ಮಂಜುನಾಥ ತಾಪಂ ಪ್ರಭಾರಿ ಅಧ್ಯಕ್ಷ
Team Udayavani, May 27, 2020, 4:10 PM IST
ಶಿರಹಟ್ಟಿ: ತಾಲೂಕ ಪಂಚಾಯತ್ ವಿಭಜನೆಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ಜೋಗಿ ಅವರು ಪ್ರಭಾರಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.
ಹಿಂದಿನ ಅಧ್ಯಕ್ಷೆ ಗಿರಿಜವ್ವ ಲಮಾಣಿ ಹಾಗೂ ಉಪಾಧ್ಯಕ್ಷೆ ಹುಸೇನಬಿ ಅತ್ತಿಗೇರಿ ವಿಭಜನೆಯಾದ ಲಕ್ಷ್ಮೇಶ್ವರ ತಾಪಂಗೆ ಸೇರಿದ ಮತ ಕ್ಷೇತ್ರಗಳ ಸದಸ್ಯರಾಗಿರುವುದರಿಂದ ಖಾಲಿಯಿರುವ ಅಧ್ಯಕ್ಷ ಸ್ಥಾನಕ್ಕೆ ಸ್ಥಾಯಿ ಸಮಿತಿ ಅಧ್ಯಕ್ಷರನ್ನು ಶಿರಹಟ್ಟಿ ತಾಪಂ ಪ್ರಭಾರಿ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ಇಒ ಡಾ| ನಿಂಗಪ್ಪ ಒಲೇಕಾರ ತಿಳಿಸಿದರು.
ಈ ಸಂದರ್ಭದಲ್ಲಿ ತಾಪಂ ಪ್ರಭಾರಿ ಅಧ್ಯಕ್ಷರಾದ ಮಂಜುನಾಥ ಜೋಗಿ ಅವರನ್ನು ಇನ್ನುಳಿದ ಸದಸ್ಯರು ಅಭಿನಂದಿಸಿದರು. ತಾಪಂ ಸದಸ್ಯರಾದ ಪರಶುರಾಮ ಇಮ್ಮಡಿ, ಬಿಜೆಪಿ ತಾಲೂಕಾಧ್ಯಕ್ಷ ಫಕ್ಕಿರೇಶ ರಟ್ಟಿಹಳ್ಳಿ, ವಿರೂಪಾಕ್ಷಪ್ಪ ಅಣ್ಣಿಗೇರಿ, ನಿಂಬಣ್ಣ ಮಡಿವಾಳರ, ರಾಚುನಗೌಡ ಅಧ್ಯಕ್ಷ, ಮಹದೇವ ಗಾಣಿಗೇರ, ಶ್ರೀನಿವಾಸ ಬಾರಬಾರ, ಶಿವನಗೌಡ ಪಾಟೀಲ್, ನಾಗರಾಜ ಕುಲಕರ್ಣಿ, ಅಶೋಕ ಪಲ್ಲೇದ, ಪರಪ್ಪ ಹೊನಗಣ್ಣವರ ಇದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಗದಗ: ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ