2 ಕಿಮೀ ದೂರ ಸಾಗಬೇಕು ಮುಸ್ಲಿಮರು ಹಳ್ಳದ ತಟದಲ್ಲಿ ಶವ ಸಂಸ್ಕಾರ
ಬಳಕೆಯಾಗುತ್ತಿಲ್ಲ ಸ್ಮಾಶಾನ ಭೂಮಿ
Team Udayavani, Jan 16, 2020, 1:38 PM IST
ಶಿರಹಟ್ಟಿ: ಗಾಂಧಿ ಗ್ರಾಮ ಪ್ರಶಸ್ತಿ ಪಡೆದ ತಾಲೂಕಿನ ಮಾಗಡಿ ಗ್ರಾಮದಲ್ಲಿ ಸ್ಮಶಾನಕ್ಕಾಗಿ ನಿವೇಶ ಖರೀದಿಯಾಗಿ ಅಂದಾಜು 10 ವರ್ಷಗಳಾಗಿವೆ. ಆದರೂ ಈವರೆಗೆ ಬಳಕೆಯಾಗದೇ ಖಾಸಗಿ ಜಮೀನಿನ ಹಳ್ಳದ ದಂಡೆಯಲ್ಲಿ ಶವ ಸಂಸ್ಕಾರ ಮಾಡಲಾಗುತ್ತಿದೆ.
ಗ್ರಾಮದಲ್ಲಿ ಸ್ಮಶಾನ ನಿರ್ಮಾಣಕ್ಕೆ ಎರಡು ಎಕರೆ ಜಮೀನು ಇದ್ದರೂ ಬಳಕೆ ಮಾಡದೆ ಹಾಗೆ ಉಳಿದಿದೆ. ಸ್ಮಶಾನದ ನಿವೇಶನದಲ್ಲಿ ಲಿಂಗು ಪ್ರತಿಷ್ಠಾನ ಮಾಡುವ ಉದ್ದೇಶದಿಂದ ಹಾಗೆ ಬಿಡಲಾಗಿದೆ ಎನ್ನುತ್ತಿದ್ದಾರೆ ಊರಿನವರು.
ಮಾಗಡಿ ಗ್ರಾಪಂ ಗ್ರಾಮಸ್ಥರಿಗಾಗಿ ಶವ ಸಂಸ್ಕಾರ ಮಾಡಲು ನಿವೇಶನ ಖರೀದಿ ಮಾಡಿ ಹತ್ತು ವರ್ಷವೇ ಗತಿಸಿದ್ದರೂ ಈವರೆಗೆ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವಲ್ಲಿ ನಿರ್ಲಕ್ಷ್ಯ ವಹಿಸಿದೆ. ಜೊತೆಗೆ ಗ್ರಾಪಂ ಸದಸ್ಯರು ಇತ್ತ ಗಮನ ಹರಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ.
2 ಕಿಮೀ ದೂರ ಸಾಗಬೇಕು ಮುಸ್ಲಿಮರು : ಮಾಗಡಿ ಗ್ರಾಮದಲ್ಲಿ ಮುಸ್ಲಿಮರು ಶವ ಸಂಸ್ಕಾರ ಮಾಡಲು ಗ್ರಾಮದ ಲಕ್ಷ್ಮೆಶ್ವರ ಮಾರ್ಗದಲ್ಲಿ ಎರಡು ಕಿಮೀ ದೂರದಲ್ಲಿರುವ ನಿವೇಶನದಲ್ಲಿ ಶವ ಸಂಸ್ಕಾರ ಮಾಡುವ ಅನಿವಾರ್ಯತೆಯಿದೆ. ಮಾಗಡಿ ಗ್ರಾಮವು ಹಲವಾರು ವಿಚಾರಗಳಲ್ಲಿ ಪ್ರಸಿದ್ಧಿಯಾಗಿದ್ದರೂ ಅಭಿವೃದ್ಧಿ ವಿಚಾರದಲ್ಲಿ ಸಾಕಷ್ಟು ಹಿಂದೆ ಉಳಿದಿದೆ. ಅದರಲ್ಲೂ ಶವ ಸಂಸ್ಕಾರ ಮಾಡಲು ನಿವೇಶನ ಖರೀದಿಯಾಗಿ ಸುಮಾರು
10 ವರ್ಷಗಳಾಗಿದ್ದರೂ ಬಳಕೆ ಮಾಡದೇ ಇರುವುದು ಬೇಸರದ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ಗ್ರಾಪಂನವರು ಇದನ್ನು ಬಳಕೆ ಮಾಡುವಂತೆ ನಿರ್ಧಾರ ಕೈಗೊಳ್ಳವುದು ಅವಶ್ಯಕವಾಗಿದೆ ಎನ್ನುತ್ತಾರೆ ಯುವ ಮುಖಂಡ ಹನುಮಂತ ಬಾಲರೆಡ್ಡಿ
ಮಾಗಡಿ ಗ್ರಾಮದಲ್ಲಿ ಶವ ಸಂಸ್ಕಾರ ಮಾಡಲು ಎರಡು ಎಕರೆ ನಿವೇಶನವಿದ್ದು, ಶವ ಸಂಸ್ಕಾರ ಮಾಡಲು ಮತ್ತು ಶವ ಸುಡಲು ಖಾತ್ರಿ ಯೋಜನೆ ಮೂಲಕ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಶೀಘ್ರ ಸಾರ್ವಜನಿಕರ ಬಳಕೆಗೆ ಅನುಕೂಲ ಕಲ್ಪಿಸಲಾಗುವುದು.
ಶಿವಕುಮಾರ ವಾಲಿ, ಪಿಡಿಒ
ಮಾಗಡಿ ಗ್ರಾಮದಲ್ಲಿ ನೆನಗುದಿಗೆ ಬಿದ್ದಿದ್ದ ಶವ ಸಂಸ್ಕಾರದ ನಿವೇಶನವನ್ನು ನಾವು ಈಗ ಉದ್ಯೋಗ ಖಾತ್ರಿ ಯೋಜನೆ ಮೂಲಕ ಅಭಿವೃದ್ಧಿಪಡಿಸಲಾಗುತ್ತಿದೆ. ರುದ್ರಭೂಮಿಗೆ ವಿಶೇಷ ಪೂಜೆ ನೆರವೇರಿಸಿ ಶೀಘ್ರ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗುವುದು.
ಶಿವಕ್ಕ ಸಂಗಯ್ಯ ಹಿರೇಮಠ,
ಗ್ರಾಪಂ ಅಧ್ಯಕ್ಷ
ಪ್ರಕಾಶ ಶಿ. ಮೇಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag; ನಮ್ಮದು ಬಡವರಿಗೆ ಬದುಕು ಕಟ್ಟಿ ಕೊಡುವ ಪ್ರಣಾಳಿಕೆ: ಬಸವರಾಜ ಬೊಮ್ಮಾಯಿ
Panchmasali ಸಮಾಜಕ್ಕೆ ಬಿಜೆಪಿಯಿಂದ ಅನ್ಯಾಯ: ವಚನಾನಂದ ಸ್ವಾಮೀಜಿ
Gadag; ವೀರೇಶ್ವರ ಪುಣ್ಯಾಶ್ರಮಕ್ಕೆ ಭೇಟಿ ನೀಡಿ ಗದ್ದುಗೆಯ ದರ್ಶನಾಶೀರ್ವಾದ ಪಡೆದ ಶ್ರೀರಾಮುಲು
Naregal; ಪ್ರೇಮಿಯೊಂದಿಗೆ ನೇಣಿಗೆ ಶರಣಾದ ನವವಿವಾಹಿತೆ!
Gadag; ವಚನಾನಂದ ಶ್ರೀಗಳ ಮಾತನ್ನು ಗಂಭೀರವಾಗಿ ಪರಿಗಣಿಸುತ್ತೇವೆ: ಬಸವರಾಜ ಬೊಮ್ಮಾಯಿ