ರೈಲು ನಿಲ್ದಾಣ ಪುನಾರಂಭಿಸಿ
•ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಒತ್ತಾಯ
Team Udayavani, Jul 5, 2019, 8:38 AM IST
ಗದಗ: ಹಳ್ಳಿಗುಡಿ ರೈಲ್ವೆ ನಿಲ್ದಾಣ ಪುನಾರಂಭಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಕುಮಾರ ಶೆಟ್ಟಿ ಬಣ) ಒತ್ತಾಯಿಸಿ ಪ್ರತಿಭಟನೆ ನಡೆಸಿತು.
ಗದಗ: ಜಿಲ್ಲೆಯ ಹಳ್ಳಿಗುಡಿ ರೈಲ್ವೆ ನಿಲ್ದಾಣವನ್ನು ಪುನಾರಂಭಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಕುಮಾರ ಶೆಟ್ಟಿ ಬಣ) ಒತ್ತಾಯಿಸಿದೆ.
ಈ ಕುರಿತು ಸ್ಥಳೀಯ ಗದಗ ರೈಲ್ವೆ ಜಂಕ್ಷನ್ ಅಧಿಕಾರಿಗಳ ಮೂಲಕ ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಿ, ಈ ಹಿಂದೆ ಗದಗ- ಕೊಪ್ಪಳ ರೈಲ್ವೆ ಮಾರ್ಗದ ಬ್ರಾಡ್ಗೇಜ್ ನಿರ್ಮಾಣದ ವೇಳೆ ಹಳ್ಳಿಗುಡಿ ರೈಲ್ವೆ ನಿಲ್ದಾಣ ತೆರವುಗೊಳಿಸಲಾಗಿತ್ತು. ಆ ನಂತರ ಅಧಿಕಾರಿಗಳು ರೈಲ್ವೆ ನಿಲ್ದಾಣವನ್ನು ಪುನರ್ ನಿರ್ಮಿಸುವ ಭರವಸೆ ನೀಡಿದ್ದರೂ, ಅದು ಸಾಕಾರಗೊಂಡಿಲ್ಲ.
ಇದರಿಂದಾಗಿ ಹಳ್ಳಿಗುಡಿ ಸುತ್ತಲಿನ ಹಳ್ಳಿಗುಡಿ, ಹರ್ಲಾಪುರ, ಲಕ್ಕುಂಡಿ ಹಾಗೂ ತಿಮ್ಮಾಪುರ ಮತ್ತಿತರೆ ಗ್ರಾಮಗಳ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗಿದೆ. ಈ ಭಾಗದ ರೈಲ್ವೆ ಪ್ರಯಾಣಿಕರು ದೂರದ ಊರುಗಳಿಗೆ ತೆರಳು 20-30 ಕಿಮೀ ದೂರದಲ್ಲಿರುವ ಗದಗ ನಗರಕ್ಕೆ ತೆರಳುವಂತಾಗಿದೆ.
ಈ ಹಿನ್ನೆಲೆಯಲ್ಲಿ ಗ್ರಾಮದ ಹಾದಿಯಾಗಿ ರೈಲ್ವೆ ಮಾರ್ಗ ಸಾಗಿದ್ದು, ಹಳ್ಳಿಗುಡಿಯಲ್ಲಿ ರೈಲು ನಿಲ್ದಾಣ ಆರಂಭಿಸುವುದರಿಂದ ಈ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕರವೇ ಅಧ್ಯಕ್ಷ ದಾವಲಸಾಬ ಆರ್.ಮುಳಗುಂದ, ಜಿಲ್ಲಾ ಖಜಾಂಚಿ ವೆಂಕಟೇಶ ಬೇಲೂರ, ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ ಭಂಡಾರಿ, ಗದಗ ತಾಲೂಕು ಅಧ್ಯಕ್ಷ ಖಲಂದರ ಹರ್ಲಾಪುರ, ಶಿರಹಟ್ಟಿ ತಾಲೂಕಾಧ್ಯಕ್ಷ ರಫೀಕ ಕೆರೆಮನಿ, ಮುಂಡರಗಿ ತಾಲೂಕಾಧ್ಯಕ್ಷ ಸಿದ್ದಪ್ಪ ಮುದ್ಲಾಪುರ, ಗೌರಾಧ್ಯಕ್ಷ ಉಮೇಶ ಚನ್ನಳ್ಳಿ, ನರಗುಂದ ತಾಲೂಕಾಧ್ಯಕ್ಷ ಹನಮಂತ ಮಜ್ಜಿಗುಡ್ಡ, ಜಿಲ್ಲಾ ಸಹ ಕಾರ್ಯದರ್ಶಿ ಸಹದೇವ ಕೋಟಿ, ಮಹೇಶ ಲಿಂಗಶೆಟ್ಟಿ, ಮರಿಗಾಳೆಪ್ಪ ಪೂಜಾರ, ಅಬ್ದುಲ್ ಬೇಲೇರಿ, ರಾಜೇಸಾಬ ಗಡಾದ, ಮಹ್ಮದ ನಾರಾಯಣಕೇರಿ, ಬಸವರಾಜ ಎಸ್. ಬೇವೂರ, ಉಮೇಶ ಚನ್ನಳ್ಳಿ, ಚಂಬಣ್ಣ ಬೇವೂರ, ಉಮೇಶ ಲಿಂಗಶೆಟ್ಟರ, ಹೊಳಿಯಪ್ಪ ಜಂಬಣ್ಣವರ, ಅಬ್ದುಲ್ಸಾಬ ದೊಡ್ಡಮನಿ, ಮಂಜು ಕಟ್ಟಿಮನಿ, ಮಣಿಕಂಠ ಭಂಡಾರಿ, ಶಬ್ಬೀರ ಈಟಿ, ಮಲ್ಲೇಶ ಪಲ್ಲೇದ, ಮಾಬುಸಾಬ ಹುಬ್ಬಳ್ಳಿ, ಲಕ್ಷ್ಮಣ ಬೆಟಗೇರಿ, ಮುತ್ತು ಕೊಪ್ಪರದ, ರವಿ ತಟ್ಟಿ, ಗೌಸ ಕಲಾವಂತ, ಖಾದರ ಟಪಾಲಜಿ, ದೇವಪ್ಪ ಬಟ್ಟೂರ, ಕಲಾವತಿ ನಾವಿ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗದಗ: ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ
Gadag; ತೋಂಟದಾರ್ಯ ಮಠದ ಅದ್ದೂರಿ ಮಹಾರಥೋತ್ಸವ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ