ಈರುಳ್ಳಿ ಬೆಲೆ ದಿಢೀರ್ ಕುಸಿತ; ರೈತರ ಪ್ರತಿಭಟನೆ
Team Udayavani, Oct 18, 2019, 6:29 PM IST
ಗದಗ: ಸ್ಥಳೀಯ ಎಪಿಎಂಸಿಯಲ್ಲಿ ಈರುಳ್ಳಿ ದಿಢೀರ್ ಕುಸಿದಿರುವುದನ್ನು ಖಂಡಿಸಿ ರೈತರು ಕೃಷಿ ಉತ್ಪನ್ನ ಮಾರುಕಟ್ಟೆ ಆಡಳಿತ ಕಚೇರಿಗೆ ಶುಕ್ರವಾರ ಬೀಗ ಜಡಿದು ಪ್ರತಿಭಟನೆ ನಡೆಸಿದರು. ಈ ವೇಳೆ ಕಚೇರಿ ಒಳಗಿದ್ದ ಕೆಲ ಸಿಬ್ಬಂದಿ ದಿಗ್ಭಂಧನಕ್ಕೆ ಒಳಗಾದರು.
ಜಿಲ್ಲೆಯ ಗದಗ, ರೋಣ ಹಾಗೂ ಕೊಪ್ಪಳದಿಂದ ಸುಮಾರು ೨ ಸಾವಿರ ಕ್ವಿಂಟಾಲ್ ಈರುಳ್ಳಿ ಆವಕವಾಗಿದೆ. ಇದರಿಂದ ಉದ್ದೇಶ ಪೂರ್ವಕವಾಗಿ ಖರೀದಿದಾರರು ಹಾಗೂ ದಲ್ಲಾಳಿಗಳು ಶಾಮೀಲಾಗಿ ಬೆಲೆ ಕಡಿಮೆ ಮಾಡಿದ್ದಾರೆ. ಇದೇ ಮಾರುಕಟ್ಟೆಯಲ್ಲಿ ಗುರುವಾರ ೨೪೦೦ ರೂ. ದರದಲ್ಲಿ ಮಾರಾಟವಾಗಿದ್ದ ಉತ್ಕೃಷ್ಠ ಗುಣಮಟ್ಟದ ಈರುಳ್ಳಿಗೆ ಇಂದು ಕೇವಲ ೧೪,೦೦ ರೂ. ನಿಗದಿಗೊಳಿಸಿದ್ದಾರೆ. ಅದೂ ನಾಲ್ಕೈದು ಕ್ವಿಂಟಾಲ್ಗೆ ಮಾತ್ರ. ಇನ್ನುಳಿದಂತೆ ಸಾಮಾನ್ಯ ಗಡ್ಡೆಗೆ ಕೇವಲ ೧೦೦, ೩೦೦, ೫೦೦ ಹಾಗೂ ೮೦೦ ರೂ. ದರ ಕಟ್ಟಿ ರೈತರನ್ನು ವಂಚಿಸುತ್ತಿದ್ದಾರೆ ಎಂದು ಆರೋಪಿಸಿ, ಧಿಕ್ಕಾರ ಕೂಗಿದರು.
ಬಳಿಕ ಎಪಿಎಂಸಿ ಅಧ್ಯಕ್ಷ ಸಿ.ಬಿ.ಬಡ್ನಿ ಅಧ್ಯಕ್ಷತೆಯಲ್ಲಿ ರೈತರು, ವರ್ತಕರು ಹಾಗೂ ದಲ್ಲಾಳಿಗಳ ಸಮಾಲೋಚನೆ ಸಭೆ ನಡೆಸಿ, ಮರು ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag; ನಮ್ಮದು ಬಡವರಿಗೆ ಬದುಕು ಕಟ್ಟಿ ಕೊಡುವ ಪ್ರಣಾಳಿಕೆ: ಬಸವರಾಜ ಬೊಮ್ಮಾಯಿ
Panchmasali ಸಮಾಜಕ್ಕೆ ಬಿಜೆಪಿಯಿಂದ ಅನ್ಯಾಯ: ವಚನಾನಂದ ಸ್ವಾಮೀಜಿ
Gadag; ವೀರೇಶ್ವರ ಪುಣ್ಯಾಶ್ರಮಕ್ಕೆ ಭೇಟಿ ನೀಡಿ ಗದ್ದುಗೆಯ ದರ್ಶನಾಶೀರ್ವಾದ ಪಡೆದ ಶ್ರೀರಾಮುಲು
Naregal; ಪ್ರೇಮಿಯೊಂದಿಗೆ ನೇಣಿಗೆ ಶರಣಾದ ನವವಿವಾಹಿತೆ!
Gadag; ವಚನಾನಂದ ಶ್ರೀಗಳ ಮಾತನ್ನು ಗಂಭೀರವಾಗಿ ಪರಿಗಣಿಸುತ್ತೇವೆ: ಬಸವರಾಜ ಬೊಮ್ಮಾಯಿ