ಸೌಹಾರ್ದತೆಯ ಶಿರೋಳದ ರೊಟ್ಟಿ ಜಾತ್ರೆ
Team Udayavani, Jan 27, 2019, 6:09 AM IST
ನರಗುಂದ: ತಾಲೂಕಿನ ಶಿರೋಳದ ಸರ್ವಧರ್ಮ ಸಮನ್ವಯದ ರೊಟ್ಟಿ ಜಾತ್ರೆಯು ಉತ್ತರ ಕರ್ನಾಟಕ ಭಾಗದಲ್ಲೇ ಸಾಮರಸ್ಯದ ಸಂಕೇತವಾಗಿ ವರ್ಷದಿಂದ ವರ್ಷಕ್ಕೆ ಜನಪ್ರಿಯತೆ ಹೊಂದುತ್ತಿದೆ. ಇದು ಮಲಪ್ರಭಾ ನದಿ ದಂಡೆಯ ಬಹು ಗ್ರಾಮಗಳ ಒಗ್ಗಟ್ಟಿನ ದ್ಯೋತಕವಾಗಿ ಆಚರಣೆಗೊಳ್ಳುತ್ತಿರುವುದು ವಿಶೇಷ.
ಶಿರೋಳ ತೋಂಟದಾರ್ಯ ಮಠದ ‘ನಮ್ಮೂರ ಜಾತ್ರೆ’ಯ ಒಂದು ಭಾಗವೇ ರೊಟ್ಟಿ ಜಾತ್ರೆ. ಧರ್ಮಸಭೆ, ರಥೋತ್ಸವಕ್ಕೆ ಸೀಮಿತವಾಗದ ಈ ಜಾತ್ರೆ ಸರ್ವ ಜನಾಂಗಗಳ ಮನಸ್ಸು ಒಗ್ಗೂಡಿಸಿ ಕೋಮು ಸೌಹಾರ್ದತೆ ಗಟ್ಟಿಗೊಳಿಸಿ, ಏಕತೆಯ ಬದುಕಿನ ಭಾರತೀಯ ಸಂಸ್ಕೃತಿ, ಗ್ರಾಮೀಣ ಸೊಗಡು ಬಿಂಬಿಸುವಲ್ಲಿ ಹೆಸರಾಗಿದೆ.
ಮುಂಡರಗಿ ತಾಲೂಕು ಡಂಬಳ ತೋಂಟದಾರ್ಯ ಮಠದ ಜಾತ್ರೆಯಲ್ಲಿ ತೋಂಟದ ಲಿಂ| ಡಾ| ಸಿದ್ಧಲಿಂಗ ಸ್ವಾಮೀಜಿ ಖಡಕ್ ರೊಟ್ಟಿ, ಪಲ್ಲೆ(ಭಜ್ಜಿ), ಕರಿಂಡಿ, ಅನ್ನದ ಬಾನ ಭೋಜನ ಪ್ರಸಾದ ಪದ್ಧತಿ ಪ್ರಾರಂಭಿಸಿದ್ದರು. ಅದೇ ಮಾದರಿಯಲ್ಲಿ 1994ರಲ್ಲಿ ಶಿರೋಳ ತೋಂಟದಾರ್ಯ ಮಠದಲ್ಲಿ ಶ್ರೀ ಗುರುಬಸವ ಸ್ವಾಮೀಜಿ ರೊಟ್ಟಿ ಜಾತ್ರೆಗೆ ಮುನ್ನುಡಿ ಬರೆದರು. 24 ವರ್ಷದಿಂದ ತೇರು, ಉತ್ಸವ, ಪೂಜೆಗಿಂತ ಜನಪ್ರಿಯವಾಗಿದ್ದು ರೊಟ್ಟಿ ಜಾತ್ರೆಯಾಗಿದೆ. ಅದಕ್ಕೆಂದೇ ಮಹಾನುಭಾವರು ‘ಅನ್ನಬ್ರಹ್ಮ’ ಎಂದರು.
ರೊಟ್ಟಿ ಜಾತ್ರೆ ವಿಶೇಷ: 15 ಚೀಲ ಜೋಳದ ಹಿಟ್ಟು ಸರ್ವ ಧರ್ಮೀಯರ ಮನೆಗಳಿಗೆ ತಲುಪುತ್ತದೆ. ಕೆಲವರು ಖುದ್ದಾಗಿ ಹಿಟ್ಟು ಪಡೆಯುವರು. ಇಲ್ಲವೇ ತಮ್ಮದೆ ಹಿಟ್ಟಿನಿಂದ ರೊಟ್ಟಿ ಮಾಡಿ ಶ್ರೀಮಠಕ್ಕೆ ಕಳಿಸುತ್ತಾರೆ. ತಟ್ಟುವ ಕೈಗಳಿಗೂ ಯಾವುದೇ ರೀತಿಯ ಭಿನ್ನಭೇದ ಇಲ್ಲದ ಜಾತ್ರೆ ಇದಾಗಿದೆ.
ಬಹುತೇಕ ಜಾತ್ರೆಗಳಲ್ಲಿ ಸಿಹಿಯೂಟ ಪ್ರಸಾದವಿದ್ದರೆ, ತೋಂಟದಾರ್ಯ ಜಾತ್ರೆಯಲ್ಲಿ ಜೋಳದ ರೊಟ್ಟಿಯನ್ನೇ ಪ್ರಸಾದವಾಗಿ ನೀಡುವುದಕ್ಕೆ ದಶಕಗಳ ಇತಿಹಾಸವಿದೆ. ಖಡಕ್ ರೊಟ್ಟಿ, ಹೊಲದಲ್ಲಿ ಬೆಳೆದ ತರಕಾರಿಗಳನ್ನು ಚಕ್ಕಡಿ, ಟ್ರ್ಯಾಕ್ಟರ್ನಲ್ಲಿ ತಂದು ಮಠದಲ್ಲಿ ಕೂಡಿ ಹಾಕುತ್ತಾರೆ. ಈ ವರ್ಷ 85 ಸಾವಿರಕ್ಕೂ ಹೆಚ್ಚು ಜೋಳದ ಖಡಕ್ ರೊಟ್ಟಿ ಸಂಗ್ರಹವಾಗಿದೆ ಎನ್ನುತ್ತಾರೆ ಸದ್ಭಕ್ತರು.
ಬರಗಾಲಕ್ಕೆ ಬರಡಾಗಿಲ್ಲ: ಜನಪ್ರಿಯತೆ ಸಾಧಿಸಿದ ರೊಟ್ಟಿ ಜಾತ್ರೆ ಎಂದಿಗೂ ಬರಗಾಲ ಭವನೆಗೆ ಬರಡಾಗಿಲ್ಲ. ನಾಲ್ಕೈದು ವರ್ಷಗಳಿಂದ ಸತತ ಬರಗಾಲವಿದ್ದರೂ ಭಕ್ತರು ಜಾತ್ರೆ ಮುನ್ನಡೆಸಿದ್ದಾರೆ. ಇದು ಭಕ್ತಿಯ ಪರಾಕಾಷ್ಟೆಗೆ ನಿದರ್ಶವಾಗಿದೆ. ಜ.27ರಂದು ಶಿರೋಳ ತೋಂಟದಾರ್ಯ ಮಠದ ಆವರಣದಲ್ಲಿ ರೊಟ್ಟಿ ಊಟ ಜಾತ್ರೆ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ
Gadag; ಮನೆ ಮಗನಿಂದಲೇ ಸುಪಾರಿ; ನಾಲ್ವರ ಹತ್ಯೆ ಪ್ರಕರಣ ಬೇಧಿಸಿದ ಪೊಲೀಸರು; 8 ಜನರ ಬಂಧನ
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Gadag; ನಾಲ್ವರ ಬರ್ಬರ ಹತ್ಯೆ ಐವರು ದುಷ್ಕರ್ಮಿಗಳು ಮಾಡಿರುವ ಶಂಕೆ
Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ
MUST WATCH
ಹೊಸ ಸೇರ್ಪಡೆ
ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?
ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ
Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ