ಸಾರ್ವಜನಿಕರ ಸಹಭಾಗಿತ್ವದಲ್ಲಿ ಆಡಳಿತ
Team Udayavani, Dec 27, 2020, 2:58 PM IST
ಮುಳಗುಂದ: ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ಅನ್ನು ತಿದ್ದುಪಡಿ ಮಾಡಿ ಕರ್ನಾಟಕ ಪೌರಸಭೆಗಳ ಅಧ್ಯಾಯ 111-ಎ ರಂತೆ 2020 ಜಾರಿ ಅನ್ವಯ ನೆರೆ ಹೊರೆ ಗುಂಪು, ಪ್ರದೇಶ ಸಭಾ, ವಾರ್ಡ್ ಸಮಿತಿ ರಚನೆ ಅನುಷ್ಠಾನ ಕಾರ್ಯಕ್ರಮ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮುಳಗುಂದ ಪಪಂ ಪ್ರಥಮ ಹೆಜ್ಜೆಯಲ್ಲಿ ಅನುಷ್ಠಾನಗೊಳಿಸುವ ಕಾರ್ಯಕ್ರಮಕ್ಕೆ ಇಲ್ಲಿನ ಎಪಿಎಂಸಿ ಆವರಣದಲ್ಲಿ ಶಾಸಕ ಎಚ್.ಕೆ. ಪಾಟೀಲ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಂವಿಧಾನ ರಚನೆಯಿಂದಾಗಿ ದೇಶದ ಜನರ ಜೀವನ ಮಟ್ಟ ಸುಧಾರಣೆಯಾದಂತೆ ಪೌರಸಭೆ ಅಧಿನಿಯಮ ತಿದ್ದುಪಡಿಯಿಂದ ಸಾರ್ವಜನಿಕರ ಸಹಭಾಗಿತ್ವದಲ್ಲಿ ಪಾರದರ್ಶಕತೆ, ಅಭಿವೃದ್ಧಿಯ ದೃಷ್ಟಿಯಿಂದ ರಚನಾತ್ಮಕ ಬದಲಾವಣೆ ಪಟ್ಟಣದಪ್ರದೇಶದಲ್ಲಿ ಸಾಧ್ಯವಿದೆ. ನೆರೆ ಹೊರೆ ಗುಂಪು,ಪ್ರದೇಶ ಸಭೆ ಹಾಗೂ ವಾರ್ಡ್ ಸಮಿತಿಗಳಮೂಲಕ ಸ್ವತ್ಛತೆ ಸೇರಿದಂತೆ ಹಲವಾರುಸಾರ್ವಜನಿಕರ ಕುಂದು ಕೊರತೆಗಳನ್ನುಸ್ಥಳೀಯ ಮಟ್ಟದಲ್ಲಿ ನಿವಾರಿಸುವುದು ಹಾಗೂ ಅಗತ್ಯ ಸೌಲಭ್ಯಗಳನ್ನು ವಾರ್ಡ್ ಸಭೆಗಳ ಮೂಲಕ ಕ್ರಿಯಾಯೋಜನೆ ರೂಪಿಸುವ ಕ್ರಾಂತಿಕಾರಕ ಕಾಯ್ದೆ ರಾಜ್ಯಕ್ಕೆ ಮಾದರಿಯಾಗಿದೆ ಎಂದರು.
ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ನೂತನವಾಗಿ ಜಾರಿಯಾದಪೌರಸಭೆ ಕಾಯ್ದೆ ರಾಜ್ಯದ ಪ್ರತಿಜಿಲ್ಲೆಗಳಲ್ಲಿಯೂ ಆಯಾ ಜಿಲ್ಲಾಧಿಕಾರಿಗಳಮೂಲಕ ಅನುಷ್ಠಾನಗೊಳಿಸಲುಸರ್ಕಾರ ಆದೇಶ ನೀಡಿದ್ದು, ನೆರೆ ಹೊರೆಗುಂಪು ರಚನೆಯಿಂದ ಸಾರ್ವಜನಿಕರಿಗೆ ಸದಸ್ಯರಷ್ಟೆ ಎಲ್ಲ ಬಗೆಯ ಅಧಿಕಾರ ದೊರೆಯುವಂತಾಗಿದೆ. ಸಾರ್ವಜನಿಕರು ಇಂಥ ಮಹತ್ತರ ಯೋಜನೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಯೋಜನೆ ಯಶಸ್ವಿಗೊಳಿಸಿ ರಾಜ್ಯದಲ್ಲಿ ಮೊದಲ ಬಾರಿಗೆ ಅನುಷ್ಠಾನಗೊಳ್ಳುತ್ತಿರುವ ಮುಳಗುಂದ ಮಾದರಿ ಗ್ರಾಮವಾಗಿ ಬೆಳವಣಿಗೆ ಹೊಂದಬೇಕು ಎಂದರು.
ಆರ್.ಎನ್. ದೇಶಪಾಂಡೆ, ಸಿದ್ದು ಪಾಟೀಲ, ಎಸ್.ಎಂ. ನೀಲಗುಂದ, ಬಿ.ವಿ. ಸುಂಕಾಪುರ ಸೇರಿದಂತೆ ಇತರರು ಇದ್ದರು. ಎಂ.ಎಸ್. ಬೆಂತೂರ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag; ನಮ್ಮದು ಬಡವರಿಗೆ ಬದುಕು ಕಟ್ಟಿ ಕೊಡುವ ಪ್ರಣಾಳಿಕೆ: ಬಸವರಾಜ ಬೊಮ್ಮಾಯಿ
Panchmasali ಸಮಾಜಕ್ಕೆ ಬಿಜೆಪಿಯಿಂದ ಅನ್ಯಾಯ: ವಚನಾನಂದ ಸ್ವಾಮೀಜಿ
Gadag; ವೀರೇಶ್ವರ ಪುಣ್ಯಾಶ್ರಮಕ್ಕೆ ಭೇಟಿ ನೀಡಿ ಗದ್ದುಗೆಯ ದರ್ಶನಾಶೀರ್ವಾದ ಪಡೆದ ಶ್ರೀರಾಮುಲು
Naregal; ಪ್ರೇಮಿಯೊಂದಿಗೆ ನೇಣಿಗೆ ಶರಣಾದ ನವವಿವಾಹಿತೆ!
Gadag; ವಚನಾನಂದ ಶ್ರೀಗಳ ಮಾತನ್ನು ಗಂಭೀರವಾಗಿ ಪರಿಗಣಿಸುತ್ತೇವೆ: ಬಸವರಾಜ ಬೊಮ್ಮಾಯಿ
MUST WATCH
ಹೊಸ ಸೇರ್ಪಡೆ
CSK; ಐಪಿಎಲ್ ನಿಂದ ಹೊರಬಿದ್ದ ಕಾನ್ವೆ; ಚೆನ್ನೈ ಪಾಳಯಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ
ED; ರಾಜ್ ಕುಂದ್ರಾ ಅವರ 97 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ
LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ
Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ