ಯೋಧನ ಸ್ಮಾರಕ ನಿರ್ಮಾಣಕ್ಕೆ ಹೆಬ್ಟಾಳ ಗ್ರಾಮಸ್ಥರ ಪಟ್ಟು
ಹೆಬ್ಟಾಳ ಪಂಚಾಯತ್ಗೆ ಬೀಗ ಜಡಿದು ಗ್ರಾಮಸ್ಥರ ಆಕ್ರೋಶ
Team Udayavani, Aug 17, 2019, 10:53 AM IST
ಶಿರಹಟ್ಟಿ: ಬಸನಗೌಡಾ ಪಾಟೀಲ್ ಸ್ಮಾರಕ ನಿರ್ಮಾಣವಾಗಬೇಕಿದ್ದ ಸ್ಥಳ.
ಶಿರಹಟ್ಟಿ: ತಾಲೂಕಿನ ಹೆಬ್ಟಾಳ ಗ್ರಾಮದ ಜನರೆಲ್ಲ ಸೇರಿ ಗ್ರಾಮ ಪಂಚಯತ್ ಕಾರ್ಯವೈಖರಿ ಖಂಡಿಸಿ ಸ್ವತಂತ್ರ ದಿನಾಚರಣೆ ದಿನದಂದು ಪಂಚಾಯತ್ ಕಾರ್ಯಾಲಯಕ್ಕೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ವರ್ಷ ಗ್ರಾಮದ ಸಿಆರ್ಪಿಎಫ್ ಯೋಧ ಬಸನಗೌಡಾ ಪಾಟೀಲ್ ವೀರ ಮರಣ ಹೊಂದಿದ್ದು, ಈಡೀ ಗ್ರಾಮವೆ ಶೋಕ ಸಾಗರದಲ್ಲಿ ಮುಳುಗಿತ್ತು. ಆಗ ಜನಪ್ರತಿನಿಧಿಗಳು ವೀರಯೋಧನ ನೆನಪಿಗಾಗಿ ಸ್ಮಾರಕ ನಿರ್ಮಿಸುವುದಾಗಿ ಹೇಳಿದ್ದರು. ಆದರೆ ನಂತರದ ದಿನಗಳಲ್ಲಿ ಸ್ಮಾರಕ ನಿರ್ಮಾಣದ ಕೂರಿತು ಯಾವುದೇ ಕಾಮಗಾರಿ ಕಾರ್ಯಾರಂಭವಾಗದ ಕಾರಣ ಸಾರ್ವಜನಿಕರೆಲ್ಲ ಸೇರಿ ಪಂಚಾಯತ್ ಕಾಯಾಲಯಕ್ಕೆ ಬೀಗ ಹಾಕಿದರು.
ಪಂಚಾಯತಿ ಪಕ್ಕದ ಜಾಗದಲ್ಲಿಯೇ ವೀರಯೋಧ ಬಸನಗೌಡಾ ಪಾಟೀಲ್ ಅವರನ್ನು ಸಮಾಧಿ ಮಾಡಲಾಗಿದ್ದು, ಸ್ಮಾರಕ ನಿರ್ಮಿಸುವುದಿರಲಿ ಆ ಜಾಗವನ್ನು ಸ್ವಚ್ಛವಾಗಿ ಇಟ್ಟಿಲ್ಲ. ಸ್ವಾತಂತ್ರ್ಯೋತ್ಸವ ದಿನವೂ ಮಳೆ ನೀರು ಸಮಾಧಿ ಸುತ್ತ ನಿಂತಿದೆ. ಇದರ ಪರಿಣಾಮ ಅದರತ್ತ ಜನರಿಗೆ ಹೋಗಲು ಆಗುತ್ತಿಲ್ಲ ಆಂದು ಅಸಮಾಧನಾ ವ್ಯಕ್ತಪಡಿಸಿದರು. ನಂತರ ಗ್ರಾಮಸ್ಥರೇ ಸೇರಿ ವೀರಯೋಧನ ಸಮಾಧಿ ಸುತ್ತ ನಿಂತಿರುವ ನೀರಿನ ಮೇಲೆ ಮಣ್ಣು ಹಾಕಿದರು. ನಂತರ ಗ್ರಾಮದ ಯುವಕರೆಲ್ಲ ಸೇರಿ ವೀರಯೋಧನಿಗೆ ನಮನ ಸಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Gadag; ನಮ್ಮದು ಬಡವರಿಗೆ ಬದುಕು ಕಟ್ಟಿ ಕೊಡುವ ಪ್ರಣಾಳಿಕೆ: ಬಸವರಾಜ ಬೊಮ್ಮಾಯಿ
Panchmasali ಸಮಾಜಕ್ಕೆ ಬಿಜೆಪಿಯಿಂದ ಅನ್ಯಾಯ: ವಚನಾನಂದ ಸ್ವಾಮೀಜಿ