ಲಕ್ಷ್ಮೇಶ್ವರದಲ್ಲಿ ಕುಡಿಯುವ ನೀರಿನ ಸಮಸ್ಯೆ
Team Udayavani, Dec 4, 2019, 5:17 PM IST
ಲಕ್ಷ್ಮೇಶ್ವರ: ಪಟ್ಟಣಕ್ಕೆ ತುಂಗಭದ್ರಾ ನದಿಯಿಂದ ಹರಿದು ಬರುವ ಕುಡಿಯುವ ನೀರಿನ ಸರಬರಾಜಿನಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿ ಕಳೆದ 8-10 ದಿನಗಳಿಂದ ಜನತೆಗೆ ಕುಡಿಯುವ ನೀರು ಸ್ಥಗಿತಗೊಂಡಿದೆ.
ತುಂಗಭದ್ರಾ ನದಿಯ ಪಾತ್ರವೇವುಂಡಿಯಲ್ಲಿನ ಜಾಕ್ವೆಲ್ ಮೂಲಕ ಮಾರ್ಗದ ಸೂರಣಗಿ ಹತ್ತಿರದ ಶುದ್ಧೀಕರಣಘಟಕದಲ್ಲಿ ನೀರು ಶುದ್ಧೀಕರಣಗೊಳ್ಳುತ್ತದೆ ಶುದ್ಧೀಕರಣ ಘಟಕದಲ್ಲಿನ ಕಿ.ವ್ಯಾ ಸಾಮರ್ಥ್ಯ ಟಿಸಿ ಸುಟ್ಟಿದ್ದರಿಂದ ನೀರು ಪೂರೈಕೆ ಸ್ಥಗಿತಗೊಂಡಿದೆ ಇದರಿಂದ ಪಟ್ಟಣವಷ್ಟೇಅಲ್ಲದೆ ಮಾರ್ಗದ ಐದಾರು ಹಳ್ಳಿಗಳಜನರಿಗೂ ನದಿ ನೀರು ಮರೀಚಿಕೆಯಾಗಿದ್ದು ಜನತೆ ಅನಿವಾರ್ಯವಾಗಿ ಸವುಳು ನೀರಿಗೆ ಮೊರೆ ಹೋಗಿದ್ದಾರೆ.
ಈ ಕುರಿತು ಪುರಸಭೆ ಸದಸ್ಯರಾದ ಪ್ರವೀಣ ಬಾಳಿಕಾಯಿ, ಮಹೇಶ ಹೊಗೆಸೊಪ್ಪಿನ ಪ್ರತಿಕ್ರಿಯಿಸಿ, ನದಿಯಲ್ಲಿ ಅಪಾರ ಪ್ರಮಾಣ ನೀರಿರುವ ಕಾಲದಲ್ಲಿಯೂ ಜನತೆ ಸವುಳುನೀರು ಕುಡಿಯುವ ಪರಿಸ್ಥಿತಿ ನಿರ್ಮಾಣಕ್ಕೆ ಅಧಿಕಾರಿಗಳ ನಡುವಿನ ಶಿಥಲ ಸಮರ ಮತ್ತು ನಿರ್ಲಕ್ಷವೇ ಕಾರಣವಾಗಿದೆ. ನೀರು ಸರಬರಾಜು ಮಾಡುವ ಮೋಟರ್ ಟಿಸಿ ದುರಸ್ತಿ ಮಾಡಿಕೊಡುವ ಗುತ್ತಿಗೆದಾರರಿಗೆ ಸರಿಯಾಗಿ ಹಣ ಪಾವತಿಸದಿದ್ದರಿಂದ ಅವರು ದುರಸ್ತಿಗೆ ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟ ಪ್ರತಿಕ್ರಿಯಿಸಿ ಮೋಟರ್ ಟಿಸಿ ದುರಸ್ತಿ ಮಾಡುವ ಗುತ್ತಿಗೆದಾರರ ಪೇಮೆಂಟ್ ಮಾಡುವಲ್ಲಿ ಕೆಲ ತಾಂತ್ರಿಕ ತೊಂದರೆಯಾಗಿದೆ ನದಿ ನೀರು ಸ್ಥಗಿತವಾಗಿದ್ದರೂ ಸ್ಥಳೀಯವಾಗಿ ಲಭ್ಯವಿರುವ ಬೋರ್ವೆಲ್ಗಳ ಮೂಲಕ ಮನೆ ಮತ್ತು ಸಾರ್ವಜನಿಕ ನಲ್ಲಿಗಳಿಂದನೀರಿನ ವ್ಯವಸ್ಥೆ ಮಾಡಲಾಗುತ್ತಿದೆ ಸುಟ್ಟಿರುವ ಟಿಸಿ ದುರಸ್ತಿಗೆ ಕೊಟ್ಟಿದ್ದು ಇನ್ನೆರಡು ದಿನಗಳಲ್ಲಿ ನದಿ ನೀರು ಸರಬರಾಜಾಗಲಿದೆ ಎನ್ನುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಗದಗ: ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ