ಕುಡಿವ ನೀರು ಸಮರ್ಪಕ ಪೂರೈಕೆಗಾಗಿ ರಸ್ತೆ ತಡೆದು ಪ್ರತಿಭಟನೆ
Team Udayavani, May 22, 2019, 9:10 AM IST
ರೋಣ: ಪಟ್ಟಣದ 21ನೇ ವಾರ್ಡ್ ನಿವಾಸಿಗಳು ನೀರಿಗಾಗಿ ರಸ್ತೆಗಿಳಿದು ಪ್ರತಿಭಟಿಸಿದರು.
ರೋಣ: ಕಳೆದ ಮೂರು ವಾರಗಳಿಂದ ನೀರು ಬಾರದಿರುವುದನ್ನು ಖಂಡಿಸಿ ಪಟ್ಟಣದ 21ನೇ ವಾರ್ಡ್ ನಿವಾಸಿಗಳು ರೋಣ-ನರಗುಂದ ರಸ್ತೆ ತಡೆದು ಪ್ರತಿಭಟಿಸಿದರು.
ಕುಡಿಯುವ ನೀರನ್ನು ಸಮರ್ಪಕವಾಗಿ ಪೂರೈಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು. ಪುರಸಭೆ ನೀರು ಸರಬರಾಜು ಸಿಬ್ಬಂದಿ ಬಸವರಾಜ ಕಿರೇಸೂರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, 21ನೇ ವಾರ್ಡ್ಗೆ ನೀರು ಪೂರೈಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ನಿವಾಸಿಗಳು ಪ್ರತಿಭಟನೆ ಹಿಂಪಡೆದರು.
ಗೀತಾ ನವಲಗುಂದ, ರೇಣುಕಾ ಹಾಳಕೇರಿ, ಸಾವಿತ್ರಿ ಸೂಡಿ, ದಾವಲಬೀ ಡಲಾವತ, ಸಾವಿತ್ರಿ ಜಾಧವ, ಸೈನಾಜಬೀ ಮುಲ್ಲಾ, ಬಾಬು ದಳವಾಯಿ, ಪ್ರಭು ಸೂಡಿ, ಸಂಗಮೇಶ ಹಿರೇಮಠ, ಬಸವರಾಜ ಚೊಳಚಗುಡ್ಡ, ಪ್ರಭು ಪಾಟೀಲ, ಬುಡ್ನೇಸಾಬ ಕೊಲ್ಕಾರ, ಮಕ್ತುಮಸಾಬ ಮುಲ್ಲಾ, ಹುಸೇನಸಾಬ ಅರಮನಿ, ಮಕ್ತುಮಸಾಬ ಗೋನಾಳ, ಅಬ್ದುಲ್ ಇದ್ಲಿ ಸೇರಿದಂತೆ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag; ನಮ್ಮದು ಬಡವರಿಗೆ ಬದುಕು ಕಟ್ಟಿ ಕೊಡುವ ಪ್ರಣಾಳಿಕೆ: ಬಸವರಾಜ ಬೊಮ್ಮಾಯಿ
Panchmasali ಸಮಾಜಕ್ಕೆ ಬಿಜೆಪಿಯಿಂದ ಅನ್ಯಾಯ: ವಚನಾನಂದ ಸ್ವಾಮೀಜಿ
Gadag; ವೀರೇಶ್ವರ ಪುಣ್ಯಾಶ್ರಮಕ್ಕೆ ಭೇಟಿ ನೀಡಿ ಗದ್ದುಗೆಯ ದರ್ಶನಾಶೀರ್ವಾದ ಪಡೆದ ಶ್ರೀರಾಮುಲು
Naregal; ಪ್ರೇಮಿಯೊಂದಿಗೆ ನೇಣಿಗೆ ಶರಣಾದ ನವವಿವಾಹಿತೆ!
Gadag; ವಚನಾನಂದ ಶ್ರೀಗಳ ಮಾತನ್ನು ಗಂಭೀರವಾಗಿ ಪರಿಗಣಿಸುತ್ತೇವೆ: ಬಸವರಾಜ ಬೊಮ್ಮಾಯಿ