ಬೆಟ್ಟದ ಗೂಡಿನ ರಂಧ್ರದಿಂದ ಹರಿಯಿತು ಅಲ್ಪ ಗಂಗಾಜಲ


Team Udayavani, Apr 8, 2019, 12:53 PM IST

gad-1
ಗಜೇಂದ್ರಗಡ: ಸಮೀಪದ ಶ್ರೀ ಕಾಲಕಾಲೇಶ್ವರ ದೇಗುಲ ಸನ್ನಿಧಾನದಲ್ಲಿ ಯುಗಾದಿ ಪಾಡ್ಯದಂದು ಮಳೆ ಪ್ರಮಾಣ ಮುನ್ಸೂಚನೆ ತಿಳಿಸುವ ಬೆಟ್ಟದ ಗೂಡಿನ ರಂದ್ರದಿಂದ ಅಲ್ಪ ಗಂಗಾಜಲ ಹರಿದಿದೆ. ಹೀಗಾಗಿ ನೂತನ ಸಂವತ್ಸರದಲ್ಲಿ ಸಾಧಾರಣ ಮಳೆ, ಬೆಳೆ ಆಗಲಿದೆ ಎಂದು ನಂಬಲಾಗುತ್ತಿದೆ.
ದಕ್ಷಿಣ ಕಾಶಿ ಖ್ಯಾತಿಯ ಶ್ರೀ ಕಾಲಕಾಲೇಶ್ವರ ಐತಿಹಾಸಿಕ ದೇಗುಲ ಸನ್ನಿಧಿಯಲ್ಲಿ ಭಕ್ತರಿಗೆ ದರ್ಶನ ಭಾಗ್ಯ ನೀಡುವುದರ ಜೊತೆ ಅನ್ನದಾತರಿಗೆ ಮಳೆ, ಬೆಳೆ ಮುನ್ಸೂಚನೆ ಅಂದಾಜಿಸುವ ತಾಣವು ಇದಾಗಿದೆ. ಹೀಗಾಗಿ ಯುಗಾದಿಯಂದು ಸುಣ್ಣ, ಸುರುಮಗಳ ಲೀಲೆ ಹಾಗೂ ಭವಿಷ್ಯ ಮಳೆ ಪ್ರಮಾಣ ಮುನ್ಸೂಚನೆ ಕಾಣಲು ರೈತರು ಕಾತರರಾಗಿದ್ದರು.
ಶುಕ್ರವಾರದಂದು ನಾಡಿನ ಅಪಾರ ಸಂಖ್ಯೆ ಭಕ್ತರು, ರೈತರು ದೇವಸ್ಥಾನಕ್ಕೆ ಆಗಮಿಸಿದ್ದರು. ಸೂರ್ಯೋದಯ ನಂತರ ದೇವಸ್ಥಾನ ಅಂತರಗಂಗೆ ಪಕ್ಕದ ವರ್ತುಲಾಕಾರದಲ್ಲಿ ಗುಡ್ಡಕ್ಕಿರುವ ರಂದ್ರದಿಂದ ತನ್ನಿಂದತಾನೆ ನೀರು ಹರಿದು ಬಂದಿದೆ. ಅದರ ಆಧಾರ ಮೇಲೆ ಆಯಾ ವರ್ಷ ಮಳೆ ಪ್ರಮಾಣ ರೈತರು ಅಂದಾಜಿಸಿದರು. ಮಾಡದಿಂದ ನೀರು ಹರಿದು ಬಂದರೆ ಉತ್ತಮ ಮಳೆಗಾಲ, ಇರದಿದ್ದರೆ ಬರಗಾಲ ಎಂಬ ನಂಬಿಕೆ ಭಕ್ತರದ್ದಾಗಿದೆ. ಆದರೆ ಈ ವರ್ಷ ರಂದ್ರದಿಂದ ಕಡಿಮೆ ನೀರು ಬಂದ ಹಿನ್ನೆಲೆಯಲ್ಲಿ ಸಾಧಾರಣೆ ಮಳೆಯಾಗುತ್ತದೆ ಎಂಬ ನಂಬಿಕೆ ರೈತರದ್ದಾಗಿದೆ.
ಸುಣ್ಣ-ಸುರುಮಗಳಿಂದ ಬೆಳೆಗಳ ಅಂದಾಜು: ದುರ್ಮುಖನಾಮ ಸಂವತ್ಸರ ಪ್ರವೇಶವಾದ ಶುಕ್ರವಾರ ದೇವಸ್ಥಾನದಲ್ಲಿ ಸುಣ್ಣ-ಸುರುಮ ಇಟ್ಟು ರಾತ್ರಿ ಪೂಜೆ ಮಾಡಿ ಕೆಳಗೆ ಬಂದಿದ್ದರು. ಪಲ್ಲಕ್ಕಿಯೊಂದಿಗೆ ದೇವಸ್ಥಾನ ಆರ್ಚಕರು ಮತ್ತು ಸಿಬ್ಬಂದಿ ಸಕಲ ವಾದ್ಯದಿಂದ ರಥ ಪ್ರದಕ್ಷಿಣೆ ಹಾಕಿದರು. ಮರು ದಿನವಾದ ಬೆಳಗ್ಗೆ ಗುಡ್ಡದ ಪಡಿಗೆ ಸುರಮಕ್ಕಿಂತ ಸುಣ್ಣ ಹೆಚ್ಚಿಗೆ ಲೇಪನವಾಗಿತ್ತು. ಇದರಿಂದ ಬಿಳಿ ಜೋಳ ಬೆಳೆ ಹೆಚ್ಚಿಗೆ ಬರಲಿದೆ ಎಂಬುದು ರೈತರು ನಂಬಿದ್ದಾರೆ.
ಹೊರ ಬಂದ ತೇರು: ಸೂರ್ಯೋದಯ ಮುಂಚೆ ರಥ ಆಲಯದಿಂದ ತೇರನ್ನು ಹೊರತರಲಾಯಿತು. ದೇವಸ್ಥಾನದಲ್ಲಿ ಅಭಿಷೇಕ, ಪೂಜೆ, ಬೇವು, ಬೆಲ್ಲ ನೈವೇದ್ಯ ಮಾಡಿ ಬಳಿಕ ರಥಕ್ಕೆ ಪೂಜಾ ಮಾಡಲಾಯಿತು. ಕಾಲಕಾಲೇಶ್ವರ ಜಾತ್ರಾ ರಥೋತ್ಸವ ಪ್ರತಿ ವರ್ಷ ದವನ ಹುಣ್ಣಿಮೆಯಂದು ನಡೆಯಲಿದೆ. ಯುಗಾದಿ ದಿನದಂದು ಆಲಯದಿಂದ ಹೊರ ತೆಗೆದ ತೇರಿಗೆ ಪ್ರಥಮವಾಗಿ ಕಾಲಕಾಲೇಶ್ವರ ದೇವಸ್ಥಾನದ ಧರ್ಮದರ್ಶಿಗಳಾದ ಮಂಗಲಾದೇವಿ ದೇಶಮುಖ, ಕೀರ್ತಿಮಾಲಿನಿ ಮಾಲಿನಿ
ಘೋರ್ಪಡೆಯವರು, ಅರ್ಚಕ ಕಲ್ಲಿನಾಥ ಭಟ್‌ ಪೂಜಾರ, ರಥಕ್ಕೆ ವಿಶೇಷ ಪೂಜೆ ಸಲ್ಲಿಸಿ ಜಾತ್ರೋತ್ಸವ ಚಾಟುವಟಿಕೆಯ ವಿಧಿ ವಿಧಾನಗಳಿಗೆ ಚಾಲನೆ ನೀಡಿದರು.
ಹಿಂದೂ ಹೊಸವರ್ಷಾಚರಣೆ
ಗಜೇಂದ್ರಗಡ: ಯುಗಾದಿ ಪಾಡ್ಯವನ್ನು ಪಟ್ಟಣ ಸೇರಿದಂತೆ ಸುತ್ತಲಿನ ಜನ ಸಂಭ್ರಮ ಸಡಗರದಿಂದ ಆಚರಿಸಿದರು. ಹಬ್ಬದಾಚರಣೆಗೆ ಗೃಹಿಣಿ ಯರು ಮನೆಯನ್ನು ಸ್ವತ್ಛಗೊಳಿಸಿ ತಳಿರು ತೋರಣ ಕಟ್ಟಿದ್ದರು. ಮನೆ ಮುಂದಿನ ಅಂಗಳದಲ್ಲಿ ಮಕ್ಕಳು ಚಿತ್ತಾರದ ರಂಗೋಲಿ ಹಾಕಿ ಸಿಂಗರಿಸಿದ್ದರು. ಬೇವು, ಬೆಲ್ಲ ಬೆರಸಿದ ಪ್ರಸಾದ ಸ್ವೀಕರಿಸಿದರು. ಆಸ್ತಿಕರು ಪುಣ್ಯಾಹ ಮಂತ್ರ ಉಚ್ಚರಿಸಿ ಮಾವಿನ ಎಲೆಯಿಂದ ಕಳಸದ ನೀರನ್ನು ಎಲ್ಲ ಕಡೆ ಸಿಂಪಡಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ನೂತನ ಪಂಚಾಂಗ ಶ್ರವಣ ಮಾಡುವುದು ಚಂದ್ರಮಾನ ಯುಗಾದಿ ಹಬ್ಬ ಆಚರಣೆ ವಿಶೇಷವಾಗಿತ್ತು.
ಸಾವಿರಾರು ವರ್ಷಗಳ ಇತಿಹಾಸ ಸಾರುವ ದಕ್ಷಿಣ ಕಾಶಿ ಖ್ಯಾತಿಯ ಶ್ರೀ ಕಾಲಕಾಲೇಶ್ವರ ಐತಿಹಾಸಿಕ ದೇಗುಲ ಸನ್ನಿಧಿ  ಬೆಟ್ಟಕ್ಕೆ ತಂನ್ನಿಂತಾನೆ ಬಳಿದುಕೊಳ್ಳುವ ಸುಣ್ಣ ಸುರುಮಗಳ ಅಚ್ಚರಿ ಜೊತೆ ಉತ್ತಮ ಮಳೆ, ಬೆಳೆಯ ಮುನ್ಸೂಚನೆ ನೀಡಿದವು. ಇಲ್ಲಿ ಮಹಾ ಪಲ್ಲಕ್ಕಿ ಉತ್ಸವ ನಡೆಯಿತು.

ಟಾಪ್ ನ್ಯೂಸ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

ನಮ್ಮದು ಬಡವರಿಗೆ ಬದುಕು ಕಟ್ಟಿ ಕೊಡುವ ಪ್ರಣಾಳಿಕೆ: ಬಸವರಾಜ ಬೊಮ್ಮಾಯಿ

Gadag; ನಮ್ಮದು ಬಡವರಿಗೆ ಬದುಕು ಕಟ್ಟಿ ಕೊಡುವ ಪ್ರಣಾಳಿಕೆ: ಬಸವರಾಜ ಬೊಮ್ಮಾಯಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

6-jp-hegde

Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

5-karkala

Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್‌; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.