8.14 ಲಕ್ಷ ಉಳಿತಾಯ ಬಜೆಟ್ ಮಂಡನೆ
Team Udayavani, Mar 3, 2021, 6:35 PM IST
ನರಗುಂದ: ಇಲ್ಲಿನ ಪುರಸಭೆಯ ನೂತನ ಆಡಳಿತ ಮಂಡಳಿ ಅವಧಿಯಲ್ಲಿ ಪ್ರಸಕ್ತ 2021-22ನೇ ಸಾಲಿನ ಪ್ರಥಮ ಆಯ್ಯವ್ಯಯ ಮಂಡಿಸಲಾಗಿದೆ. ಪುರಸಭೆ ಅಧ್ಯಕ್ಷೆ ಭಾವನಾ ಪಾಟೀಲ ಬಜೆಟ್ ಮಂಡಿಸಿದ್ದಾರೆ.
ಮಂಗಳವಾರ ಪುರಸಭೆ ಸಭಾಂಗಣದಲ್ಲಿ ಸಣ್ಣ ಕೈಗಾರಿಕೆ ಸಚಿವ ಸಿ.ಸಿ. ಪಾಟೀಲ ಉಪಸ್ಥಿತಿಯಲ್ಲಿ ಅಧ್ಯಕ್ಷತೆ ವಹಿಸಿದ್ದ ಭಾವನಾ ಪಾಟೀಲ, ಒಟ್ಟು 19 ಕೋಟಿ 54 ಲಕ್ಷ 36 ಸಾವಿರ ರೂ. ಗಾತ್ರದ ಬಜೆಟ್ ಮಂಡಿಸಿದರು.
ಆದಾಯ ನಿರೀಕ್ಷೆ: ಕಟ್ಟಡದ ಆಸ್ತಿ ತೆರಿಗೆ 1.20 ಕೋಟಿ, ಆಸ್ತಿ ತೆರಿಗೆ ದಂಡ 8 ಲಕ್ಷ, ಅಂಗಡಿ ಮಳಿಗೆಗಳಬಾಡಿಗೆ 10 ಲಕ್ಷ, ಸಾಮಗ್ರಿ ನಿರ್ವಹಣಾ 4.54 ಲಕ್ಷ,ಇತರೇ ಕರಗಳ ಸಂಗ್ರಹಣೆ 3.12 ಲಕ್ಷ, ಅಧಿಕಾರಿ ಮತ್ತು ನೌಕರರ ವೇತನಕ್ಕಾಗಿ 2.50 ಕೋಟಿ, ನೀರಿನದರಗಳ ವಸೂಲಿ 80 ಲಕ್ಷ, ನೀರು ಸರಬರಾಜು ಮತ್ತು ಬೀದಿದೀಪಗಳ ವಿದ್ಯುತ್ ಬಿಲ್ ಪಾವತಿ ಹಾಗೂ ಎಸ್ಎಫ್ಸಿ ವಿದ್ಯುತ್ ಅನುದಾನ 2.60 ಕೋಟಿ.
ಎಸ್ಎಫ್ಸಿ ಅಭಿವೃದ್ಧಿ ಅನುದಾನ 1.70 ಕೋಟಿ, 15ನೇ ಹಣಕಾಸು 2.63 ಕೋಟಿ, ಇತರೆ ವಿಶೇಷ ಅನುದಾನ 7.20 ಕೋಟಿ, ಕುಡಿಯುವ ನೀರು ಮತ್ತು ಬರ ಪರಿಹಾರ 25 ಲಕ್ಷ, ಸ್ವತ್ಛ ಭಾರತ 5 ಲಕ್ಷ ಸೇರಿದಂತೆ 23 ಮೂಲಗಳಿಂದ 19,54,36 ಲಕ್ಷ ನಿರೀಕ್ಷಿಸಲಾಗಿದೆ.
19.46 ಕೋಟಿ ವೆಚ್ಚ: ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕಾಗಿ ಅತ್ಯಧಿಕ 587.11 ಲಕ್ಷ, ಸ್ಮಶಾನಗಳ ಅಭಿವೃದ್ಧಿಗೆ 15 ಲಕ್ಷ, ಹೈಮಾಸ್ಕ್ ಮತ್ತು ವಿದ್ಯುತ್ ದೀಪ ಖರೀದಿಗೆ 18 ಲಕ್ಷ, ಸಾರ್ವಜನಿಕ/ಸಮುದಾಯ ಶೌಚಾಲಯ 20 ಲಕ್ಷ, ವಾಹನ ಮತ್ತು ಯಂತ್ರೋಪಕರಣ ಖರೀದಿಗೆ 48.25 ಲಕ್ಷ,ಕಟ್ಟಡ ನಿರ್ಮಾಣ/ನಿರ್ವಹಣೆಗೆ 2.64 ಕೋಟಿ, ಹೊರಗುತ್ತಿಗೆ ನೈರ್ಮಲಿಕರಣ ನಿರ್ವಹಣೆಗೆ 50 ಲಕ್ಷ, ಬರ ಪರಿಹಾರ ಅನುದಾನ ಹಾಗೂ ಇತರೆ ವ್ಯವಸ್ಥೆಗೆ 50 ಲಕ್ಷ ವಿದ್ಯುತ್ ದೀಪ ಹಾಗೂ ನೀರು ಸರಬರಾಜು ವಿಭಾಗದ ವಿದ್ಯುತ್ ಬಿಲ್ಗೆ 2.60 ಕೋಟಿ ಸೇರಿದಂತೆ ಒಟ್ಟು 34 ಯೋಜನೆಗಳಿಗೆ 19,46,22 ಲಕ್ಷಗಳ ಖರ್ಚು, ವೆಚ್ಚ ನಿಗದಿ ಮಾಡಲಾಗಿದೆ.
ಅನುಮೋದನೆ: ಬಜೆಟ್ ಮಂಡನೆಯಲ್ಲಿ 2021-22ನೇ ಸಾಲಿನ ಆಯ್ಯವ್ಯಯ, ಚಾಲ್ತಿ ಸಾಲಿನ ಮಾರುಕಟ್ಟೆ ಮಾರ್ಗಸೂಚಿಯನ್ವಯ ಹೊಸ ಆಸ್ತಿ ತೆರಿಗೆ ಜಾರಿಗೆ 15ನೇ ಹಣಕಾಸು ಯೋಜನೆಸಾಮಾನ್ಯ ಮೂಲ ಅನುದಾನ ಯೋಜನೆಯ ನಿರ್ಬಂಧಿತ ಅನುದಾನ 131.50 ಲಕ್ಷಗಳ ಅನುದಾನದ ಕ್ರಿಯಾಯೋಜನೆಗೆ ಮಂಜೂರಾತಿ, ವಿವಿಧ ಯೋಜನೆಗಳಡಿ ಟೆಂಡರ್ಗಳಿಗೆ, ಅಧ್ಯಕ್ಷರ ಅಪ್ಪಣೆ ಮೇರೆಗೆ ಇತರೆ ಸೇರಿ 5 ವಿಷಯಗಳಿಗೆ ಅನುಮೋದನೆ ಪಡೆಯಲಾಯಿತು. ಪುರಸಭೆ ಉಪಾಧ್ಯಕ್ಷ ಪ್ರಶಾಂತ ಜೋಶಿ ಹಾಗೂ ಎಲ್ಲ ಸದಸ್ಯರು, ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು
Honeybee Attack: ಹೆಜ್ಜೇನು ದಾಳಿ: ಓರ್ವ ಮೃತ್ಯು, ಏಳು ಮಂದಿಗೆ ಗಾಯ
ಮತ್ತೆ ಎಲ್ಲೆಡೆ ಕಾಂಗ್ರೆಸ್ ಬಾವುಟ ರಾರಾಜಿಸುವುದು ಸೂರ್ಯ ಚಂದ್ರರಷ್ಟೇ ಸತ್ಯ: ಎಚ್.ಕೆ. ಪಾಟೀಲ
Gadag; ಬಸವರಾಜ ಬೊಮ್ಮಾಯಿ ಹಿಂದೆ ದೊಡ್ಡದೊಂದು ಲಗೇಜ್ ಇದೆ: ಎಚ್.ಕೆ.ಪಾಟೀಲ್
Gadag; ಹಾವೇರಿ ಲೋಕಸಭಾ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರಿಂದ ಟೆಂಪಲ್ ರನ್
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ