ನಗರದಲ್ಲೇ ಸಿದ್ಧಗೊಳ್ಳುತ್ತಿವೆ ವೈದ್ಯರಿಗೆ ಪಿಪಿಇ ಕಿಟ್
ಪ್ರತಿನಿತ್ಯ 250-300 ಕಿಟ್ಗಳ ತಯಾರುಐಎಂಎ, ಜಿಮ್ಸ್ ವೈದ್ಯರ ಜಂಟಿ ಪ್ರಯತ್ನಕ್ಕೆ ಯಶಸ್ಸುಪಿಪಿಇ ಕಿಟ್ ಭಾರಿ ಬೇಡಿಕೆ
Team Udayavani, Apr 9, 2020, 1:47 PM IST
ಗದಗ: ನಗರದಲ್ಲಿ ವೈದ್ಯರ ಅನುಕೂಲಕ್ಕಾಗಿ ಪಿಪಿಇ ಕಿಟ್ಗಳನ್ನು ತಯಾರಿಸಲಾಗುತ್ತಿದೆ ಹಾಗೂ ಈ ಕಿಟ್ಗಳನ್ನು ಇಲ್ಲಿನ ಐಎಂಎ ಸಭಾಂಗಣದಲ್ಲಿ ಪ್ರದರ್ಶಿಸಲಾಯಿತು.
ಗದಗ: ಎಲ್ಲೆಡೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಸರಕಾರಿ ಹಾಗೂ ಖಾಸಗಿ ವಲಯದ ವೈದ್ಯರಿಂದ ಪಿಪಿಇ (ಪರ್ಸನಲ್ ಪ್ರೊಟೆಕ್ಷನ್ ಇಕ್ವಿಪ್ಮೆಂಟ್) ಕಿಟ್ಗಳಿಗೆ ಬೇಡಿಕೆ ಹೆಚ್ಚುತ್ತಿವೆ. ಆದರೆ ಪೂರೈಕೆಯಿಲ್ಲದ್ದರಿಂದ ಅವುಗಳ ಬೆಲೆಯೂ ಗಗನಕ್ಕೇರಿದೆ. ಪರಿಸ್ಥಿತಿ ಅರಿತ ಸ್ಥಳೀಯ ಐಎಂಎ, ಜಿಮ್ಸ್ ಆಸ್ಪತ್ರೆಯ ವೈದ್ಯರು ಸ್ಥಳೀಯ ಟೇಲರ್ಗಳ ನೆರವಿನಿಂದ ಪಿಪಿಇ ತಯಾರಿಕೆಗೆ ಮುಂದಾಗಿದ್ದಾರೆ.
ಸಾಮಾನ್ಯವಾಗಿ 700 ರೂ.ಗೆ ದೊರೆಯುತ್ತಿದ್ದ ಅಜ್ಮಸ್ ಸೂಟ್ಗಳು 2000-2500 ರೂ. ಬೆಲೆಯಲ್ಲಿ ಮಾರಾಟಗೊಳ್ಳುತ್ತಿದ್ದವು. ಇದನ್ನರಿತು ಡಾ| ಪವನ್ ಪಾಟೀಲ ಮುಂದಾಳತ್ವದಲ್ಲಿ ಪಿಪಿಇ ಕಿಟ್ ತಯಾರಿಸಲಾಗುತ್ತಿದೆ. ವೈದ್ಯಕೀಯ ನಿಯಮಾವಳಿಯಂತೆ 50-60 ಜಿಎಸ್ಎಂ ಗಾತ್ರದ ಹಳದಿ, ಕೆಂಪು ಹಾಗೂ ನೀಲಿ ಬಣ್ಣದ ಬಟ್ಟೆಗಳನ್ನು ಹುಬ್ಬಳ್ಳಿಯಿಂದ ಖರೀದಿಸಲಾಗಿದೆ. ಐಎಂಎ ಗುರುತಿಸಿದ ಸ್ಥಳದಲ್ಲಿ ಸುಮಾರು 20 ಟೈಲರ್ಗಳು ತಲೆಗೆ ಶೀಲ್ಡ್ ಸಹಿತ ಅಜ್ಮಸ್ ಸೂಟ್ ಹೊಲಿಯುತ್ತಿದ್ದಾರೆ. ಇನ್ನುಳಿದಂತೆ ಕಾಲು ಚೀಲಗಳನ್ನು ಎನ್.ಬಿ. ಆಸ್ಪತ್ರೆಯಿಂದ ತಯಾರಿಸಲಾಗುತ್ತಿದೆ. ಅದರೊಂದಿಗೆ ಎನ್.ಬಿ. ಪಾಟೀಲ ಆಸ್ಪತ್ರೆಯಿಂದ ದಪ್ಪ ಗಾತ್ರ ಪ್ಲಾಸ್ಟಿಕ್ ಬಳಸಿ ಕಾಲು ಚೀಲಗಳನ್ನು ತಯಾರಿಸುತ್ತಿದ್ದಾರೆ. ವೈದ್ಯರು ಧರಿಸಬೇಕಾದ ಕನ್ನಡಕಗಳನ್ನು ಹುಬ್ಬಳ್ಳಿಯಿಂದ ತಂದಿದ್ದಾರೆ. ಹೀಗೆ ಒಟ್ಟುಗೂಡಿಸಿ ಪಿಪಿಇ ಕಿಟ್ಗಳನ್ನು ತಯಾರಿಸುತ್ತಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಪಿಪಿಇ ಕಿಟ್ ತಯಾರಿಕೆ ಆರಂಭವಾಗಿದ್ದು, ಪ್ರತಿನಿತ್ಯ 250ರಿಂದ 300 ಕಿಟ್ಗಳನ್ನು ತಯಾರಿಸಲಾಗುತ್ತಿದ್ದು, ವಿವಿಧ ರಾಜ್ಯಗಳ ಆಸ್ಪತ್ರೆಯಿಂದಲೂ ಬೇಡಿಕೆ ಬರುತ್ತಿದೆ.
ಕೋವಿಡ್ ಸೇರಿದಂತೆ ವೈರಾಣು ಹರಡುವ ಗಂಭೀರ ಸ್ವರೂಪದ ಕಾಯಿಲೆ ಇರುವ ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಪಿಪಿಇ ಕಿಟ್ ಬೇಕು. ಈ ಕಿಟ್ಗಳು ಮರು ಬಳಸಲಾಗದು. ಒಮ್ಮೆ ಬಳಸಿದ ನಂತರ ಅವುಗಳನ್ನು ವೈಜ್ಞಾನಿಕವಾಗಿ ನಾಶಪಡಿಸಲಾಗುತ್ತದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕಿಟ್ಗಳು ಬೇಕಾಗುತ್ತವೆ.
ಸದ್ಯ ಎಲ್ಲೆಡೆ ಅಜ್ಮಸ್ ಸೂಟ್ಗಳು ಸಿಗುತ್ತಿಲ್ಲ ಎಂಬ ಕಾರಣಕ್ಕೆ ನಮ್ಮಲ್ಲೇ ತಯಾರಿಸುತ್ತಿದ್ದೇವೆ. ನಮ್ಮ ವೈದ್ಯಕೀಯ ಮಾರ್ಗಸೂಚಿಗಳಂತೆ ನಾವು ವಿವಿಧ ರೀತಿಯಲ್ಲಿ ಬಟ್ಟೆ ಹಾಗೂ ಇನ್ನಿತರೆ ವಸ್ತುಗಳನ್ನು ಪ್ರಯೋಗಕ್ಕೆ ಒಳಡಿಸಿದ್ದೇವೆ. ಅವು ತೇವಾಂಶ ಹೀರಿಕೊಳ್ಳದ ಹಾಗೂ ಒಂದು ಕಡೆಯಿಂದ ಇನ್ನೊಂದು ಕಡೆ ವರ್ಗಾಹಿಸುವುದಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಂಡಿದ್ದೇವೆ. ಆದರೂ, ಕೊಯಮತ್ತೂರು ಮೂಲದ ಐಎಎಸ್ಒ ಪ್ರಮಾಣ ಪತ್ರ ಪಡೆಯಬೇಕು. ಆದರೆ ಅಗತ್ಯ ಸಂದರ್ಭದಲ್ಲಿ ಏನೂ ಇಲ್ಲ ಎನ್ನುವುದಕ್ಕಿಂತ ಇದನ್ನು ಬಳಸಬಹುದು ಎಂಬುದು ನಮ್ಮ ಉದ್ದೇಶ.
ಡಾ| ಪವನ್ ಪಾಟೀಲ,
ಪಿಪಿಇ ಕಿಟ್ ತಯಾರಿಕೆಯ ರೂವಾರಿ
ವಿಶೇಷ ವರದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗದಗ: ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ
Gadag; ತೋಂಟದಾರ್ಯ ಮಠದ ಅದ್ದೂರಿ ಮಹಾರಥೋತ್ಸವ
MUST WATCH
ಹೊಸ ಸೇರ್ಪಡೆ
ದಿ| ಜಾರ್ಜ್ ಫೆರ್ನಾಂಡಿಸ್ ಆದರ್ಶ, ಅವರೇ ಸ್ಫೂರ್ತಿ: ಕ್ಯಾ| ಬ್ರಿಜೇಶ್ ಚೌಟ
ಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ
ಉಡುಪಿ-ಚಿಕ್ಕಮಗಳೂರು; ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಸ್ಪಷ್ಟತೆಯಿದೆ: ಜೆ.ಪಿ.
ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ
Kinnigoli ಅಡಿಕೆ, ಹಿಂಗಾರ ಕಳವು ಮಾಡುತ್ತಿದ್ದ ವ್ಯಕ್ತಿಯ ಸೆರೆ