ನೆರೆ ಸಂತ್ರಸ್ತರಿಂದ ರಸ್ತೆ ತಡೆದು ಪ್ರತಿಭಟನೆ
Team Udayavani, Aug 31, 2019, 11:24 AM IST
ಹೊಳೆಆಲೂರು: ಮೆಣಸಗಿ ನವ ಗ್ರಾಮಕ್ಕೆ ಮೂಲ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರನ್ನು ತಹಶೀಲ್ದಾರ್ ಶರಣಮ್ಮ ಕಾರಿ ಮನವೊಲಿಸಿದರು.
ಹೊಳೆಆಲೂರು: ನವ ಗ್ರಾಮಕ್ಕೆ ಬಂದು ನೆಲೆಸಿರುವ ಮೆಣಸಗಿ ಗ್ರಾಮದ ನಿವಾಸಿಗಳು ಕುಡಿಯುವ ನೀರು, ಸಮರ್ಪಕ ರಸ್ತೆ, ಶಾಲೆ ಸೇರಿದಂತೆ ಸಕಲ ಸೌಲಭ್ಯಗಳಿಂದ ವಂಚಿತವಾಗಿರುವುದಾಗಿ ಆರೋಪಿಸಿ ಗ್ರಾಮಸ್ಥರು ಹೊಳೆಆಲೂರ-ಕೊಣ್ಣೂರ ಮುಖ್ಯ ರಸ್ತೆಯನ್ನು ಗಂಟೆಗೂ ಹೆಚ್ಚು ಕಾಲ ತಡೆದು ಪ್ರತಿಭಟಿಸಿದರು.
20 ದಿನಗಳ ಹಿಂದೆ ಸಂಭವಿಸಿದ ಮಲಪ್ರಭಾ ಹಾಗೂ ಬೆಣ್ಣಿ ಹಳ್ಳದ ಪ್ರವಾಹಕ್ಕೆ ಮನೆ ಮಠ ಕಳೆದುಕೊಂಡು ನವ ಗ್ರಾಮದ ಆಸರೆ ಮನೆಗಳಲ್ಲಿ ವಾಸ ಮಾಡುತ್ತಿದ್ದೇವೆ .ಆದರೆ ನವ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಕುಡಿಯಲು ಹನಿ ನೀರು ಸಿಗುತ್ತಿಲ್ಲ. ಇನ್ನೂ ಕೆಲ ಮನೆಗಳಿಗೆ ವಿದ್ಯುತ್ ಸಂಪರ್ಕವಿಲ್ಲ. ಜಾನುವಾರು ಕಟ್ಟಿಕೊಳ್ಳಲು ಸ್ಥಳದ ಅಭಾವವಿದೆ. ಅದಕ್ಕಿಂತ ನಿತ್ಯ ಜೀವನಕ್ಕೆ ಬೇಕಾದ ವಸ್ತುಗಳು ಸಿಗುತ್ತಿಲ್ಲ. ಇಲ್ಲಿರುವ ರಸ್ತೆಗೆ ಕೆಂಪು ಮಣ್ಣು ಹಾಕಿದ್ದು, ಸುಗಮ ದಾರಿ ಇರದ ಕಾರಣ ರಸ್ತೆ ಸಂಪರ್ಕ ಸಮರ್ಪಕವಾಗಿಲ್ಲ. ಇಲ್ಲಿಂದ 3 ಕಿಮೀ ದೂರ ಇರುವ ಮೂಲ ಗ್ರಾಮಕ್ಕೆ ಶಿಕ್ಷಣ ಪಡೆಯಲು ತೆರಳುವ ಶಾಲಾ ಮಕ್ಕಳ ಪರದಾಟ ನೋಡುವಂತಿಲ್ಲ. ಮಕ್ಕಳು ಶಾಲೆಗೆ ದುಡ್ಡು ಕೊಟ್ಟು ಹೋಗುವ ಪರಸ್ಥಿತಿಯಿದೆ. ಮೆಣಸಗಿ ನವ ಗ್ರಾಮದಲ್ಲಿ ಒಟ್ಟು 1300 ಮೆನೆಗಳಿದ್ದು, ಪ್ರಾಥಮಿಕ, ಪ್ರೌಢಶಾಲೆ ಇಲ್ಲಿಯೇ ಪ್ರಾರಂಭಿಸಿ, ಹಳೆಯ ಗ್ರಾಮಗಳಲ್ಲಿ ಸಿಗುತ್ತಿದ್ದ ಸೌಲಭ್ಯ ಇಲ್ಲಿ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ತಹಶೀಲ್ದಾರ್ ಶರಣಮ್ಮ ಕಾರಿ, ಸಿಪಿಐ ಎಂ.ಐ. ನಡವಿನಮನಿ, ಪಿಎಸ್ಐ ಎಲ್.ಕೆ. ಜೋಲಕಟ್ಟಿ, ಜಿ.ಪಂ. ಸದಸ್ಯ ಶಿವಕುಮಾರ ನೀಲಗುಂದ, ಶಿಕ್ಷಣ, ಸಾರಿಗೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಜನರೂಂದಿಗೆ ಚರ್ಚಿಸಿ ಇಲ್ಲಿರುವ ನವ ಗ್ರಾಮಗಳ ನಿವಾಸಿಗಳಿಗೆ ಎಲ್ಲ ಮೂಲ ಸೌಲಭ್ಯ ನೀಡುತ್ತೇವೆ. ಮಕ್ಕಳಿಗೆ ಇಲ್ಲಿಂದ ಬೇರೆ ಕಡೆಗೆ ಹೋಗಲು ಉಚಿತ ಬಸ್ ಪಾಸ್ ವ್ಯವಸ್ಥೆ ಮಾಡಲಾಗುವುದು. ಇಲ್ಲಿನ ಆಸ್ಪತ್ರೆ ಮತ್ತು ಶಾಲೆಗಳನ್ನು 2-3 ದಿನಗಳಲ್ಲಿ ನÊ ಗ್ರಾಮದಲ್ಲೇ ಪ್ರಾರಂಭ ಮಾಡುತ್ತೇವೆ. ರಸ್ತೆ, ಶೌಚಾಲಯ, ಚರಂಡಿ ವ್ಯವಸ್ಥೆ ಆದಷ್ಟು ಬೇಗ ಸುಧಾರಣೆ ಮಾಡಿಕೊಡುವುದಾಗಿ ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ರವೀಂದ್ರ ಹಿರೇಮಠ, ಗ್ರಾ.ಪಂ ಸದಸ್ಯ ಕೇದಾರಗೌಡ ಮಣ್ಣೂರ, ಶರಣು ಸೂಡಿ, ನಿಂಗಬಸಪ್ಪ ಮುದೇನೂರ, ಮರದಪ್ಪ ಮಾದರ, ಪರಸಪ್ಪ ಮುದೇನೂರ, ಶಿವಾನಂದ ಮಾದರ, ಪುಂಡಲಿಕ ಮಾದರ, ಮುತ್ತಪ್ಪ ಮಾದರ, ಲಿಂಗರಾಜ ಜಾದವ, ಸುಭಾಷ ಕಪ್ಪಲಿ ಸೇರಿದಂತೆ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag; ತೋಂಟದಾರ್ಯ ಮಠದ ಅದ್ದೂರಿ ಮಹಾರಥೋತ್ಸವ
Gajendragad; ದಕ್ಷಿಣ ಕಾಶಿ ಕಾಲಕಾಲೇಶ್ವರ ಅದ್ದೂರಿ ರಥೋತ್ಸವ
Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’
Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ
Gadag; ಮನೆ ಮಗನಿಂದಲೇ ಸುಪಾರಿ; ನಾಲ್ವರ ಹತ್ಯೆ ಪ್ರಕರಣ ಬೇಧಿಸಿದ ಪೊಲೀಸರು; 8 ಜನರ ಬಂಧನ
MUST WATCH
ಹೊಸ ಸೇರ್ಪಡೆ
Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Dr Rajkumar: ಇಂದು ರಾಜ್ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ