ನರಗುಂದ: ವರುಣನ ಕೃಪೆಗಾಗಿ ಕೋಟಿ ಜಪಯಜ್ಞ
Team Udayavani, Jun 23, 2019, 10:27 AM IST
ನರಗುಂದ: ವರುಣನ ಕೃಪೆಗಾಗಿ ಏರ್ಪಡಿಸಲಾಗಿದ್ದ ಕೋಟಿ ಜಪಯಜ್ಞ ಮುಕ್ತಾಯದಲ್ಲಿ ಪಾಲ್ಗೊಂಡಿದ್ದ ಭಕ್ತ ಸಮೂಹ ಮಳೆಗಾಗಿ ಪ್ರಾರ್ಥಿಸಿದರು.
ನರಗುಂದ: ವರುಣನ ಕೃಪೆಗಾಗಿ ಪಟ್ಟಣದ ನಗರೇಶ್ವರ ದೇವಸ್ಥಾನದಲ್ಲಿ ಸಮಸ್ತ ಸಮಾಜ ಬಾಂಧವರ ಸಹಯೋಗದಲ್ಲಿ ಆರ್ಯ ವೈಶ್ಯ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೋಟಿ ಜಪಯಜ್ಞ ಕಾರ್ಯಕ್ರಮದಲ್ಲಿ ಒಟ್ಟು 1.21 ಕೋಟಿ ಜಪಯಜ್ಞ ನೆರವೇರಿಸಿ ಮಳೆಗೆ ಪ್ರಾರ್ಥಿಸಲಾಗಿದೆ.
ಜೂ. 14ರಿಂದ ಪ್ರಾರಂಭಗೊಂಡ ಕೋಟಿ ಜಪಯಜ್ಞ ಕಾರ್ಯಕ್ರಮದ ಸಮಾರೋಪ ದಿನವಾದ ಶನಿವಾರ ಬೆಳಗ್ಗೆವರೆಗೆ ಒಟ್ಟು 1.21 ಕೋಟಿ ಜಪ ಮಾಡಲಾಗಿದೆ. ಅಲ್ಲದೇ ಬೆಳಗಿನ ಜಾವ 121 ಕೊಡಗಳಿಂದ ನಗರೇಶ್ವರರ ಮೂರ್ತಿಗೆ ಜಲಾಭಿಷೇಕ ನೆರವೇರಿಸಲಾಗಿದೆ.
ಕೋಟಿ ಜಪಯಜ್ಞ ಮುಕ್ತಾಯ ಅಂಗವಾಗಿ ಮಧ್ಯಾಹ್ನ ನಗರೇಶ್ವರ ದೇವಸ್ಥಾನದಲ್ಲಿ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಆರ್ಯವೈಶ್ಯ ಸಮಾಜದ ಎಲ್ಲ ಬಾಂಧವರು, ಸಾರ್ವಜನಿಕರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Gadag; ನಮ್ಮದು ಬಡವರಿಗೆ ಬದುಕು ಕಟ್ಟಿ ಕೊಡುವ ಪ್ರಣಾಳಿಕೆ: ಬಸವರಾಜ ಬೊಮ್ಮಾಯಿ
Panchmasali ಸಮಾಜಕ್ಕೆ ಬಿಜೆಪಿಯಿಂದ ಅನ್ಯಾಯ: ವಚನಾನಂದ ಸ್ವಾಮೀಜಿ