತ ಮಹಿಳೆಯರು ಹಾಲು, ಮೊಸರು, ತರಕಾರಿ ಮಾರಲು ಹಾಗೂ ಅಗತ್ಯ ವಸ್ತು, ಮದ್ಯ ಖರೀದಿಸಲು ಹೊಳೆಆಲೂರಿಗೆ ನಿತ್ಯ ಬರುತ್ತಾರೆ. ಹೀಗಾಗಿ ಗ್ರಾಮದಲ್ಲೂ ಆತಂಕ ಮನೆಮಾಡಿದೆ. ಡಾಣಕಶಿರೂರ ಗ್ರಾಮದಲ್ಲಿ ಬುಧವಾರ ಒಂದೇ ದಿನ 12 ಜನರಿಗೆ ಕೋವಿಡ್ 19 ದೃಢಪಟ್ಟಿರುವ ಸುದ್ದಿ ತಿಳಿಯುತ್ತಿದ್ದಂತೆ ರೋಣ ತಹಶೀಲ್ದಾರ್ ಜೆ.ಬಿ. ಜಕ್ಕನಗೌಡ್ರ, ಸಿಪಿಐ ಸುನೀಲ ಸವದಿ ಬುಧವಾರ ಮಧ್ಯಾಹ್ನ ಹೊಳೆಆಲೂರ, ಬಿ.ಎಸ್. ಬೇಲೇರಿ, ಅಮರಗೋಳ, ಬಸರಕೋಡ ಗ್ರಾಮಗಳಿಗೆ ಭೇಟಿ ನೀಡಿ, ಅಮರಗೋಳ ಹಾಗೂ ಹೊಳೆಆಲೂರ ಗ್ರಾಪಂ ಪಿಡಿಒ ಹಾಗೂ ಆರೋಗ್ಯ ಅ ಧಿಕಾರಿಗಳ ಸಭೆ ನಡೆಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.
ಹೊಳೆಆಲೂರ-ಬದಾಮಿ ಸಂಪರ್ಕಿಸುವ ಮಲಪ್ರಭಾ ನದಿ ಹತ್ತಿರ ಚೆಕ್ಪೋಸ್ಟ್ ಬಿಗಿಗೊಳಿಸಲು ಹಾಗೂ ಮಾಡಲಗೇರಿ ಹತ್ತಿರ ನೂತನ ಚೆಕ್ಪೋಸ್ಟ್ ಆರಂಭಿಸಲು ಹಾಗೂ ಬಿ.ಎಸ್. ಬೇಲೇರಿ ಗ್ರಾಮದಲ್ಲಿ ಮನೆ ಮನೆಯಲ್ಲೂ ಆರೋಗ್ಯ ತಪಾಸಣೆ ಮಾಡಲು ಸೂಚನೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Gadag; ನಮ್ಮದು ಬಡವರಿಗೆ ಬದುಕು ಕಟ್ಟಿ ಕೊಡುವ ಪ್ರಣಾಳಿಕೆ: ಬಸವರಾಜ ಬೊಮ್ಮಾಯಿ
Panchmasali ಸಮಾಜಕ್ಕೆ ಬಿಜೆಪಿಯಿಂದ ಅನ್ಯಾಯ: ವಚನಾನಂದ ಸ್ವಾಮೀಜಿ
MUST WATCH
ಹೊಸ ಸೇರ್ಪಡೆ
ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್ನದ್ದು: ಮೀನಾಕ್ಷಿ ಲೇಖಿ
Lok Sabha Elections; ಕಾಂಗ್ರೆಸ್ಗೆ ಉತ್ತಮ ಅವಕಾಶ: ದಿನೇಶ್ ಗುಂಡೂರಾವ್
Mangaluru ಪೆಟ್ರೋಲ್, ಡೀಸೆಲ್ ತುಟ್ಟಿ : ಪುಷ್ಪಾ ಅಮರನಾಥ್
Congress ಆಳ್ವಿಕೆಯಲ್ಲಿ ಹಿಂದುಗಳಿಗೆ ಉಳಿಗಾಲ ಇಲ್ಲ : ಯಶ್ಪಾಲ್
Lok Sabha Election ಫಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.