ಮಹದಾಯಿಗಾಗಿ 3 ವರ್ಷದಲ್ಲಿ 1100 ಮನವಿ


Team Udayavani, Jul 21, 2018, 6:00 AM IST

mahadayi-water-dispute.jpg

ನರಗುಂದ: ಜೀವಜಲಕ್ಕಾಗಿ ಹೋರಾಟ ನಡೆಸುತ್ತಲೇ ಇರುವ ಮಹದಾಯಿ ಹೋರಾಟಗಾರರು ಕಳೆದ ಮೂರು ವರ್ಷದಿಂದ
ಇದುವರೆಗೆ ಸಲ್ಲಿಸಿರುವ ಮನವಿಗಳು ಒಂದಲ್ಲ ಎರಡಲ್ಲ. ಬರೋಬ್ಬರಿ 1,100ಕ್ಕೂ ಹೆಚ್ಚು. 

ತಹಶೀಲ್ದಾರರಿಂದ ರಾಜ್ಯಪಾಲರವರೆಗೆ, ಶಾಸಕರಿಂದ ಪ್ರಧಾನಿ-ರಾಷ್ಟ್ರಪತಿವರೆಗೂ ಸೇರಿ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಮುಖ ಅಧಿಕಾರಸ್ಥರಿಗೆ ಇಷ್ಟೊಂದು ಪ್ರಮಾಣದಲ್ಲಿ ಮನವಿ ಸಲ್ಲಿಸಿಯೂ ವಿವಾದ ಮಾತ್ರ ಇತ್ಯರ್ಥಗೊಂಡಿಲ್ಲ.

ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಮಲಪ್ರಭಾ ಅಚ್ಚುಕಟ್ಟು ಪ್ರದೇಶ ರೈತರ ಹೋರಾಟದ ಹಿಂದೆ ಸಹಿಸಲಾಗದ ನೋವಾಗಿದ್ದು, ಕೇವಲ ನರಗುಂದ ದಿಂದ ಇಷ್ಟು ಮನವಿಗಳು ಸಲ್ಲಿಕೆಯಾಗಿವೆ. ಇನ್ನು ನಾಡಿನಾದ್ಯಂತ ಸಲ್ಲಿಕೆಯಾದ ಮನವಿಗಳು ಲೆಕ್ಕವಿಲ್ಲದಷ್ಟು ಎಂಬುದು ಗಮನಾರ್ಹ.

ಶಾಸಕರಿಗೆ 672 ಅರ್ಜಿ: ರಾಜ್ಯದ 224 ಶಾಸಕರಿಗೆ 3 ಬಾರಿ ಅಂದರೆ 672, 28 ಸಂಸದರಿಗೆ 5 ಬಾರಿ ಅಂದರೆ 140 ಸೇರಿ ಶಾಸಕರು-ಸಂಸದರಿಗೆ ಸಲ್ಲಿಸಿದ್ದು 812 ಮನವಿ ಪತ್ರ. ನರಗುಂದ ತಹಶೀಲ್ದಾರ್‌ಗೆ 50,ಗದಗ ಜಿಲ್ಲಾಧಿ ಕಾರಿಗೆ 40ಕ್ಕೂ ಮೇಲ್ಪಟ್ಟು ಮನವಿ ಸಲ್ಲಿಸಿದ ರೈತರು,  ಅಧಿಕಾರಗಳೇ ನೀವಾದರೂ ಸರ್ಕಾರಗಳಿಗೆ ನಮ್ಮ ಮೊರೆ ತಲುಪಿಸಿ ಎಂದು ಗೋಗರೆದಿದ್ದಾರೆ.

ದಯಾಮರಣಕ್ಕೆ 1500 ಅರ್ಜಿ: ಇನ್ನೊಂದೆಡೆ ಮಹದಾಯಿ ಹೋರಾಟಗಾರರು ದಯಾಮರಣಕ್ಕೆ ಅನುಮತಿ ಕೋರಿ ರಾಷ್ಟ್ರಪತಿಗೆ ಪತ್ರ ಚಳವಳಿ ನಡೆಸಿದ್ದು, ಹೋರಾಟದ ಮತ್ತೂಂದು ಮೈಲಿಗಲ್ಲು. ಜು.16ರಂದು ದಯಾಮರಣ ಪತ್ರ ಚಳವಳಿಗೆ ಚಾಲನೆ ನೀಡಿ ಎಂದು 880 ಪತ್ರ ಅಂಚೆ ಮೂಲಕ ರವಾನಿಸಲಾಗಿದೆ. ಇದರ ಜತೆಗೆ ದಯಾಮರಣಕ್ಕೆ ಇಲ್ಲಿವರೆಗೂ 1500ಕ್ಕೂ ಹೆಚ್ಚು ಮನವಿ ಸಲ್ಲಿಸಿದ್ದಾರೆ. ಒಟ್ಟಾರೆ ರೈತರಿಂದ ಸಲ್ಲಿಕೆಯಾದ ಒಟ್ಟು ಮನವಿಗಳು 2 ಸಾವಿರ ಗಡಿದಾಟಿವೆ. ಇದು ಹೋರಾಟದ ಗಂಭೀರತೆಗೆ ಸಾಕ್ಷಿಯಾಗಿದೆ. ಜು.21ರ ರೈತ ಹುತಾತ್ಮ ದಿನಾಚರಣೆಯಂದು ಹೋರಾಟ 1102 ದಿನಕ್ಕೆ ತಲುಪಲಿದೆ.

ಮೂರು ವರ್ಷಗಳುದ್ದಕ್ಕೂ 2 ಸಾವಿರಕ್ಕೂ ಹೆಚ್ಚು ಮನವಿ ಸಲ್ಲಿಸಿದ್ದರೂ ರೈತರ ಬೇಡಿಕೆಗೆ ಬೆಲೆಯಿಲ್ಲ. ದೇಶದ ಅ ಧಿಕಾರ ಚುಕ್ಕಾಣಿ ಹಿಡಿದವರೆಲ್ಲರಿಗೂಮನವಿ ಸಲ್ಲಿಸಿ ನೀರಿಗಾಗಿ ಹಾತೊರೆದಿದ್ದೇವೆ. ಇನ್ನು  ಆ ನ್ಯಾಯ ದೇವತೆಯೇ ನಮ್ಮ
ಅಳಲು ಆಲಿಸಬೇಕು.

– ವೀರೇಶ ಸೊಬರದಮಠ ಸ್ವಾಮೀಜಿ, ರೈತ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷ

ಯಾರಿಗೆ, ಎಷ್ಟು ಮನವಿ ಸಲ್ಲಿಕೆ ?
12 ಪ್ರಧಾನಿ ನರೇಂದ್ರ ಮೋದಿ
05 ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ
03 ರಾಷ್ಟ್ರಪತಿ ರಾಮನಾಥ ಕೋವಿಂದ
02 ನ್ಯಾಯಾಧಿಕರಣ ಮುಖ್ಯಸ್ಥ ನ್ಯಾ.ಪಂಚಾಳ
03 ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ
02 ಎಐಸಿಸಿ ಹಿಂದಿನ ಅಧ್ಯಕ್ಷೆ ಸೋನಿಯಾ ಗಾಂ ಧಿ
30 ಮಾಜಿ ಸಿಎಂ ಸಿದ್ದರಾಮಯ್ಯ
10 ರಾಜ್ಯಪಾಲ ವಜುಬಾಯಿ ವಾಲಾ
16 ಸಿಎಂ ಕುಮಾರಸ್ವಾಮಿ

– ಸಿದ್ದಲಿಂಗಯ್ಯ ಮಣ್ಣೂರಮಠ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್‌

Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್‌

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.