ಅಂತರ್ಜಲ ಮೇಲ್ಮುಖ ಚಲನೆಯಿಂದ ಭೂಕುಸಿತ ಸಂಭವ


Team Udayavani, Nov 16, 2019, 12:45 PM IST

Udayavani Kannada Newspaper

ನರಗುಂದ: ತೀವ್ರ ಅಂತರ್ಜಲ ಬಾಧಿತ ಪ್ರದೇಶಗಳಲ್ಲಿ ಅಂತರ್ಜಲದ ಮೇಲ್ಮುಖ ಚಲನೆಯಿಂದ ಭೂಕುಸಿತ ಸಂಭವ ಹೆಚ್ಚಾಗಿರುತ್ತದೆ. ಹೆಚ್ಚಳಗೊಂಡ ಪ್ರದೇಶದಲ್ಲಿ ಶೇಖರಣೆಯಾಗುವ ಅಂತರ್ಜಲ ನೀರನ್ನು ಆದಷ್ಟು ಹೊರಗೆ ಹಾಕುವ ಪ್ರಯತ್ನದಿಂದ ಭೂಕುಸಿತ ತಡೆಗಟ್ಟಬಹುದು ಎಂದು ಭೂ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಪಟ್ಟಣದ ಐದು ಬಡಾವಣೆಗಳಲ್ಲಿ ತೀವ್ರ ಅಂತರ್ಜಲ ಹೆಚ್ಚಳದಿಂದ ಭೂಕುಸಿತ ಘಟನೆಗಳಕಾರಣ ಕಂಡುಹಿಡಿಯಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ನೇಮಕಗೊಂಡ ಭೂ ವಿಜ್ಞಾನಿಗಳ ತಂಡ ಅಧ್ಯಯನದ ಮಧ್ಯಂತರ ವರದಿಯನ್ನು ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ಸಿ.ಸಿ. ಪಾಟೀಲ ಶುಕ್ರವಾರ ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು.

ಐದು ಸೂಚನೆಗಳು: ಫೀಡರ್‌ ಕಾಲುವೆಯಿಂದ ಕೆಂಪಗೆರಿಗೆ ನೀರು ಹರಿಸುವುದು ಸ್ಥಗಿತ, ನೀರಿನ ಮೂಲವಾಗಿ ಸಂರಕ್ಷಿಸಬೇಕಿದ್ದಲ್ಲಿ ಕೆರೆ ನೀರು ಖಾಲಿ ಮಾಡಿ ತಳ ಭಾಗವನ್ನು ಕ್ಲೇ ಪದರ ಅಥವಾ ಎಚ್‌ಡಿಪಿಇ ಪದರ ಅಥವಾ ಸೂಕ್ತ ಇತರೆ ವಿಧಾನದಿಂದ ಪದರವನ್ನು ಅಳವಡಿಸಿ ನೀರು ಇಂಗುವಿಕೆ ತಡೆಹಿಡಿದಲ್ಲಿ ಮಾತ್ರ ಸದರಿ ಪ್ರದೇಶದಲ್ಲಿ ನೀರಿನ ಹೊರಹರಿವು ನಿಯಂತ್ರಿಸಿ ಭೂಕುಸಿತ ತಡೆಗಟ್ಟಬಹುದು.

ಭೂಗತ ಆಹಾರ ಧಾನ್ಯ ತುಂಬುವ ಬಂಕರ್‌ಗಳನ್ನು ಭೌತಿಕವಾಗಿ ಗುರುತಿಸಿ ಕೆಂಪುಮಣ್ಣಿನಿಂದ ಮುಚ್ಚಬೇಕು. ಈ ಪ್ರದೇಶದಲ್ಲಿ ಅಂತರ್ಜಲ ಜಿನುಗುವಿಕೆಯಿಂದ ಸಂಗ್ರಹವಾದ ನೀರನ್ನು ಹೊರಹಾಕಲು ಸೂಕ್ತ ಡ್ರೈನೇಜ್‌ ವ್ಯವಸ್ಥೆ ಮಾಡಬೇಕು. ಮುಖ್ಯ ರಸ್ತೆಯು ಸವದತ್ತಿ ತಾಲೂಕಿಗೆ ಸಂಪರ್ಕಿಸುತ್ತದೆ. ಈ ರಸ್ತೆ ಹಗೇದಕಟ್ಟಿ, ಕಸಬಾ, ಶಂಕರಲಿಂಗನ ಓಣಿ ಇರುವ ಪ್ರದೇಶ ಮುಂಭಾಗದಲ್ಲಿ ಹಾದು ಹೋಗಿದೆ. ರಸ್ತೆಯು ಸಬ್‌ ಸರೆಧೀಸ್‌ ಡೈಕ್‌ ರೀತಿಯಲ್ಲಿ ವರ್ತಿಸುತ್ತಿದ್ದರಿಂದ ಮೇಲ್ಕಂಡ ಸ್ಥಳಗಳಿಂದ ಬರುತ್ತಿರುವ ನೀರಿನ ಸೆಲೆಯು ಬ್ಲಾಕ್‌ ಆಗಿರುವುದು ಕಂಡುಬಂದಿದೆ. ಹೀಗಾಗಿ ಅಂತರ್ಜಲ ಸರಾಗವಾಗಿ ಹರಿಯುವಿಕೆಗೆ ಅಡಚಣೆಯಾಗಿದೆ. ಆದ್ದರಿಂದ ಅಂತರ್ಜಲ ಮೇಲ್ಮುಖ ಚಲನೆಯಿಂದ ಭೂಕುಸಿತ ಹೆಚ್ಚಾಗಿದೆ. ದೇಸಾಯಿ ಬಾವಿ ಇರುವ ಪ್ರದೇಶ ಮುಂಭಾಗದಲ್ಲಿ ಸವದತ್ತಿ ರಸ್ತೆಗೆ ಪೈಪ್‌ ಅಳವಡಿಸಿದಲ್ಲಿ ನೀರಿನ ಸೆಲೆಯು ಸರಾಗವಾಗಿ ಚಲಿಸುವುದರಿಂದ ಅಂತರ್ಜಲ ಜಿನುಗಿವಿಕೆ ಕಡಿಮೆ ಮಾಡಬಹುದು ಎಂಬಿತ್ಯಾದಿ ಐದು ಸೂಚನೆ ಮಧ್ಯಂತರ ವರದಿಯಲ್ಲಿನೀಡಲಾಗಿದೆ.

ಎರಡು ವಿಧದ ಮಣ್ಣು: ಎರಡು ವಿಧವಾದ ಕಪ್ಪು ಮತ್ತು ಕೆಂಪು ಮಣ್ಣು ದೊರೆಯುತ್ತದೆ. ಕಪ್ಪು ಮಣ್ಣಿನ ಪದರವು 0.1 ಮೀಟರ್‌ನಿಂದ 5 ಮೀಟರ್‌ ದಪ್ಪವಿದೆ. ಕೆಂಪು ಮಣ್ಣು ಎತ್ತರ ಪ್ರದೇಶದಲ್ಲಿ ಮತ್ತು ಭೂಕುಸಿತ ಪ್ರದೇಶಗಳ ಇಳಿಜಾರಿನಲ್ಲಿ ಲಭ್ಯವಿದೆ.

ಪುರಾತನ ಧಾನ್ಯಗಳ ಬಂಕರ್‌ ಪತ್ತೆ:  ಹಗೇದಕಟ್ಟಿ, ಬುಲ್ಗನವರ ಗಲ್ಲಿ, ದೇಶಪಾಂಡೆ ಗಲ್ಲಿ, ಕಲಾಲ್‌ ಬಿಲ್ಡಿಂಗ್‌ ಸ್ಥಳಗಳಲ್ಲಿ ಪುರಾತನ ಭೂಗತ ಆಹಾರ ಧಾನ್ಯ ತುಂಬುವ ಬಂಕರ್‌ಗಳ ರಚನೆಯಿದೆ. ಬಂಕರ್‌ಗಳಲ್ಲಿ ಪುರಾತನ ಕಾಲದಲ್ಲಿ ಧಾನ್ಯಸಂಗ್ರಹಣೆ ಮಾಡಿದ್ದು, ಬಂಕರ್‌ಗಳನ್ನು ಮಣ್ಣಿನಿಂದ ಮುಚ್ಚಲಾಗಿದೆ. ಭೂಗತ ಕಾಲುವೆಗಳು ಸಹ ಭೂಕುಸಿತ ಪ್ರದೇಶದಲ್ಲಿ ಇದ್ದು, ಇದರಲ್ಲೊಂದು ವೆಂಕಟೇಶ್ವರ ದೇವಸ್ಥಾನ ಬಳಿ ಕಾಣಬಹುದಾಗಿದೆ ಎಂಬುದು ಭೂ ವಿಜ್ಞಾನಿಗಳ ವರದಿ.

 

-ಸಿದ್ಧಲಿಂಗಯ್ಯ ಮಣ್ಣೂರಮಠ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

ನಮ್ಮದು ಬಡವರಿಗೆ ಬದುಕು ಕಟ್ಟಿ ಕೊಡುವ ಪ್ರಣಾಳಿಕೆ: ಬಸವರಾಜ ಬೊಮ್ಮಾಯಿ

Gadag; ನಮ್ಮದು ಬಡವರಿಗೆ ಬದುಕು ಕಟ್ಟಿ ಕೊಡುವ ಪ್ರಣಾಳಿಕೆ: ಬಸವರಾಜ ಬೊಮ್ಮಾಯಿ

1-wqeqweqwe

Panchmasali ಸಮಾಜಕ್ಕೆ ಬಿಜೆಪಿಯಿಂದ ಅನ್ಯಾಯ: ವಚನಾನಂದ ಸ್ವಾಮೀಜಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.