ಮುಂದುವರೆದ ಭೂಕುಸಿತ
Team Udayavani, Jun 10, 2019, 2:33 PM IST
ನರಗುಂದ: ಪಟ್ಟಣದ ಕಸಬಾ ಓಣಿಯ ಮನೆಯೊಂದರಲ್ಲಿ ಅಂತರ್ಜಲ ಹೆಚ್ಚಳದಿಂದ ಮತ್ತೂಂದೆಡೆ ಭೂಕುಸಿತ ಉಂಟಾಗಿದೆ.
ನರಗುಂದ: ಪಟ್ಟಣದ ನಾಲ್ಕು ಬಡಾವಣೆ ನಿವಾಸಿಗಳ ನಿದ್ದೆಗೆಡಿಸಿದ ಭೂಕುಸಿತ ಮತ್ತೇ ಮುಂದುವರೆದಿದೆ. ರವಿವಾರ ಸ್ಥಳೀಯ ಕಸಬಾ ಬಡಾವಣೆಯಲ್ಲಿ ಎರಡು ಮನೆಗಳ ನಡುವಿನ ಗೋಡೆಯ ಅಡಿಯಲ್ಲೇ ಭೂಕುಸಿತ ಉಂಟಾಗಿದೆ.
ಚನ್ನಬಸಪ್ಪ ಹಾದಿಮನಿ ಎಂಬುವರ ಮನೆ ಮತ್ತು ಯಲ್ಲವ್ವ ಮಟಗೇರ ಅವರ ಮನೆಗಳ ನಡುವಿನ ಗೋಡೆಯ ತಳಭಾಗದಲ್ಲಿ ಭೂಮಿ ಕುಸಿದಿದೆ. ಶನಿವಾರ ಮಧ್ಯರಾತ್ರಿ ಸಂಭವಿಸಿದೆ ಎನ್ನಲಾಗಿದೆ. ಎರಡೂ ಮನೆಗಳ ಗೋಡೆಯ ತಳದಲ್ಲಿ ಭೂಕುಸಿತ ಉಂಟಾಗಿ ಆಳವಾದ ಗುಂಡಿ ಬಿದ್ದಿದೆ. ವಿಚಿತ್ರವೆಂದರೆ ಭೂಕುಸಿತ ಉಂಟಾದ ಗುಂಡಿಯ ತಳದಲ್ಲಿ ಸಣ್ಣಗೆ ನೀರು ಹರಿಯುತ್ತಿರುವುದು ಕಂಡುಬಂದಿದೆ.
ಹೀಗಾಗಿ ಈ ಬಡಾವಣೆಗಳಲ್ಲಿ ಅಂತರ್ಜಲ ಹೆಚ್ಚಳದ ಭೀತಿ ಸಾರ್ವಜನಿಕರನ್ನು ನಿದ್ದೆಗೆಡಿಸಿದೆ.ಬೆಳಗ್ಗೆ ಪುರಸಭೆಯಿಂದ ಮುರಂ ಹಾಕಲಾಗಿದೆ. ಪಟ್ಟಣದ ಬಡಾವಣೆಗಳಲ್ಲಿ ಅಂತರ್ಜಲ ಹೆಚ್ಚಳದಿಂದ ಉಂಟಾಗುತ್ತಿರುವ ಭೂಕುಸಿತ ಜನರ ನಿದ್ದೆಗೆಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು
Honeybee Attack: ಹೆಜ್ಜೇನು ದಾಳಿ: ಓರ್ವ ಮೃತ್ಯು, ಏಳು ಮಂದಿಗೆ ಗಾಯ
ಮತ್ತೆ ಎಲ್ಲೆಡೆ ಕಾಂಗ್ರೆಸ್ ಬಾವುಟ ರಾರಾಜಿಸುವುದು ಸೂರ್ಯ ಚಂದ್ರರಷ್ಟೇ ಸತ್ಯ: ಎಚ್.ಕೆ. ಪಾಟೀಲ
Gadag; ಬಸವರಾಜ ಬೊಮ್ಮಾಯಿ ಹಿಂದೆ ದೊಡ್ಡದೊಂದು ಲಗೇಜ್ ಇದೆ: ಎಚ್.ಕೆ.ಪಾಟೀಲ್
Gadag; ಹಾವೇರಿ ಲೋಕಸಭಾ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರಿಂದ ಟೆಂಪಲ್ ರನ್
MUST WATCH
ಹೊಸ ಸೇರ್ಪಡೆ
Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
ʼAadujeevithamʼ Twitter review: ಪೃಥ್ವಿರಾಜ್ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?
Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ