ನೆಲದ ಮೇಲೆ ಚಿಕಿತ್ಸೆ ನೀಡದರೆ ಕಠಿಣ ಕ್ರಮ: ಶ್ರೀರಾಮುಲು
Team Udayavani, Dec 4, 2019, 9:13 PM IST
ಗದಗ: ನೆಲದ ಮೇಲೆ ರೋಗಿಗಳಿಗೆ ಚಿಕಿತ್ಸೆ ನೀಡದಂತೆ ರಾಜ್ಯದ ಎಲ್ಲ ಡಿಎಚ್ಒಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದೇನೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ತಿಳಿಸಿದರು.
ಸರ್ಕಾರಿ ಆಸ್ಪತ್ರೆಯಲ್ಲಿ ನೆಲದ ಮೇಲೆ ರೋಗಿಗಳಿಗೆ ಚಿಕಿತ್ಸೆ ನೀಡಿರುವ ವಿಚಾರವಾಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಇಂಥ ವ್ಯವಸ್ಥೆಯಿದ್ದು, ಸುಧಾರಣೆ ಮಾಡಬೇಕಿದೆ. ಈಗಾಗಲೇ ರಾಜ್ಯದ ಎಲ್ಲ ಡಿಎಚ್ಒಗಳಿಗೆ ನೆಲದ ಮೇಲೆ ರೋಗಿಗಳಿಗೆ ಚಿಕಿತ್ಸೆ ನೀಡದಂತೆ ಎಚ್ಚರಿಕೆ ನೀಡಲಾಗಿದೆ. ವೈದ್ಯರ ಕೊರತೆಯಿಂದ ಇಂತಹ ಘಟನೆಗಳು ನಡೆಯುತ್ತಿದ್ದು, ಎರಡು ಸಾವಿರ ವೈದ್ಯರ ನೇರ ನೇಮಕಾತಿ ಪ್ರಕ್ರಿಯೆ ನಡೆದಿದೆ. ಜೊತೆಗೆ ನರ್ಸ್ ಹಾಗೂ ಸ್ಕಾÂನಿಂಗ್, ಎಕ್ಸ್ ರೇ ಟೆಕ್ನಿಷಿಯನ್ ನೇಮಕ ಮಾಡಿಕೊಳ್ಳಲಾಗುತ್ತಿದೆ. ಇಂಗ್ಲಿಷ್ ಔಷಧಿ ಬಳಕೆ ಮಾಡಲು ಅನುಮತಿ ನೀಡುವಂತೆ ಆಯುರ್ವೆàದ ವೈದ್ಯರು ಮನವಿ ಮಾಡಿದ್ದಾರೆ. ಈ ಬಗ್ಗೆ ಹಿಂದಿನ ಆರೋಗ್ಯ ಸಚಿವ ರಮೇಶಕುಮಾರ ಅವರು ಜಿಒ(ಗೆಜೆಟ್ ನೋಟಿಪಿಕೇಷನ್) ಮಾಡಿದ್ದಾರೆ. ಈ ವಿಚಾರ ವಿಧಾನಸೌಧದಲ್ಲಿ ಚರ್ಚೆ ಆಗಿ ಬಿಲ್ ಪಾಸ್ ಆಗಬೇಕು. ನಂತರ ಅನುಕೂಲ ಆಗುತ್ತದೆ ಎಂದರು.