ಲೋಕ ಕಲ್ಯಾಣಾರ್ಥಕ್ಕೆ ಸಿದ್ಧಿ ಸಮಾಧಿ ಯೋಗ
ಅಂತೂರ-ಬೆಂತೂರ ಗ್ರಾಮದ ಡಾ| ರಾಚೋಟೇಶ್ವರ ಶ್ರೀಗಳು
Team Udayavani, Jul 16, 2019, 10:20 AM IST
ಮುಂಡರಗಿ: ಮಾನವ ಕುಲಕ್ಕೆ ಒಳಿತು ಆಗಬೇಕು. ವಿಶೇಷವಾಗಿ ರೈತ ಸಮುದಾಯ ಆರ್ಥಿಕವಾಗಿ, ಸಾಮಾಜಿಕವಾಗಿ ಮುಂದುವರಿಯಲು ಉತ್ತಮ ಬೆಳೆ ಬೆಳೆದು ಸಬಲರಾಗಬೇಕು. ಇಂತಹ ಸದುದ್ದೇಶ ಸೇರಿದಂತೆ ಲೋಕ ಕಲ್ಯಾಣಾರ್ಥವಾಗಿ ಅಂತೂರ-ಬೆಂತೂರ ಗ್ರಾಮದ ಶ್ರೀ ಬೂದೀಶ್ವರ ಸಂಸ್ಥಾನ ಮಠದ ಡಾ| ರಾಚೋಟೇಶ್ವರ ಶಿವಾಚಾರ್ಯರು ಸ್ವಾಮೀಜಿ 21 ದಿನಗಳ ಮೌನಾನುಷ್ಠಾನ ಹಾಗೂ 21 ದಿನಗಳ ಸಿದ್ಧಿ ಸಮಾಧಿಯೋಗದ ಸ್ಥಿತಿಯಲ್ಲಿ ಗುಹೆಯಲ್ಲಿ ಕುಳಿತಿದ್ದಾರೆ.
ತಾಲೂಕಿನ ಕಪ್ಪತ್ತಗುಡ್ಡದ ಗೊಲಗೇರಿಮಠದ ಪಾರ್ವತಿ-ಪರಮೇಶ್ವರ ಗುಹೆಯಲ್ಲಿ ಮೌನಾನುಷ್ಠಾನ ಕುಳಿತಿದ್ದು, ಯಾರೊಂದಿಗೂ ಮಾತನಾಡುವುದಿಲ್ಲ. ಆಹಾರ ಸೇವನೆ ಮಾಡದೇ ನಿರಾಹಾರಿಗಳಾಗಿ ಶಿವನ ಜ್ಞಾನದಲ್ಲಿ ಅನುಷ್ಠಾನ ಕುಳಿತಿದ್ದಾರೆ. ವಿಶೇಷವೆಂದರೆ ಶ್ರೀಗಳು ಕುಳಿತಿರುವ ಅನುಷ್ಠಾನದ ಗುಹೆಯ ಒಳಗೆ ಪ್ರವೇಶ ಮಾಡುವ ಮಾರ್ಗವನ್ನು ಸಿಮೆಂಟ್ ಮತ್ತು ಇಟ್ಟಿಗೆಯಿಂದ ಮುಚ್ಚಿ ಗಾಳಿ-ಬೆಳಕು ಆಡದಂತೆ ಬಂದೋಬಸ್ತ್ ಮಾಡಲಾಗಿದೆ.
ಡಾ| ರಾಚೋಟೇಶ್ವರ ಶ್ರೀಗಳು ಅನುಷ್ಠಾನಕ್ಕೆ ಕುಳಿತಿರುವ ಗುಹೆಯೊಳಗೆ ಗಾಳಿ ಬೆಳಕು ಇಲ್ಲದೆ ಕತ್ತಲ ಕೋಣೆಯಾಗಿದೆ. ಶ್ರೀಗಳ ಅನುಷ್ಠಾನವು ಜೂನ್ 7ರಿಂದ ಪ್ರಾರಂಭವಾಗಿದೆ. ಸಿದ್ಧಿ ಸಮಾಧಿಸ್ಥಿತಿಯ ಅನುಷ್ಠಾನವು ಜೂನ್ 27ರಿಂದ ಪ್ರಾರಂಭಿಸಿದ್ದು, ಜುಲೈ 18ಕ್ಕೆ ಮುಕ್ತಾಯವಾಗಲಿದೆ. ಈ ಅನುಷ್ಠಾನಕ್ಕೆ ತನ್ನದೆ ಆದ ಇತಿಹಾಸ, ಧಾರ್ಮಿಕ ಹಿನ್ನೆಲೆಯಿದೆ. ಮೌನಾನುಷ್ಠಾನದ ಕೊನೆಯ ದಿನ ಭಕ್ತರು ಬಾಗಿಲು ಒಡೆದು ಸ್ವಾಮೀಜಿಗಳನ್ನು ಬರಮಾಡಿಕೊಳ್ಳಲಿದ್ದಾರೆ. ಇದೊಂದು ತಪಸ್ಸಾಗಿದ್ದು, ಅವರ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ ಎನ್ನುತ್ತಾರೆ ಡೋಣಿ ಗ್ರಾಮಸ್ಥ ಶಂಕರಗೌಡ ಜಾಯನಗೌಡರ.
ಡಾ.ರಾಚೋಟೇಶ್ವರರ ಸ್ವಾಮೀಜಿಗಳ ಅನುಷ್ಠಾನದ ದರ್ಶನ ಪಡೆಯಲು ನೂರಾರು ಭಕ್ತರು ಪ್ರತಿದಿನ ಆಗಮಿಸುತ್ತಿದ್ದಾರೆ. ಪ್ರತಿದಿನವೂ ಬರುವ ಭಕ್ತರು ಗುಹೆಯ ಮುಂಭಾಗದಲ್ಲಿ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿ ಮರಳುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು
Honeybee Attack: ಹೆಜ್ಜೇನು ದಾಳಿ: ಓರ್ವ ಮೃತ್ಯು, ಏಳು ಮಂದಿಗೆ ಗಾಯ
ಮತ್ತೆ ಎಲ್ಲೆಡೆ ಕಾಂಗ್ರೆಸ್ ಬಾವುಟ ರಾರಾಜಿಸುವುದು ಸೂರ್ಯ ಚಂದ್ರರಷ್ಟೇ ಸತ್ಯ: ಎಚ್.ಕೆ. ಪಾಟೀಲ
Gadag; ಬಸವರಾಜ ಬೊಮ್ಮಾಯಿ ಹಿಂದೆ ದೊಡ್ಡದೊಂದು ಲಗೇಜ್ ಇದೆ: ಎಚ್.ಕೆ.ಪಾಟೀಲ್
Gadag; ಹಾವೇರಿ ಲೋಕಸಭಾ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರಿಂದ ಟೆಂಪಲ್ ರನ್
MUST WATCH
ಹೊಸ ಸೇರ್ಪಡೆ
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ