ನೆರೆ ಸಂತ್ರಸ್ತರಿಗೆ ನೆರವಾಗಲು ಪರಿಹಾರ ಧನ ಸಂಗ್ರಹ
Team Udayavani, Aug 10, 2019, 10:28 AM IST
ಗಜೇಂದ್ರಗಡ: ಚಿನ್ನದ ಕಳಶ ದರ್ಶನ್ ತೂಗುದೀಪ ಅಭಿಮಾನಿ ಸಂಘ ವತಿಯಿಂದ ಪ್ರವಾಹದಿಂದ ಮನೆ, ಆಸ್ತಿಪಾಸ್ತಿ ಕಳೆದುಕೊಂಡ ಸಂತ್ರಸ್ತರಿಗಾಗಿ ಪರಿಹಾರ ಧನ ಸಂಗ್ರಹಿಸಲಾಯಿತು.
ಗಜೇಂದ್ರಗಡ: ಉತ್ತರ ಕರ್ನಾಟಕದಲ್ಲಿ ಭೀಕರ ಪ್ರವಾಹದಿಂದ ಮನೆ, ಆಸ್ತಿಪಾಸ್ತಿ ಕಳೆದುಕೊಂಡ ಸಂತ್ರಸ್ತರಿಗೆ ನೆರವಾಗುವ ಉದ್ದೇಶದಿಂದ ಪಟ್ಟಣದ ಚಿನ್ನದ ಕಳಶ ದರ್ಶನ್ ತೂಗುದೀಪ ಅಭಿಮಾನಿ ಸಂಘ ಸದಸ್ಯರು ಶುಕ್ರವಾರ ಬಿಡುಗಡೆಯಾದ ಕುರುಕ್ಷೇತ್ರ ಚಿತ್ರ ಪ್ರದರ್ಶನದ ವೇಳೆ ಪರಿಹಾರ ನಿಧಿ ಸಂಗ್ರಹಿಸಿದರು.
ಸಂಘದ ಅಧ್ಯಕ್ಷ ಸೋಹಿಲ್ ಮುಧೋಳ, ಉಪಾಧ್ಯಕ್ಷ ಜಿಲಾನಿ ಖಾಜಿ, ಭರತ್ ಅಬ್ಬಿಗೇರಿ, ಬಸವರಾಜ ಪಟ್ಟೇದ, ಕುಶಾಲ ಗಿಣಗಿ, ಬಸವರಾಜ ಹಡಪದ, ಹೈದರ ಚಾಮ್ಲಾಪೂರ, ಶಿವು ಬಳಿಗೇರ, ರಾಕೇಶ ಹರಕಸಾಲಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಮುಸ್ಲಿಂ ಸಮಾಜದಿಂದ ಪ್ರಾರ್ಥನೆ: ಉತ್ತರ ಕರ್ನಾಟಕ ಸೇರಿ ರಾಜ್ಯಾದ್ಯಾಂತ ವರುಣನ ಅವಕೃಪೆಯಿಂದ ಉದ್ಭವಾಗಿರುವ ಪ್ರವಾಹದಿಂದಾಗಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರಿ ಪಟ್ಟಣದ ಮುಸಲ್ಮಾನ ಬಾಂಧವರು ಶುಕ್ರವಾರ ಮಧ್ಯಾಹ್ನದ ನಮಾಜ್ ಬಳಿಕ ವಿಶೇಷವಾಗಿ ಪ್ರಾರ್ಥಿಸಿದರು. ಮೃತಕ ಕುಟುಂಬಕ್ಕೆ ದುಖಃ ಭರಿಸುವ ಶಕ್ತಿ ಅಲ್ಲಾಹನು ದಯಪಾಲಿಸಲಿ, ಜೊತೆಗೆ ಜಲ ಪ್ರವಾಹ ತಗ್ಗಲಿ, ಸಂತ್ರಸ್ತರಿಗೆ ಸರ್ಕಾರ ಸೂಕ್ತ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ ಸಂಘ ಸಂಸ್ಥೆಗಳು ಸಹಾಯ ಹಸ್ತ ಚಾಚುವ ಶಕ್ತಿ ನೀಡಲಿ ಎಂದು ಕೋರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Gadag; ನಮ್ಮದು ಬಡವರಿಗೆ ಬದುಕು ಕಟ್ಟಿ ಕೊಡುವ ಪ್ರಣಾಳಿಕೆ: ಬಸವರಾಜ ಬೊಮ್ಮಾಯಿ