ವಿಶ್ವನಾಥ್ ಅವರಿಗೆ ಬಿಜೆಪಿಯಲ್ಲಿ ಸೂಕ್ತ ಸ್ಥಾನ ಸಿಗಲಿದೆ : ಎಸ್. ಟಿ.ಸೋಮಶೇಖರ್
Team Udayavani, Jun 20, 2020, 2:31 PM IST
ಗದಗ: ಮಾಜಿ ಶಾಸಕ ಎಚ್. ವಿಶ್ವನಾಥ್ ಅವರಿಗೆ ಬಿಜೆಪಿಯಲ್ಲಿ ಸೂಕ್ತವಾದ ಸ್ಥಾನ ಸಿಗಲಿದೆ ಅವರು ಇಂದಿಗೂ ಅನಾಥರಲ್ಲ ಬಿಜೆಪಿ ಅವರ ಜೊತೆಗೆ ಇದೆ ಎಂದು ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.
ಶಾಸಕ ಸ್ಥಾನಗಳಿಲ್ಲದೆ ವಿಶ್ವನಾಥ್ ಅನಾಥರಾಗಿದ್ದಾರೆ ಎಂಬ ಮಾತಿಗೆ ಸ್ಪಷ್ಟನೆ ನೀಡಿದ ಸಚಿವರು ವಿಶ್ವನಾಥ್ ಅನಾಥರು ಅಂತ ಯಾರು ಹೇಳಿದ್ದು ಅವರು ನಮ್ಮ ಜೊತೆಗೆ ಇದ್ದಾರೆ ಬಿಜೆಪಿ ಅವರೊಂದಿಗೆ ಇದೆ ಎಂದು ಸ್ಪಷ್ಟನೆ ನೀಡಿದರು.
ಈಗಾಗಲೇ ಎಂಟಿಬಿ ನಾಗರಾಜು ಹಾಗೂ ಶಂಕರ್ ಅವರಿಗೆ ಅವಕಾಶ ಸಿಕ್ಕಿದ್ದು ಮುಂದಿನ ತಿಂಗಳಲ್ಲಿ ಮುನಿರತ್ನ ಹಾಗೂ ಪ್ರತಾಪ್ ಗೌಡ ಪಾಟೀಲರಿಗೆ ಚುನಾವಣೆ ನಿಗದಿಯಾಗಿದೆ, ಹಾಗಾಗಿ ಪ್ರತಿಯೊಬರಿಗೂ ಬಿಜೆಪಿಯಲ್ಲಿ ಅವಕಾಶ ಇದೆ ಮುಂದಿನ ದಿನಗಳಲ್ಲಿ ವಿಶ್ವನಾಥ್ ಅವರಿಗೂ ಅವಕಾಶ ಸಿಗಲಿದೆ, ಈ ಕುರಿತಾಗಿ ಮುಖ್ಯಮಂತ್ರಿ ಬಿ.ಎಸ್ . ಯಡಿಯೂರಪ್ಪ ಭರವಸೆ ನೀಡಿದ್ದಾರೆ ವಿಶ್ವನಾಥ್ ಕೂಡ ಒಪ್ಪಿಗೆ ಸೂಚಿಸಿದ್ದಾರೆ ಎಂದರು.