ಬಸ್ ಸಂಚಾರಕ್ಕೆ ಒತ್ತಾಯಿಸಿ ಪ್ರತಿಭಟನೆ
Team Udayavani, Oct 1, 2019, 2:15 PM IST
ಶಿರಹಟ್ಟಿ: ಬೆಳ್ಳಟ್ಟಿಯಿಂದ ಗದಗ ಮಾರ್ಗದ ಕಡೆಗೆ ಬೆಳಗ್ಗೆ 6:30, ಮಧ್ಯಾಹ್ನ 2:30 ಮತ್ತು ಸಂಜೆ 6:30ಕ್ಕೆ ಹೆಚ್ಚಿನ ಬಸ್ ಬಿಡುವಂತೆ ಒತ್ತಾಯಿಸಿ . ಲಕ್ಷ್ಮೇಶ್ವರ ಬಸ್ ಘಟಕದ ವ್ಯವಸ್ಥಾಪಕರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿತ್ತು. ಆದರೆ ಅಧಿಕಾರಿಗಳು ಸಾರ್ವಜನಿಕರ ಬೇಡಿಕೆ ಈಡೇರಿಸದೇ ಇರುವ ಕಾರಣ ಸೋಮವಾರ ಬಸ್ ಸಂಚಾರ ಸ್ಥಗಿತಗೊಳಿಸಿ ಬೇಡಿಕೆ ಈಡೇರುವವರೆಗೂ ಹೋರಾಟಕ್ಕೆ ಮುಂದಾದರು.
ಈ ಕುರಿತು ಎಬಿವಿಪಿ ರಾಜ್ಯ ಕಾರ್ಯಕಾರಣಿ ಸದಸ್ಯ ವೀರೇಶ ಕುರವತ್ತಿ ಮಾತನಾಡಿ, ಈಗಾಗಲೆ ಮನವಿ ಸಲ್ಲಿಸಿ ತಿಂಗಳಾದರೂ ಯಾವುದೇ ಪ್ರಯೋಜನವಾಗಿಲ್ಲ. ಒಮ್ಮೆಯೂ ಫೋನ್ ಕಾಲ್ ಸ್ವೀಕರಿಸಿಲ್ಲ. ಜೊತೆಗೆ ಇಂದು ಬಸ್ ಸಂಚರ ಸ್ಥಗಿತಗೊಳಿಸಿದ್ದರೂ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಆಲಿಸದೇ ಇರುವುದು ಖಂಡನೀಯವಾಗಿದೆ. ಸದ್ಯ ಪಿಎಸ್ಐ ಬಸವರಾಜ ತಿಪ್ಪರೆಡ್ಡಿ ಮಾತಿಗೆ ಬೆಲೆಕೊಟ್ಟು ಪ್ರತಿಭಟನೆ ಹಿಂಪಡೆಯಲಾಗಿದೆ. ಮೂರು ದಿನದಲ್ಲಿ ಬೇಡಿಕೆ ಈಡೇರದಿದ್ದರೆ ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅರುಣ ಗಡ್ಡಿ, ಆನಂದ ಹಿರೇಹೊಳಿ, ಸಂತೋಷ ಗಾಂಜಿ, ಸಚಿನ್ ಮೊರಬದ, ಅರುಣ ಮಾಂಡ್ರೆ, ಮಲ್ಲಿಕಾರ್ಜುನ ಕರಿಗಾರ, ಮಾಂತೇಶ ಮಾಳಮ್ಮನವರ, ಅರುಣ ತಳವಾರ, ಪ್ರದೀಪ ನೇಕಾರ, ಸೋಹಿಲ್ ನದಾಫ್, ರಕ್ಷಿತ ಜೋತಿ, ಸವಿತಾ ಪಾಟೀಲ್, ಸಂಜು ಬಂಡಿ, ಕವಿತಾ ಪಾಟೀಲ್, ಸಾನ್ವಿ ಹಾದಿಮನಿ, ಮಿಂಚು ಬಂಡಿ, ಅನಿಲ ವಡವಿ, ಶಿವಕುಮಾರ ಬೂದಿಹಾಳ, ಅರುಣ ಅಕ್ಕಿ, ಸಂಜೀವ ಮಹಾದೇವಪ್ಪನವರ ಹಾಗೂ ವಿದ್ಯಾರ್ಥಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಗದಗ: ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ