ಮಹಾತ್ಮ ಗಾಂಧಿ ಬಯಲು ಭವನ ವ್ಯರ್ಥ
Team Udayavani, Nov 13, 2019, 12:48 PM IST
ನರೇಗಲ್ಲ: ಸ್ಥಳೀಯ ಪಟ್ಟಣ ಪಂಚಾಯತ್ ಹಾಗೂ ನಾಡ ಕಚೇರಿ ಮೈದಾನದಲ್ಲಿ ವಿವಿಧ ಅನುದಾನ ಪಡೆದು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಪ.ಪಂ ವತಿಯಿಂದ ನಿರ್ಮಿಸಿರುವ ಬಯಲು ಮಹಾತ್ಮ ಗಾಂಧಿ ಭವನ ನಿರ್ಮಾಣಗೊಂಡು ದಶಕಗಳೇ ಕಳೆದರೂ ಸಾರ್ವಜನಿಕರ ಇಚ್ಛಾಶಕ್ತಿ ಕೊರತೆಯಿಂದ ವ್ಯರ್ಥವಾಗಿ ನಿಂತಿದೆ.
ಇಲ್ಲಿ ಇತ್ತೀಚೆಗೆ ಒಂದೇ ಒಂದು ಕಾರ್ಯಕ್ರಮ ನಡೆದ ಉದಾಹರಣೆ ಇಲ್ಲ. ರೈತರು ಬೆಳೆದ ಈರುಳ್ಳಿ ಕಟಾವಿಗಾಗಿ, ಮಳೆಗಾಲಯದಲ್ಲಿ ವಿವಿಧ ಬೆಳೆಗಳನ್ನು ಸಂರಕ್ಷಣೆ ಮಾಡಿ ಇಡಲು ಬಳಕೆ ಆಗುವುದನ್ನು ಬಿಟ್ಟರೆ ಉಳಿದಂತೆ ಹಗಲು ರಾತ್ರಿ ವೇಳೆಯಲ್ಲಿ ಅಕ್ರಮ ಚಟುವಟಿಕೆ ಎಗ್ಗಿಲ್ಲದೆ ನಡೆಯುತ್ತವೆ.
ಮಳೆಯಾದರೆ ಸಾಕು ಭವನದ ಆವರಣದಲ್ಲಿ ನೀರು ಭವನವನ್ನು ತುಂಬುತ್ತದೆ. ರಾತ್ರಿಯಾಯಿತೆಂದರೆ ಅನೈತಿಕ ಚಟುವಟಿಕೆ ತಾಣ, ಜೂಜಾಟದ ಅಡ್ಡೆ, ಸಾರಾಯಿ ಕುಡಿಯವ ಕ್ಲಬ್ ಆಗಿ ಮಾರ್ಪಡುತ್ತದೆ. ಆದ್ದರಿಂದ ಇದು ಗಾಂಧಿ ಭವನವೋ, ಕುಡುಕರ ತಾಣವೋ ತಿಳಿಯದಂತಾಗಿದೆ. ಮೂಲ ಸೌಕರ್ಯಗಳಿಂದ ವಂಚಿತವಾದ ಈ ಭವನದ ಆವರಣದ ಮುಂಭಾಗದಲ್ಲಿ ಹಾಗೂ ಸುತ್ತಮುತ್ತಲ್ಲಿನ ಪ್ರದೇಶದಲ್ಲಿ ಜನರ ಮಲಮೂತ್ರ ವಿಸರ್ಜನೆ ಸಾಮಾನ್ಯವಾಗಿದೆ. ದುರ್ವಾಸನೆಯಿಂದ ಸುತ್ತಮುತ್ತಲಿನ ಪರಿಸರ ಮಲಿನವಾಗುತ್ತಿದ್ದು, ಪಟ್ಟಣದ ಸಾರ್ವಜನಿಕರಲ್ಲಿ ಸಾಂಕ್ರಾಮಿಕ ರೋಗಗಳು ಹರಡಬಹುದೆಂಬ ಭೀತಿ ಆವರಿಸಿದೆ.
ಮಹಾತ್ಮ ಗಾಂಧಿ ಭವನ ನಿರ್ಮಾಣ: ಪಟ್ಟಣದಲ್ಲಿ ಹೆಚ್ಚು ಸಾಂಸ್ಕೃತಿ, ಕಲಾ, ನಾಟಕ, ದೊಡ್ಡಾಟ ಸೇರಿದಂತೆ ವಿವಿಧ ಸಾಮಾಜಿಕ ಚಟುವಟಿಕೆಗೆ ಅನುಕೂಲವಾಗಲೆಂದು 2000ರಲ್ಲಿ ಐ.ಜಿ. ಸನದಿ ಸಂಸದರು ಧಾರವಾಡ ದಕ್ಷಿಣ ಭಾಗ ಇವರ ಸಂಸತ್ ನಿಧಿಯಿಂದ 2 ಲಕ್ಷ ರೂ. ಗಳಲ್ಲಿ ಮಹಾತ್ಮಗಾಂಧಿ ಭವನ ನಿರ್ಮಿಸಲಾಗಿದೆ. ಆದರೆ, ಭವನವನ್ನು ಅಭಿವೃದ್ಧಿ ಪಡಿಸುವುದಕ್ಕೆ ಇತ್ತೀಚೆಗೆ ಅಂದಾಜು 2 ಲಕ್ಷ ಅನುದಾನ ಬಳಕೆ ಮಾಡಲಾಗಿದೆ.
ಕಿತ್ತು ಹೋದ ನೆಲಹಾಸು-ಒಡೆದ ತಗಡು: ಇಲ್ಲಿನ ಗಾಂಧಿ ಭವನಕ್ಕೆ ಹಾಕಲಾಗದ ನೆಲಹಾಸು ಸಂಪೂರ್ಣವಾಗಿ ಕಿತ್ತು ಹೋಗಿದೆ. ಅಲ್ಲದೆ ಮೇಲ್ಛಾವಣಿಗೆ ಹಾಕಿದ ಸಿಮೆಂಟಿನ್ ತಗಡು ಒಡೆದು ಹೋಗಿರುವುದರಿಂದ ಅನೇಕರು ಇಲ್ಲಿ ಕಾರ್ಯಕ್ರಮ ಮಾಡುವುದಕ್ಕೆ ಹಿಂದೆಟ್ಟು ಹಾಕುತ್ತಿದ್ದಾರೆ.
ಗಾಂಧಿ ಭವನದ ಅಭಿವೃದ್ಧಿಗೆ ಪ.ಪಂ ಅಧಿಕಾರಿಗಳು ನಿರ್ಲಕ್ಷ ವಹಿಸುತ್ತಿದ್ದಾರೆ. ಸದ್ಯ ಭವನದ ಸುತ್ತಲು ತಡೆಗೋಡೆ ನಿರ್ಮಾಣಮಾಡಿ ಸಾಂಸ್ಕೃತಿಕ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಅನುಕೂಲ ಮಾಡಬೇಕು. –ಬಿ.ಕೆ. ಪೊಲೀಸ್ಪಾಟೀಲ, ಸ್ಥಳೀಯ
-ಸಿಕಂದರ ಎಂ. ಆರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag; ನಮ್ಮದು ಬಡವರಿಗೆ ಬದುಕು ಕಟ್ಟಿ ಕೊಡುವ ಪ್ರಣಾಳಿಕೆ: ಬಸವರಾಜ ಬೊಮ್ಮಾಯಿ
Panchmasali ಸಮಾಜಕ್ಕೆ ಬಿಜೆಪಿಯಿಂದ ಅನ್ಯಾಯ: ವಚನಾನಂದ ಸ್ವಾಮೀಜಿ
Gadag; ವೀರೇಶ್ವರ ಪುಣ್ಯಾಶ್ರಮಕ್ಕೆ ಭೇಟಿ ನೀಡಿ ಗದ್ದುಗೆಯ ದರ್ಶನಾಶೀರ್ವಾದ ಪಡೆದ ಶ್ರೀರಾಮುಲು
Naregal; ಪ್ರೇಮಿಯೊಂದಿಗೆ ನೇಣಿಗೆ ಶರಣಾದ ನವವಿವಾಹಿತೆ!
Gadag; ವಚನಾನಂದ ಶ್ರೀಗಳ ಮಾತನ್ನು ಗಂಭೀರವಾಗಿ ಪರಿಗಣಿಸುತ್ತೇವೆ: ಬಸವರಾಜ ಬೊಮ್ಮಾಯಿ
MUST WATCH
ಹೊಸ ಸೇರ್ಪಡೆ
Ponnampet; ಹುಲಿ ದಾಳಿಗೆ ಅಸ್ಸಾಂ ಮೂಲದ ಕಾರ್ಮಿಕ ಬಲಿ
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
Koratagere; ಗೃಹ ಸಚಿವ ಪರಮೇಶ್ವರ್ ಮತಬೇಟೆ: 40 ಗ್ರಾಮದಲ್ಲಿ ಮಿಂಚಿನ ಸಂಚಾರ
Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ