ಗುಜರಿ ಸೇರುತ್ತಿವೆಯೇ ಪಪಂ ಯಂತ್ರೋಪಕರಣ?
Team Udayavani, Nov 20, 2019, 1:26 PM IST
ನರೇಗಲ್ಲ: ಪಟ್ಟಣದ ಅಭಿವೃದ್ಧಿಗಾಗಿ ಸರ್ಕಾರದ ಅನುದಾನದಿಂದ ಖರೀದಿಸುವ ಯಂತ್ರಗಳು ಸಂರಕ್ಷಿಸದಿದ್ದರೆ ಹೇಗೆ ಹಾಳಾಗಿ ಹೋಗುತ್ತಿವೆ ಎನ್ನುವುದಕ್ಕೆ ನರೇಗಲ್ಲ ಪಟ್ಟಣ ಪಂಚಾಯಿತಿಯಲ್ಲಿರುವ ವಾಹನ ಹಾಗೂ ಇತರೆ ಸಾಮಗ್ರಿಗಳೇ ಸಾಕ್ಷಿ. ಕೇಂದ್ರ-ರಾಜ್ಯ ಸರ್ಕಾರದ ಅನುದಾನದಲ್ಲಿ ಪಟ್ಟಣದ ಅಭಿವೃದ್ಧಿಗಾಗಿ ಖರೀದಿ ಮಾಡಿರುವ ಯಂತ್ರೋಕರಣ-ವಾಹನಗಳು ಬಿರುಬಿಸಿಲು- ಮಳೆ-ಚಳಿಗೆ ಪಳಿಯುಳಿಕೆಯಂತಾಗಿವೆ.
ಪ.ಪಂ ಅಭಿವೃದ್ಧಿಗೆ ಬಳಸುತ್ತಿದ್ದ ವಾಹನ, ಯಂತ್ರೋಪಕರಣಗಳು ಮೂಲೆಗುಂಪಾಗಿ ಬಿದ್ದಿವೆ. ವಿಲೇವಾರಿ ಆಗಿಲ್ಲ. ಒಂದೆಡೆ ಪುನರ್ಬಳಕೆ ಮಾಡಿಲ್ಲ.ಮತ್ತೂಂದೆಡೆ ಹರಾಜು ಮೂಲಕ ಗುಜರಿಗೆ ಹಾಕುವ ಗೋಜಿಗೂ ಹೋಗಿಲ್ಲ. ಇದರಿಂದ ಕೆಲವೊಂದು ವಸ್ತುಗಳು ಕಳುವಾದ ನಿರ್ದರ್ಶನಗಳಿವೆ. ಈ ಪೈಕಿ ಜೆಸಿಬಿ, ಕಸ ವಿಲೇವಾರಿ ಕಂಟೇನರ್, ಟ್ರಾಕ್ಟರ್, ನೀರು ಸರಬರಾಜಿನ ಸಾಧನಗಳು ಸೇರಿದಂತೆ ಹಲವು ಸಲಕರಣೆಗಳು ವಿವಿಧೆಡೆ ತುಕ್ಕು ಹಿಡಿದು ಬಳಕೆಗೆ ಬಾರದೇ ದುಸ್ಥಿತಿಯಲ್ಲಿರುವುದು ಕಂಡುಬರುತ್ತಿವೆ. ಇವು ಪ.ಪಂ ಆವರಣದಲ್ಲಿ ಎಲ್ಲೆಂದರಲ್ಲಿ ಬಿದ್ದು ಹಾಳಾಗಿ ಹೋಗುತ್ತಿವೆ.
ಅಧಿಕಾರಿಗಳ ನಿರ್ಲಕ್ಷ್ಯ: ಸ್ಥಳೀಯ ಪಪಂ ಪಟ್ಟಣ ಪಂಚಾಯಿತಿಯಲ್ಲಿ ಬಳಕೆಗೆ ಇರಬೇಕಾದ ಯಂತ್ರೋಪಕರಣಗಳು ಕೆಟ್ಟು ನಿಂತು ವರ್ಷಗಳೇ ಕಳೆದರೂ ದುರಸ್ತಿಯತ್ತ ಅಧಿಕಾರಿಗಳು ಮಖ ಮಾಡುತ್ತಿಲ್ಲ. ಲಕ್ಷಾಂತರ ರೂ. ಬೆಲೆಬಾಳುವ ಜೆಸಿಬಿ, ಟ್ರಾಕ್ಟರ್, ಕಸದ ವಾಹನ, ಸೇರಿದಂತೆ ಕುಡಿಯುವ ನೀರು ಸರಬರಾಜಿಗೆ ಸಂಬಂಧಿಸಿದ ವಸ್ತುಗಳು ಇಂದು ನಿಷ್ಕ್ರಿಯವಾಗಿ ನಿಂತಿವೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಪಪಂ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬಿಡುಗಡೆಗೊಳ್ಳುತ್ತಿದ್ದರೂ ಅ ಧಿಕಾರಿಗಳು ಮಾತ್ರ ಕಣ್ಣುಮುಚ್ಚಿ ಕೊಳ್ಳಿತ್ತುಕೊಂಡಿರುವುದು ನೋವಿನ ಸಂಗತಿ. ವಾಹನಗಳು ಗುಣಮಟ್ಟದಿಂದಲೇ ಇರುವಾಗ ಸಂರಕ್ಷಿಸಿಕೊಳ್ಳಬೇಕು. ಸರಕಾರದ ಬೊಕ್ಕಸಕ್ಕೆ ಹಾನಿ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. –ಕುಮಾರಸ್ವಾಮಿ ಕೋರಧ್ಯಾಮಠ, ಪಪಂ ಸದಸ್ಯ
-ಸಿಕಂದರ ಎಂ. ಆರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag; ನಮ್ಮದು ಬಡವರಿಗೆ ಬದುಕು ಕಟ್ಟಿ ಕೊಡುವ ಪ್ರಣಾಳಿಕೆ: ಬಸವರಾಜ ಬೊಮ್ಮಾಯಿ
Panchmasali ಸಮಾಜಕ್ಕೆ ಬಿಜೆಪಿಯಿಂದ ಅನ್ಯಾಯ: ವಚನಾನಂದ ಸ್ವಾಮೀಜಿ
Gadag; ವೀರೇಶ್ವರ ಪುಣ್ಯಾಶ್ರಮಕ್ಕೆ ಭೇಟಿ ನೀಡಿ ಗದ್ದುಗೆಯ ದರ್ಶನಾಶೀರ್ವಾದ ಪಡೆದ ಶ್ರೀರಾಮುಲು
Naregal; ಪ್ರೇಮಿಯೊಂದಿಗೆ ನೇಣಿಗೆ ಶರಣಾದ ನವವಿವಾಹಿತೆ!
Gadag; ವಚನಾನಂದ ಶ್ರೀಗಳ ಮಾತನ್ನು ಗಂಭೀರವಾಗಿ ಪರಿಗಣಿಸುತ್ತೇವೆ: ಬಸವರಾಜ ಬೊಮ್ಮಾಯಿ
MUST WATCH
ಹೊಸ ಸೇರ್ಪಡೆ
T20 World Cup; ರೋಹಿತ್, ವಿರಾಟ್ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?
The Very Best Payment Techniques for Online Casinos
Jammu and Kashmir: ಉಗ್ರರ ಗುಂಡಿನ ದಾಳಿಗೆ ಬಲಿಯಾದ ವಲಸೆ ಕಾರ್ಮಿಕ
Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ