ಮಹದಾಯಿ ಹೋರಾಟಕ್ಕೆ 1800 ದಿನ
ಕಾಮಗಾರಿ ಆರಂಭಿಸದಿದ್ದರೆ ಬೀದಿಗಿಳಿದು ಉಗ್ರ ಹೋರಾಟದ ಎಚ್ಚರಿಕೆ
Team Udayavani, Jun 20, 2020, 12:39 PM IST
ನರಗುಂದ: ಜೀವ ಜಲಕ್ಕಾಗಿ ರೈತರ ಕೂಗು ಮುಂದುವರಿದಿದ್ದು, ಮಹದಾಯಿ ಮತ್ತು ಕಳಸಾ-ಬಂಡೂರಿ ಹೋರಾಟ ಇಂದಿಗೆ ಸುದೀರ್ಘ 1800 ದಿನಗಳನ್ನು ಪೂರೈಸಿದೆ.
ಕುಡಿಯುವ ನೀರಿಗಾಗಿ ಐದನೇ ವರ್ಷದ ಅಂತ್ಯಕ್ಕೆ ಸಾಗಿ ಬಂದಿರುವ ಮಹದಾಯಿ ಹೋರಾಟ ಇಂದು ಶುಕ್ರವಾರ 1800ನೇ ದಿನದ ನಿರಂತರ ಸತ್ಯಾಗ್ರಹ ಕಂಡಿದೆ. ಅಲ್ಲದೇ ಮಿಂಚಿ ಮರೆಯಾದ ವರುಣನಿಗಾಗಿ ಇಂದು ಮಹದಾಯಿ ಹೋರಾಟಗಾರರು ಹೋರಾಟ ವೇದಿಕೆ ಮುಂಭಾಗದಲ್ಲಿರುವ ಬನ್ನಿ ಮಹಾಂಕಾಳಿಗೆ ವಿಶೇಷ ಪೂಜೆ ಸಲ್ಲಿಸಿದರು. ಮಹಿಳೆಯರಿಂದ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯ ನೆರವೇರಿಸಿ, ಅಂಬಲಿ ಪ್ರಸಾದ ವಿತರಿಸಲಾಯಿತು.
ರೈತರ ಆಗ್ರಹ: ಮಹದಾಯಿ ಹೋರಾಟ ಐದನೇ ವರ್ಷದ ಅಂಚಿಗೆ ಬಂದಿದೆ. ಕೂಡಲೇ ಮಹದಾಯಿ ನೀರು ಮಲಪ್ರಭೆಗೆ ಜೋಡಿಸುವ ಕಾಮಗಾರಿ ಪ್ರಾರಂಭಿಸಲು ರಾಜ್ಯ ಸರ್ಕಾರ ಟೆಂಡರ್ ಕರೆದು ಕೆಲಸ ಪ್ರಾರಂಭಿಸಬೇಕು. ಇಲ್ಲವಾದಲ್ಲಿ ಹೋರಾಟಗಾರರು ಬೀದಿಗಿಳಿದು ಉಗ್ರ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು. ಕೋವಿಡ್ ವೈರಸ್ ಹಿನ್ನೆಲೆಯಲ್ಲಿ ರೈತರು ಅಪಾರ ಹಾನಿ ಅನುಭವಿಸಿದ್ದಾರೆ. ಸರ್ಕಾರ ಕೂಡಲೇ ರೈತರಿಗೆ ಫಸಲ್ ಭೀಮಾ ಯೋಜನೆ ಹಣ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು. ಎಲ್ಲ ಮಹದಾಯಿ ಹೋರಾಟಗಾರರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Gadag; ನಮ್ಮದು ಬಡವರಿಗೆ ಬದುಕು ಕಟ್ಟಿ ಕೊಡುವ ಪ್ರಣಾಳಿಕೆ: ಬಸವರಾಜ ಬೊಮ್ಮಾಯಿ
Panchmasali ಸಮಾಜಕ್ಕೆ ಬಿಜೆಪಿಯಿಂದ ಅನ್ಯಾಯ: ವಚನಾನಂದ ಸ್ವಾಮೀಜಿ