ನಮ್ಮ ಸರಕಾರ ಯಾರನ್ನೂ ಮುಳುಗಲು ಬಿಡುವುದಿಲ್ಲ: ಸಿ.ಸಿ.ಪಾಟೀಲ
Team Udayavani, Nov 7, 2019, 1:51 PM IST
ಗದಗ: ರಾಜ್ಯ ಬಿಜೆಪಿ ಸರಕಾರ ಹಾಗೂ ಬಿ.ಎಸ್.ಯಡಿಯೂರಪ್ಪ ಅವರ ಆಡಳಿತ ಯಾರನ್ನೂ ಮುಳುಗಲು ಬಿಡುವುದಿಲ್ಲ. ಎಲ್ಲರನ್ನೂ ಎತ್ತಿಹಿಡಿಯಲಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಭರವಸೆ ನೀಡಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮತನಾಡಿದ ಅವರು, ಸ್ಥಳೀಯ ಜನರ ಬೇಡಿಕೆಯಂತೆ ಜಿಲ್ಲೆಯ ಲಕಮಾಪುರ ಹಾಗೂ ವಾಸನ ಗ್ರಾಮಗಳನ್ನು ಸ್ಥಳಾಂತರಿಸಲಾಗುವುದು ಎಂದರು.
ಕಳೆದ ಆಗಸ್ಟ್ ನಿಂದ ಜಿಲ್ಲೆಯಲ್ಲಿ ಮೂರು ಬಾರಿ ಪ್ರವಾಹ ಬಂದಿದ್ದು, ನರಗುಂದ ಮತ್ತು ರೋಣ ತಾಲೂಕಿನ ತಲಾ 16, ಶಿರಹಟ್ಟಿ ತಾಲೂಕಿನ 8 ಗ್ರಾಮಗಳು ಜಲಾವೃತಗೊಂಡಿವೆ. 48476 ಜನ ಸಂತ್ರಸ್ತರನ್ನು ಸ್ಥಳಾಂತರಿಸಲಗಿದೆ. ವಾಸಕ್ಕೆ ಯೋಗ್ಯವಿಲ್ಲದ, ಶಿಥಿಲಾವಸ್ಥೆಯಲ್ಲಿರುವ ಆಸರೆ ಮನೆಗಳನ್ನು ಪುನರ್ ನಿರ್ಮಿಸಲಿದೆ ಎಂದರು.
ದಶಕದ ಹಿಂದೆ ಉಂಟಾಗಿದ್ದ ಪ್ರವಾಹ ಸಂದರ್ಭದಲ್ಲಿ ಆಸರೆ ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಅವುಗಳು ಬಳಕೆಯಲ್ಲಿ ಇಲ್ಲದೇ ಹಾಳಾಗಿವೆ. ಈ ಬಾರಿ ಮತ್ತೆ ವಿತರಿಸಲಾಗುತ್ತದ. ಆದರೆ, ಹಿಂದಿನ ಪರಿಸ್ಥಿತಿ ಮರುಕಳಿಸಿದರೆ, ಅವರಿಗೆ ಮನೆ ಅಗತ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದು, ಮತ್ತೊಬ್ಬರಿಗೆ ಮನೆ ಹಂಚಿಕೆ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಗದಗ: ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ