ಮುಳಗುಂದ: ಅನಿಲ ಭಿಕ್ಷಾ ಅಭಿಯಾನಕ್ಕೆ ಸ್ವಾಗತ
Team Udayavani, May 6, 2020, 4:47 PM IST
ಮುಳಗುಂದ: ಹಲವಾರು ಹಳ್ಳಿಗಳಲ್ಲಿ ಮನುಕುಲ ಕಲ್ಯಾಣಕ್ಕಾಗಿ ಜೋಳಿಗೆ ಹಿಡಿದ ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಅವರು ಚಿಂಚಲಿ ಗ್ರಾಮಕ್ಕೆ ಆಗಮಿಸಿದಾಗ ಅನಿಲ ಅಭಿಮಾನಿ ಬಳಗದ ಶರಣಪ್ಪ ಕಮ್ಮಾರ ಗ್ರಾಮದ ಹೊರ ವಲಯದಲ್ಲಿ ದೀಡ್ನಮಸ್ಕಾರ ಹಾಕುವುದರೊಂದಿಗೆ ಅನಿಲ ಭಿಕ್ಷಾ ಅಭಿಯಾನವನ್ನು ಸ್ವಾಗತಿಸಿಕೊಂಡರು.
ಸದಾನಂದ ಕಮ್ಮಾರ ದಂಪತಿ ಮನೆಗೆ ಭೇಟಿ ನೀಡಿದ ಅನಿಲ ಮೆಣಸಿನಕಾಯಿ ಅವರಿಗೆ ಆರತಿ ಬೆಳಗಿ ಸನ್ಮಾನಿಸಿ ಅನಿಲ ಅಕ್ಷಯ ಜೋಳಿಗೆಗೆ ದವಸಧಾನ್ಯಗಳನ್ನು ನೀಡಿದರು. ನಂತರ ಚನ್ನಯ್ಯ ನಂದಿಕೋಲಮಠ, ಗ್ರಾಪಂ ಸದಸ್ಯ ಮುತ್ತಪ್ಪ ಸಂದಕದ ಅವರ ಮನೆಗೆ ತೆರಳಿದಾಗ ಅಲ್ಲಿಯೂ ಆಧರಾದಿತ್ಯದಿಂದ ಬರಮಾಡಿಕೊಂಡು ದವಸಧಾನ್ಯಗಳನ್ನು ನೀಡಿದರು. ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಮಾತನಾಡಿ, ಬಡವರಿಗಾಗಿ ಭಿಕ್ಷಾ ಅಭಿಯಾನದ ಮೂಲಕ ರೈತರು, ದಾನಿಗಳಿಂದ ಸಂಗ್ರಹಿಸಿದ ದವಸಧಾನ್ಯಗಳನ್ನು ಈಗಾಗಲೇ 15 ಸಾವಿರಕ್ಕೂ ಅ ಧಿಕ ದಿನಸಿ ಕಿಟ್ಗಳನ್ನು ಮಾಡಿ ಎಲ್ಲ ಬಡವರಿಗೆ ವಿತರಿಸಲಾಗಿದೆ ಎಂದರು.
ಮಂಜುನಾಥ ಹೂಗಾರ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕಾಂತಿಲಾಲ ಬನಸಾಲಿ ಮಾತನಾಡಿದರು. ಧ್ಯಾಮಣ್ಣ ನೀಲಗುಂದ, ಮಹೇಶ ದಾಸರ, ಪರಮೇಶಿ ನಾಯಕ, ಬಸವಣ್ಣೆಯ್ಯ ಹಿರೇಮಠ, ಸದಾನಂದ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag; ನಮ್ಮದು ಬಡವರಿಗೆ ಬದುಕು ಕಟ್ಟಿ ಕೊಡುವ ಪ್ರಣಾಳಿಕೆ: ಬಸವರಾಜ ಬೊಮ್ಮಾಯಿ
Panchmasali ಸಮಾಜಕ್ಕೆ ಬಿಜೆಪಿಯಿಂದ ಅನ್ಯಾಯ: ವಚನಾನಂದ ಸ್ವಾಮೀಜಿ
Gadag; ವೀರೇಶ್ವರ ಪುಣ್ಯಾಶ್ರಮಕ್ಕೆ ಭೇಟಿ ನೀಡಿ ಗದ್ದುಗೆಯ ದರ್ಶನಾಶೀರ್ವಾದ ಪಡೆದ ಶ್ರೀರಾಮುಲು
Naregal; ಪ್ರೇಮಿಯೊಂದಿಗೆ ನೇಣಿಗೆ ಶರಣಾದ ನವವಿವಾಹಿತೆ!
Gadag; ವಚನಾನಂದ ಶ್ರೀಗಳ ಮಾತನ್ನು ಗಂಭೀರವಾಗಿ ಪರಿಗಣಿಸುತ್ತೇವೆ: ಬಸವರಾಜ ಬೊಮ್ಮಾಯಿ
MUST WATCH
ಹೊಸ ಸೇರ್ಪಡೆ
Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ
Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ
Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್- ಬಿಜೆಪಿ ನೇರ ಹಣಾಹಣಿ
Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ
Pavagada: ಬೈಕ್ ಗೆ ಕಾಡು ಹಂದಿ ಡಿಕ್ಕಿಯಾಗಿ ಸವಾರ ಸಾವು