ಎಲ್ಲರೂ ಒಟ್ಟಾಗಿ ಶ್ರಮಿಸಿ ಕೊರೊನಾ ತಡೆಯೋಣ
Team Udayavani, May 7, 2021, 11:06 PM IST
ಹೊಳೆಆಲೂರ: ಇತ್ತೀಚೆಗೆ ನಗರ ಪ್ರದೇಶಗಳಿಂದ ಗ್ರಾಮಕ್ಕೆ ಅನೇಕ ಜನ ಬಂದಿರುವುದು ಆತಂಕ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಜಿಪಂ ಆಡಳಿತ ಪ್ರತಿಯೊಂದು ಗ್ರಾಪಂ ಮಟ್ಟದಲ್ಲಿ ಕೊರೊನಾ ಕಾರ್ಯಪಡೆ ರಚನೆ ಮಾಡಿದೆ. ಗ್ರಾಪಂ ಸಿಬ್ಬಂದಿ, ಆರೋಗ್ಯ, ಶಿಕ್ಷಣ, ಅಂಗನವಾಡಿ, ಆರಕ್ಷಕ ಪಡೆಯವರು ಒಟ್ಟಾಗಿ ಶ್ರಮಿಸಿ ಕೊರೊನಾ ತಡೆಯೋಣ ಎಂದು ಗ್ರಾಪಂ ಪಿಡಿಒ ಬಸವರಾಜ ಗಿರಿತಿಮ್ಮಣ್ಣವರ ಹೇಳಿದರು. ಗ್ರಾಪಂ ಸಭಾಭವನದಲ್ಲಿ ನಡೆದ ಗ್ರಾಪಂ ಮಟ್ಟದ ಕೊರೊನಾ ತಡೆ ಕಾರ್ಯಪಡೆ ಸಭೆಯಲ್ಲಿ ಮಾತನಾಡಿದರು.
ಕಾರ್ಯಪಡೆಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು, ಗ್ರಾಪಂ ಸಿಬ್ಬಂದಿ, ಸದಸ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ವಿವಿಧ ಸೇವಾ ಕ್ಷೇತ್ರಗಳ ಸಿಬ್ಬಂದಿಯನ್ನು ಸೇರಿಸಿಕೊಂಡು ಕೊರೊನಾ ತಡೆಯುವಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯ ಮಾಡೋಣ. ಗುರುವಾರ ಕರೆದಿದ್ದ ಸ್ಥಳೀಯ ಆಸ್ಪತ್ರೆಗಳ ವೈದ್ಯರು ಹಾಗೂ ಮೆಡಿಕಲ್ ಶಾಪ್ ಮಾಲಿಕರ ಸಭೆಗೆ ಹಾಜರಾಗದವರಿಗೆ ತಿಳಿವಳಿಕೆ ಪತ್ರ ನೀಡಿ, ಇನ್ನೊಮ್ಮೆ ಸಭೆ ಕರೆಯುತ್ತೇವೆ ಎಂದರು. ಹೆಸ್ಕಾಂ ಅ ಧಿಕಾರಿ ಹಸನ್ ಗಡಾದ ಮತನಾಡಿ, ಮಾಸ್ಕ್ ಇಲ್ಲದೇ ಓಡಾಡುವವರಿಗೆ ಕಡ್ಡಾಯವಾಗಿ ದಂಡ ವಿಧಿಸಬೇಕೆಂದರು.
ವೈದ್ಯಾ ಧಿಕಾರಿ ಡಾ|ವೀರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಕೊರೊನಾ ಲಸಿಕೆ ಬಗ್ಗೆ ಜಾಗೃತರಾಗುವಂತೆ ತಿಳಿವಳಿಕೆ ನೀಡಿ ಜನರು ಹೆಚ್ಚು ಲಸಿಕೆ ಹಾಕಿಸಿಕೊಂಡಲ್ಲಿ ಕೊರೊನಾ ತಡೆಯಲು ಸಾಧ್ಯವಾಗುತ್ತದೆ ಎಂದರು. ಆರೋಗ್ಯ ಸಿಬ್ಬಂದಿ ರಂಗಪ್ಪ ಮಾತನಾಡಿ, ಕೊರೊನಾ ಪಾಸಿಟಿವ್ ಬಂದವರು ನಮಗೆ ಮನೆಗೆ ಬರಬೇಡಿ ಎಂದು ತಾಕೀತು ಮಾಡುತ್ತಾರೆ. ಅಲ್ಲದೇ, ಬಂದರೆ ಮುಂದೆ ನೋಡಿಕೊಳ್ಳುತ್ತೇವೆ ಎಂದು ಧಮಕಿ ಹಾಕುತ್ತಿದ್ದಾರೆ. ಅಂತವರ ಮೇಲೆ ಸೂಕ್ತ ಕ್ರಮ ಜರುಗಿಸಿ, ನಮಗೆ ಭದ್ರತೆ ಒದಗಿಸಬೇಕೆಂದರು.
ಉಪತಹಶೀಲ್ದಾರ್ ಕೆ.ಎ.ಬೆಟಗೇರಿ ಮಾತನಾಡಿ, ಎಲ್ಲಾ ಇಲಾಖೆಗಳ ಸಹಯೋಗದಲ್ಲಿ ಒಟ್ಟಾರೆ ಕೊರೊನಾ ತಡೆಗಟ್ಟುವುದು ನಮ್ಮ ಗುರಿಯಾಗಲಿ ಎಂದರು.
ಗ್ರಾಪಂ ಸದಸ್ಯರು ಶುಕ್ರವಾರದ ಸಂತೆಯನ್ನು ಎಪಿಎಂಸಿ ಆವರಣದಲ್ಲಿ ನಡೆಸುವಂತೆ ಸೂಚಿಸಿದರು. ಗ್ರಾಪಂ ಸದಸ್ಯೆ ಸುಮಂಗಲಾ ಕಲ್ಲಾಪೂರ, ಶ್ರೀಜ್ಯೋತಿ ಗಾಣಿಗೇರ, ಶಾರದಾ ದಳವಾಯಿ, ವೀರಯ್ಯ ವಸ್ತ್ರದ, ಕಲ್ಮೇಶ ಗಾಣಿಗೇರ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಸಂಗಪ್ಪ ದುಗ್ಗಲದ, ಉಪಾಧ್ಯಕ್ಷೆ ರೇಣುಕಾ ತೆಗ್ಗಿ, ಗ್ರಾಪಂ ಸದಸ್ಯರಾದ ಅಲ್ಲಿಸಾಬ ನದಾಫ್, ಪರಶುರಾಮ ಜಿಗಳೂರ, ಪ್ರಕಾಶ ಭಜಂತ್ರಿ, ಶೋಭಾ ಚಲವಾದಿ, ನಿರ್ಮಲಾ ಪಾಟೀಲ, ಚಂದವ್ವ ಪೂಜಾರ, ನಾಗರತ್ನಾ ಚವ್ಹಾಣ, ಬಾನುಬಿ ಪಾಟೀಲ, ಸಂಜೋತಾ ಗಾಣಿಗೇರ, ಪೋಮಪ್ಪ ಲಮಾಣಿ, ಆರೋಗ್ಯ ಇಲಾಖೆಯ ಸಿಬ್ಬಂದಿ, ಸರಕಾರಿ ಶಾಲಾ ಶಿಕ್ಷಕರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮುಂತಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗದಗ: ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ
Gadag; ತೋಂಟದಾರ್ಯ ಮಠದ ಅದ್ದೂರಿ ಮಹಾರಥೋತ್ಸವ
MUST WATCH
ಹೊಸ ಸೇರ್ಪಡೆ
Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ
Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ
Lok Sabha Election; ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ
BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್ವೈ
Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ