ಜನಮನ ರಂಜಿಸಿದ ಹಂತಿ ಪದ ಸ್ಪರ್ಧೆ

ಕಲಬುರಗಿ ಶರಣಬಸವೇಶ್ವರ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಎತ್ತುಗಳಿಂದ ರಾಶಿ ಮಾಡಿದ ಭಕ್ತರು

Team Udayavani, Apr 8, 2022, 2:38 PM IST

13

ರೋಣ: “ಹೊಟ್ಟ ಹೋತು ಪಟ್ಟಣಕ ಕಂಕಿ ಹೋತು ಕಂಕಣಕ, ಮುತ್ತಿನ ಸೆಳ್ಳು ಮುಗಿಲುದ್ದ ರಾಶಿ, ಆಹಾ ಪುಲ್ಲಿಗೋ ಮನಕಾಲ ಮುರಿಗೋ, ಹುಲ್ಲಲಗ್ಯೋ ಚಲಾಂಬರಗ್ಯೋ ಹೊರ ಮಲ್ಲಯ್ಯ ಹುಲಸ್‌ ಕೊಡಯ್ಯ’ ಈ ಪದಗಳು ಏನು ಅಂತಿರಾ, ಇವು ಹಿಂದಿನ ಕಾಲದಲ್ಲಿ ರೈತರು ಎತ್ತುಗಳ ಸಹಾಯದಿಂದ ರಾಶಿ ಮಾಡುವಾಗ ಹಾಡುತ್ತಿದ್ದ ಹಂತಿ ಪದಗಳು.

ಇಂದಿನ ಆಧುನಿಕ ಭರಾಟೆಯಲ್ಲಿ ಇಂತಹ ಕಾರ್ಯಕ್ರಮ ನಡೆದದ್ದು, ತಾಲೂಕಿನ ಮಾಡಲಗೇರಿ ಗ್ರಾಮದ ಕಲಬುರಗಿ ಶರಣಬಸಣ್ಣನವರ 49ನೇ ಪುರಾಣ ಪ್ರವಚನ ಪ್ರಯುಕ್ತ ಏರ್ಪಡಿಸಿದ್ದ ರಾಶಿ ಕಾರ್ಯಕ್ರಮದಲ್ಲಿ.

ಈ ಕಾರ್ಯಕ್ರಮಕ್ಕೆ ಎತ್ತನ್ನು ಕಟ್ಟಲು ಸವಾಲ್‌ ಮೂಲಕ ದೇವಾಸ್ಥಾನಕ್ಕೆ ಹಣವನ್ನು ಕೊಟ್ಟು ಎತ್ತನ್ನು ಹಂತಿಗೆ ಹೂಡುವ ಇವರ ಭಕ್ತಿ ನಿಜಕ್ಕೂ ಮೆಚ್ಚುವಂತಹದ್ದು. ಹಿಂದಿನ ಶತಮಾನಗಳಲ್ಲಿ ಯಂತ್ರಗಳ ಬಳಕೆ ಇದ್ದಿಲ್ಲ. ಅಂದು ಬರೀ ಎತ್ತುಗಳ(ಬಸವ ಅಥವಾ ಗೋವು) ಇದ್ದವು. ಇವುಗಳಿಂದ ರೈತರು ತಾವು ಬೆಳದ ಫಸಲುಗಳನ್ನು ರಾಶಿ ಮಾಡಿಕೊಳ್ಳುತ್ತಿದ್ದರು.

ಅಂತಹ ಪದ್ಧತಿ ಇಂದಿನ ಆಧುನಿಕ ಯಂತ್ರಗಳ ಕೈಯಲ್ಲಿ ಸಿಕ್ಕು ಕಣ್ಮರೆಯಾಗಿದ್ದು, ಹಿರಿಯ ಜೀವಿಗಳಿಗೆ ನುಂಗಲಾರದ ತುತ್ತಾಗಿದೆ. ಹಿಂದಿನ ಕಾಲದಲ್ಲಿ ರಾಶಿ ಮಾಡುವ ಸಮಯ ಬಂತು ಅಂದರೆ ಸಾಕು ರೈತರಿಗೆ ಎಲ್ಲಿಲದ ಸಂತಸ ಸಡಗರ ಮನೆ ಮಾತಾಗುತ್ತಿತ್ತು.

ರಾಶಿ ಮಾಡುವ ಹಿಂದಿನ ದಿನದಂದು ಮನೆಯ ಹೆಣ್ಣುಮಕ್ಕಳು ಶೇಂಗಾ ಉಂಡಿ, ನುಚ್ಚು, ತರ ತರದ ಹಿಂಡಿಗಳು, ಕಡಕ್‌ ರೋಟ್ಟಿ, ಮೊಸರು, ಮಜ್ಜಿಗೆ, ಹಾಲು ಸೇರಿದಂತೆ ಅನೇಕ ರೀತಿಯ ಅಡುಗೆ ಮಾಡಿಕೊಂಡು ಮರು ದಿನ 8 ರಿಂದ 16 ಎತ್ತುಗಳು ಹಂತಿಯಲ್ಲಿ ಭಾಗವಹಿಸುತ್ತಿದ್ದವು.

ಆದರೆ ಈಗ ಅಂತಹ ಕಾರ್ಯಕ್ರಮಗಳು ಬರೀ ಕೇಳಲು ಸಾಧ್ಯ. ಅಂತಹ ವಿಶೇಷ ಕಾರ್ಯಕ್ರಮವನ್ನು ಮಾಡಲಗೇರಿಯ ಜನ ಮುಂದಿನ ಪೀಳಿಗೆಗೆ ತೋರಿಸಲು ಪ್ರಾಯೋಗಿಕವಾಗಿ ಮಾಡಿದ್ದಾರೆ. ಮಾಡಲಗೇರಿ ಗ್ರಾಮದಲ್ಲಿ ಮಾತ್ರ ಇಂತಹ ಕಾರ್ಯಕ್ರಮಗಳು ಮೇಲಿಂದ ಮೇಲೆ ನಡೆಯುತ್ತವೆ.

ಗೋ ಮಾತೆಗೊ ಈ ಗ್ರಾಮಕ್ಕೂ ಒಂದು ಅವಿನಾಭಾವ ಸಂಬಂಧವಿದೆ. ಸಿಮಂತಕರಣ ಉತ್ತರ ಕರ್ನಾಟಕದಲ್ಲಿ ವಿಶಿಷ್ಟವಾಗಿ ಸಹಜವಾಗಿ ಎಲ್ಲರೂ ಮಾಡುತ್ತಾರೆ. ಆದರೆ ಮಾಡಲಗೇರಿ ಚನ್ನಪ್ಪಗೌಡ ಅಮಾತೀಗೌಡ್ರ ಕುಂಟುಂಬದವರು ತಮ್ಮ ಹಸು ಗರ್ಭಸ್ಥವಾದ ಸಮಯದಲ್ಲಿ, ಹಸುವಿಗೆ ಜನ್ಮ ನೀಡುವ ಸಮಯದಲ್ಲಿ ಸೀಮಂತ ಕಾರಣ ಮಾಡುತ್ತೇವೆಂದು ಬೇಡಿಕೊಂಡಿದ್ದರು.

ಆ ಪ್ರಕಾರ ಅವರು ತಮ್ಮ ಮನೆಯ ಹೆಣ್ಣು ಮಕ್ಕಳಿಗೆ ಸೀಮಂತ ಮಾಡಿದಂತೆ ಗೋವಿಗೆ ಸೀರೆ, ಹೂ, ಹಣ್ಣು ಜೂಲ್‌ ಸೇರಿದಂತೆ ಅನೇಕ ವಸ್ತುಗಳಿಂದ ಸಿಂಗಾರ ಮಾಡಿ ಸೀಮಂತ ಕಾರ್ಯ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಇದು ಒಂದೆಡೆಯಾದರೆ ಗ್ರಾಮದಲ್ಲಿ ಶರಣಬವೇಶ್ವರರ ಪುರಾಣ ಪ್ರವಚನ ಸತತವಾಗಿ 49ನೇ ವರ್ಷದಿಂದ ನಡೆದುಕೊಂಡು ಬಂದಿದೆ. ಪುರಾಣ ಆರಂಭವಾದ ದಿನದಿಂದ ಮೊದಲ ದಿನ ಶರಣರ ಜನನದ ಕಾರ್ಯಕ್ರಮದ ಪ್ರಯುಕ್ತ ಅಂದು ಅರಳಗುಂಡಿಯಲ್ಲಿ ಶರಣರ ನಾಮಕರಣ ವಿಜೃಂಭಣೆಯಿಂದ ಜರುಗಿತು. ಈ ಸಮಯದಲ್ಲಿ ಹಿರಿಯ ರೈತರು ಹಂತಿಯ ಪದಗಳನ್ನು ಹೇಳತ್ತಾ ಹಾಡುತ್ತಾ ಮತ್ತು ಗ್ರಾಮದ ಯುವಕರು ಕುಣಿದು ಕುಪ್ಪಳಿಸುತ್ತಾರೆ.

 

ಇಂತಹ ಕಾರ್ಯಕ್ರಮಗಳನ್ನು ಮಾಡುವುದರಿಂದ ಇಂದಿನ ಮಕ್ಕಳಿಗೆ ನಾವು ಅಂದು ರಾಶಿ ಮಾಡಲು ಎಷ್ಟು ಕಷ್ಟ ಪಡುತ್ತಿದ್ದೆವು ಎಂಬುದನ್ನು ತಿಳಿಸಿದಂತಾಗುತ್ತದೆ. ನಮ್ಮ ಹಿಂದಿನ ಹಳೆಯ ಸಂಪ್ರಾದಾಯಗಳನ್ನು ಮುಂದಿನ ಪೀಳಿಗೆ ಬಳುವಳಿಯಾಗಿ ನೀಡಿದಂತ್ತಾಗುತ್ತದೆ. ಅಲ್ಲದೆ ನಮ್ಮ ಕಾಲದಾಗ ಸುಗ್ಗಿ ಬಂತು ಅಂದರ ಬಾಳ ಕುಷಿಯಿಂದ ಹಂತ್ತಿ ಕಟ್ಟಿ ರಾಶಿ ಮಾಡುತ್ತಿದ್ದರು. ಆದರೆ ಈಗ ದುರ್ದೈವ. ಅವು ಒಂದೂ ಈಗ ಇಲ್ಲ. ಭಾಳ ನೋವು ಅನಸುತ್ರೀ. –ಹನುಮಂತಗೌಡ ಪಾಟೀಲ, ಮಾಡಲಗೇರಿ ಹಿರಿಯ ರೈತ       

-ಯಚ್ಚರಗೌಡ ಗೋವಿಂದಗೌಡ್ರ

 

 

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

1-gadaga

Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ

Gadag; ತೋಂಟದಾರ್ಯ ಮಠದ ಅದ್ದೂರಿ ಮಹಾರಥೋತ್ಸವ

Gadag; ತೋಂಟದಾರ್ಯ ಮಠದ ಅದ್ದೂರಿ ಮಹಾರಥೋತ್ಸವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.