ವಿವೇಕಾನಂದಗೌಡಗೆ ಜಿಲ್ಲಾ ಕಸಾಪ ಸಾರಥ್ಯ

ಈ ಬಾರಿ ಚುನಾವಣೆಯಲ್ಲಿ ಹೊಸಬರಿಗೆ ಅವಕಾಶ ನೀಡಬೇಕು.

Team Udayavani, Nov 22, 2021, 3:42 PM IST

ವಿವೇಕಾನಂದಗೌಡಗೆ ಜಿಲ್ಲಾ ಕಸಾಪ ಸಾರಥ್ಯ

ಗದಗ: ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಜಿಲ್ಲಾ ಕಸಾಪ ಚುನಾವಣೆಗೆ ರವಿವಾರ ಮತದಾನ ನಡೆದು ಫಲಿತಾಂಶವೂ ಪ್ರಕಟಗೊಂಡಿದೆ. ಈ ಬಾರಿ ಕಸಾಪ ಚುನಾವಣೆಯಲ್ಲಿ ಭಾರೀ ಅಂತರದಿಂದ ಗೆಲ್ಲುವ ವಿಶ್ವಾಸ ಹೊಂದಿದ್ದ ನಿಕಟಪೂರ್ವ ಕಸಾಪ ಜಿಲ್ಲಾಧ್ಯಕ್ಷ ಡಾ| ಶರಣು ಗೋಗೇರಿ ಪ್ರತಿಸ್ಪರ್ಧಿ ಸಾಹಿತಿ ವಿವೇಕಾನಂದ ಗೌಡ ಪಾಟೀಲ ಎದುರು ಮುಗ್ಗರಿಸಿದ್ದಾರೆ. 565 ಮತಗಳಿಂದ ವಿವೇಕಾನಂದಗೌಡ ಜಯಭೇರಿ ಬಾರಿಸಿದ್ದಾರೆ.

ಒಟ್ಟು 5,999 ಮತದಾರರ ಪೈಕಿ ಚುನಾವಣೆಯಲ್ಲಿ 4,052 ಮತಗಳು ಚಲಾವಣೆಯಾಗಿದ್ದವು. ಅದರಲ್ಲಿ 4024 ಮತಗಳು ಕ್ರಮಬದ್ಧವಾಗಿದ್ದು, 28 ಮತಗಳು ತಿರಸ್ಕೃತಗೊಂಡಿವೆ. 2231 ಮತಗಳಿಂದ ವಿವೇಕಾನಂದಗೌಡ ಪಾಟೀಲ ಜಯ ಸಾಧಿಸಿದ್ದಾರೆ. ಸಮೀಪ ಸ್ಪರ್ಧಿ ಶರಣು ಗೋಗೇರಿ 1666, ಡಾ| ಸಂಗಮೇಶ್‌ ವಿ. ತಮ್ಮನಗೌಡ್ರ 67 ಹಾಗೂ ಐ.ಕೆ. ಕಮ್ಮಾರ 60 ಮತ ಪಡೆದಿದ್ದಾರೆ.

ಗದಗ-274, ಲಕ್ಷ್ಮೇಶ್ವರ 97, ನರೇಗಲ್‌ 94, ರೋಣ 19, ಗಜೇಂದ್ರಗಡ 84, ಮುಂಡರಗಿ 30, ನರಗುಂದ 1 ಸೇರಿ 762 ಮತಗಳೊಂದಿಗೆ ವಿವೇಕಾನಂದಗೌಡ ಪಾಟೀಲ ಮುನ್ನಡೆಯಲ್ಲಿದ್ದರೆ, ಶರಣು ಗೋಗೇರಿ ಅವರು ಶಿರಹಟ್ಟಿ ಮತ್ತು ಹೊಳೆಆಲೂರಿನಲ್ಲಿ ಮಾತ್ರ ಕ್ರಮವಾಗಿ 13 ಹಾಗೂ 21 ಮತಗಳ ಮುನ್ನಡೆ ಹೊಂದಿದ್ದರು.

ಗುಪ್ತಗಾಮಿನಿಯಾದ ವಿರೋಧಿ ಅಲೆ:
ಕಳೆದ ಬಾರಿ ಕನ್ನಡ ಸಾಹಿತ್ಯ ಪರಿಷತ್‌ನಿಂದ ಆಗಿರುವ ಹಲವು ಅಭಿವೃದ್ಧಿ ಕಾರ್ಯಗಳು ಮತ್ತು ಸಾಹಿತ್ಯ ಚಟುವಟಿಕೆಗಳ ಹಿನ್ನೆಲೆಯಲ್ಲಿ ಡಾ| ಶರಣು ಗೋಗೇರಿ ಮರು ಆಯ್ಕೆ ಕುರಿತು ಅತೀವ ವಿಶ್ವಾಸದಲ್ಲಿದ್ದರು. ನೌಕರರ ಸಂಘದ ಜಿಲ್ಲಾಧ್ಯಕ್ಷರು, ಹಲವು ಶಿಕ್ಷಕರ ಸಂಘದ ಅಧ್ಯಕರು, ಹಲವು ಸಾಹಿತಿಗಳೊಂದಿಗೆ ಸಂಘಟಿತರಾಗಿ ವರ್ಷದಿಂದ ಚುನಾವಣಾ ಸಿದ್ಧತೆಯಲ್ಲಿ ತೊಡಗಿದ್ದರು. ಆದರೂ, ಮತದಾರರು ಕೈಹಿಡಿಯಲಿಲ್ಲ.

ನಿಕಟ ಪೂರ್ವ ಅಧ್ಯಕ್ಷ ಗೋಗೇರಿ ಅವರ ಆಡಳಿತದಲ್ಲಿ ನಡೆದಿದೆ ಎನ್ನಲಾದ ಸ್ವಜನ ಪಕ್ಷಪಾತ, ಹಿರಿಯರ ಕಡಗಣನೆಯನ್ನೇ ವಿವೇಕದಿಂದ ಬಳಸಿಕೊಂಡರು ಎನ್ನಲಾಗುತ್ತಿದೆ. ಆಡಳಿತ ವಿರೋಧಿ ಅಲೆಯನ್ನು ಪ್ರತಿಯೊಬ್ಬರಿಗೂ ಮನವರಿಕೆ ಮಾಡಿಕೊಟ್ಟಿದ್ದಾರೆ. ಹಿಂದಿನ ಅವಧಿಗಳಲ್ಲಿ ವಿವೇಕಾನಂದಗೌಡ ಪಾಟೀಲರು ಗದಗ ತಾಲೂಕಾಧ್ಯಕ್ಷರಾಗಿ, ಗೋಗೇರಿ ಅವರ ಅವಧಿಯಲ್ಲಿ ಗೌರವ ಕಾರ್ಯದರ್ಶಿಗಳಾಗಿರುವುದು, ಜ|ತೋಂಟದಾರ್ಯ ಮಠ ಶಿವಾನುಭವ ಸಮಿತಿ ಅಧ್ಯಕ್ಷರು, ಸರಕಾರಿ ಶಾಲೆಯ ಶಿಕ್ಷಕರಾಗೂ ಉತ್ತಮ ಕೆಲಸಗಳನ್ನು ಮಾಡಿದ್ದಾರೆ.

ಈ ಬಾರಿ ಚುನಾವಣೆಯಲ್ಲಿ ಹೊಸಬರಿಗೆ ಅವಕಾಶ ನೀಡಬೇಕು. ಕಸಾಪಕ್ಕೆ ಒಮ್ಮೆ ಅಧ್ಯಕ್ಷರಾದವರು ಮತ್ತೂಮ್ಮೆ ಆಯ್ಕೆ ಆಗಬಾರದೆಂಬ ಅಲಿಖೀತ ನಿಯಮವನ್ನು ಉಳಿಸಬೇಕು ಎಂದು ಪ್ರಜ್ಞಾವಂತ ಮತದಾರರು ನಿರ್ಧರಿಸಿದ್ದರು. ಅದೆಲ್ಲವೂ ವಿವೇಕಾನಂದಗೌಡರ ಗೆಲುವಿಗೆ ಪೂರಕವಾಯಿತು.ಆದರೆ, ಚುನಾವಣೆಯಲ್ಲಿ ಡಾ| ಶರಣು ಗೋಗೇರಿ ಅವರ ವಿರುದ್ಧದ ಅಲೆ ಗುಪ್ತಗಾಮಿಯಾಗಿತ್ತು ಎಂದು ವಿಶ್ಲೇಷಿಸಲಾಗುತ್ತಿದೆ.

ಕಸಾಪ ಚುನಾವಣೆ ನಡೆದ ರೀತಿ ಅತ್ಯಂತ ಅಸಹ್ಯವಾಗಿತ್ತು. ಹಣ, ಹೆಂಡ ಹಾಗೂ ಕ್ಷುಲ್ಲಕ ಕುತಂತ್ರದಿಂದ ಬೇಸತ್ತು ಹೋಗಿದ್ದೇವು. ಅನೇಕ ವಿಕೃತ ಮಾರ್ಗಗಳ ಮೂಲಕ ಚುನಾವಣೆ ಗೆಲ್ಲಲಾಗದು ಎಂಬುದನ್ನು ಜಾಣತನವನ್ನು ಮತದಾರರು ಸಾಬೀತು ಮಾಡಿದ್ದಾರೆ. ವಿವೇಕಾನಂದಗೌಡ ಅವರ ಗೆಲುವಿನಿಂದ ಸಜ್ಜನರು ಉಸಿರು ಬಿಡುವಂತಾಗಿದೆ. ಇದು ಜಿಲ್ಲೆಯ ಸಾತ್ವಿಕ ಕನ್ನಡ ಮನಸುಗಳ ಗೆಲುವಾಗಿದೆ.
∙ ಸಿದ್ದು ಯಾಪಲಪರ್ವಿ, ಹಿರಿಯ ಸಾಹಿತಿ

ಕನ್ನಡ ಸಾಹಿತ್ಯ ಪರಿಷತ್‌ನ್ನು ಎಲ್ಲರನ್ನೂ ಒಳಗೊಳ್ಳುವಿಕೆ ಪರಿಷತ್‌ ಆಗಬೇಕು. ಜಿಲ್ಲೆಯ ಜಾನಪದ ಕಲಾವಿದರು, ಚಿತ್ರ ಕಲಾವಿದರು ಎಲ್ಲರನ್ನೂ ಕೂಡಿಸಿಕೊಂಡು ಕನ್ನಡದ ತೇರು ಎಳೆಯಬೇಕು ಎಂಬುದು ನನ್ನ ಮನದ ಇಂಗಿತವಾಗಿತ್ತು. ಸಾಹಿತ್ಯ ಸಮ್ಮೇಳನಗಳು ನಗರ ಕೇಂದ್ರಿತವಾಗಿವೆ. ಸಾಹಿತ್ಯದ ಕಂಪನ್ನು ಹಳ್ಳಿ ಹಳ್ಳಿಗೂ ಪಸರಿಸುವ ಉದ್ದೇಶ ನನ್ನದು. ಜಿಲ್ಲಾಮಟ್ಟದ ಸಾಹಿತ್ಯ ಸಮ್ಮೇಳನವನ್ನು ತಾಲೂಕು ಕೇಂದ್ರಗಳಲ್ಲಿ, ತಾಲೂಕು ಮಟ್ಟದ ಸಮ್ಮೇಳನಗಳನ್ನು ಹೋಬಳಿ, ಹಳ್ಳಿ ಮಟ್ಟದಲ್ಲಿ ನಡೆಸುವ ಉದ್ದೇಶವಿದೆ.
ವಿವೇಕಾನಂದಗೌಡ ಪಾಟೀಲ,
ಕಸಾಪ ನೂತನ ಜಿಲ್ಲಾಧ್ಯಕ್ಷ

ಟಾಪ್ ನ್ಯೂಸ್

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

1-gadaga

Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ

Gadag; ತೋಂಟದಾರ್ಯ ಮಠದ ಅದ್ದೂರಿ ಮಹಾರಥೋತ್ಸವ

Gadag; ತೋಂಟದಾರ್ಯ ಮಠದ ಅದ್ದೂರಿ ಮಹಾರಥೋತ್ಸವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.