ಜೀವನದ ಆನಂದ ಅನುಭವಿಸಲು ದಾನ ಮಾಡಿ
Team Udayavani, May 21, 2019, 8:46 AM IST
ಗದಗ: ನಗರದ ಶ್ರೀ ವೀರಸೋಮೇಶ್ವರ ಬಡಾವಣೆ ಹಿತರಕ್ಷಣಾ ಸಮಿತಿಯಿಂದ ನಿರ್ಮಿಸಿದ ಶ್ರೀ ಪವಾಡ ಆಂಜನೇಯ ಶಿಲಾಮೂರ್ತಿ ಪ್ರಾಣ ಪ್ರತಿಪಾuಪನೆ ಸಮಾರಂಭ ನಡೆಯಿತು.
ಗದಗ: ಹಣ ಮಾಡುವುದೇ ಬದುಕಿನ ಮೂಲ ಉದ್ದೇಶವಾಗಬಾರದು. ತಾನು ಸಂಪಾದನೆ ಮಾಡಿದ ಸಂಪತ್ತು ಕೇವಲ ಕುಟುಂಬ ನಿರ್ವಹಣೆ, ವೈಭವೋಪೇತ ಜೀವನ ಶೈಲಿಗೆ ಸೀಮಿತವಾಗದೇ ಅಲ್ಪಸ್ವಲ್ಪ ಹಣವಾದರೂ ದಾನ, ಧರ್ಮ ಕಾರ್ಯಗಳಿಗೆ ಸದ್ವಿನಿಯೋಗ ಆಗಬೇಕು ಎಂದು ಸೂಡಿ ಡಾ| ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ಶ್ರೀಗಳು ಅಭಿಪ್ರಾಯಪಟ್ಟರು.
ನಗರದ ಶ್ರೀ ವೀರಸೋಮೇಶ್ವರ ಬಡಾವಣೆ ಹಿತರಕ್ಷಣಾ ಸಮಿತಿಯಿಂದ ನಿರ್ಮಿಸಿದ ಶ್ರೀ ಪವಾಡ ಆಂಜನೇಯ ಶಿಲಾಮೂರ್ತಿ ಪ್ರಾಣ ಪ್ರತಿಪಾಪನೆ ನೆರವೇರಿಸಿ ಬಳಿಕ ಧರ್ಮಸಭೆಯಲ್ಲಿ ಅವರು ಮಾತನಾಡಿ, ಕೇವಲ ಹಣಕ್ಕಾಗಿ ಓದುವುದು, ಅದಕ್ಕಾಗಿಯೇ ದುಡಿಯುವುದರಲ್ಲಿ ಆನಂದವಿಲ್ಲ. ಇದರ ಜೊತೆಗೆ ದಾನ, ಧರ್ಮ ಮಾಡಬೇಕು. ನಿಸ್ವಾರ್ಥ ಸೇವೆಯಿಂದ ದೇವರ, ಸದ್ಗುರುವಿನ ಸನ್ನಿಧಿಯ ಸತ್ಸಂಗದಲ್ಲಿ ಜೀವನ ಮಾಡಬೇಕು. ಅಂದಾಗ ಜೀವನದ ಮೋಕ್ಷಕ್ಕೆ ದಾರಿ ಸಿಗುವುದು ಎಂದರು.
ಮಾನವ ಧರ್ಮವನ್ನು ಅರಿತು ನಾವು ಸಮಾಜದ ಸೇವೆ ಮಾಡಬೇಕು. ಸ್ವಾರ್ಥದಿಂದ ಜೀವನದ ಉದ್ದೇಶವನ್ನು ಮರೆಯಬಾರದು. ದಾನಗಳಲ್ಲಿ ಮೂರು ಪ್ರಕಾರಗಳು. ಅದರಲ್ಲಿ ನಿಸ್ವಾರ್ಥದಿಂದ ದೇವಸ್ಥಾನ ಕಟ್ಟಲು ಮಾಡಿದ ದಾನ ಶ್ರೇಷ್ಠವಾದದ್ದು ಎಂದರು.
ಮುಕ್ತಿಮಂದಿರದ ವಿಮಲರೇಣುಕ ಶಿವಾಚಾರ್ಯರು ಮಾತನಾಡಿ, ಉತ್ತಮ ವಿಚಾರದಿಂದ ಸಂವೇದನಶೀಲರಾಗುತ್ತೇವೆ. ಸಂವೇದನೆಯಿಂದ ಕೆಲಸವಾಗುತ್ತದೆ. ಅಂದಾಗ ನಮ್ಮ ಸ್ವಯಂ ಖುಷಿಯ ಜೊತೆಗೆ ಪರಿಸರದಲ್ಲಿ ಖುಷಿ ನಿರ್ಮಾಣವಾಗುತ್ತದೆ ಎಂದರು.
ಡಾ| ಜಯಶ್ರೀ ಹೊಸಮನಿ ಮಾತನಾಡಿ, ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಮಾಜಿ ಅಧ್ಯಕ್ಷ ಚಂದ್ರು ಬಾಳಿಹಳ್ಳಿಮಠ, ಎಸ್.ವೈ. ಚಿಕ್ಕಟ್ಟಿ, ಉಮೇಶ ನಾಲ್ವಾಡ, ಕೆ.ಎನ್. ಕಂಕಾಳೆ, ವಿ.ಬಿ. ಬಿಸನಳ್ಳಿ, ಶಂಭುಲಿಂಗ ಪಟ್ಟದಕಲ್ಲು, ಅಶೋಕ ಗೊಜನೂರ, ಮೃತ್ಯುಂಜಯ ಸಂಕೇಶ್ವರ ವೇದಿಕೆಯಲ್ಲಿದ್ದರು.
ಇದೇ ವೇಳೆ ಧಾರವಾಡದ ಪುರೋಹಿತ ಬಾಲದೀಕ್ಷಿತ ತಾಪಸು ಹಾಗೂ ದಾನಿಗಳಿಗೆ, ಶಿಲ್ಪಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಮತರ ಭರತ ನಾಟ್ಯ ಪ್ರದರ್ಶಿಸಿದಳು. ಮಹೇಶ ಕುಂದ್ರಾಳಹಿರೇಮಠ ಭಕ್ತಿಗೀತೆ ಪ್ರಸ್ತುತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗದಗ: ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ
Gadag; ತೋಂಟದಾರ್ಯ ಮಠದ ಅದ್ದೂರಿ ಮಹಾರಥೋತ್ಸವ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ