ತಾಪಂಗೆ ಅನುದಾನ ನೀಡಿ, ಬಲವರ್ಧನೆ ಮಾಡಿ


Team Udayavani, Jan 21, 2021, 3:49 PM IST

thluk-panchayath

ಗದಗ: ಗ್ರಾಮೀಣಾಭಿವೃದ್ಧಿ ಮತ್ತು ಸ್ಥಳೀಯ ಮಟ್ಟದಲ್ಲಿ ಅಧಿಕಾರ ವಿಕೇಂದ್ರೀಕರಣದ ಭಾಗವಾಗಿ ಸ್ಥಾಪನೆಗೊಂಡ ತಾಪಂ ವ್ಯವಸ್ಥೆ ಪ್ರಮುಖ ಎರಡು ಕಾರಣಗಳಿಂದಾಗಿ ಅವಸಾನದತ್ತ ಜಾರುತ್ತಿದೆ. ಅದರೊಂದಿಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ತಾಲೂಕು ಪಂಚಾಯತ್‌ ಗಳನ್ನು ರದ್ದುಗೊಳಿಸಲಾಗುವುದು ಎಂಬ ಹೇಳಿಕೆಯಿಂದಾಗಿ ಜಿಲ್ಲೆಯಲ್ಲೂ ಈ ಬಗ್ಗೆ ಪರ-ವಿರೋಧ ಚರ್ಚೆ ಶುರುವಾಗಿದೆ.

ಅಧಿಕಾರ ವಿಕೇಂದ್ರೀಕರಣಕ್ಕಾಗಿ ತಾ.ಪಂ. ವ್ಯವಸ್ಥೆ ಬಲಪಡಿಸಬೇಕು, ಇಲ್ಲವೇ ಬರ್ಕಾಸ್ತುಗೊಳಿಸುವುದೇ ಸೂಕ್ತ ಎಂಬ ಅಭಿಪ್ರಾಯವೂ ಕೇಳಿ ಬರುತ್ತಿದೆ. ಹಿಂದೆ ಪ್ರಧಾನಿಯಾಗಿದ್ದ ದಿ| ರಾಜೀವಗಾಂಧಿ ಅವರು ಸಂವಿಧಾನಕ್ಕೆ 73ನೇ ತಿದ್ದುಪಡಿ ತರುವ ಮೂಲಕ ಮೂರು ಹಂತದ ಪಂಚಾಯತ್‌ ವ್ಯವಸ್ಥೆ ಬಲಪಡಿಸಿದರು. ಗ್ರಾಪಂ, ತಾಪಂ ಹಾಗೂ ಜಿಪಂಗಳಿಗೆ ನೇರವಾಗಿ ಜನಪ್ರತಿನಿಧಿಗಳು ಆಯ್ಕೆಯಾಗುವಂತೆ ಮಾಡಿದರು. ಅದಕ್ಕೂ ಮುನ್ನ ಗ್ರಾ.ಪಂ. ಅಧ್ಯಕ್ಷರೇ ತಾ.ಪಂ. ಅಧ್ಯಕ್ಷರಾಗುತ್ತಿದ್ದರು. ಸ್ಥಳೀಯ ಶಾಸಕರು ಇದಕ್ಕೆ ಅಧ್ಯಕ್ಷರಾಗಿರುತ್ತಿದ್ದರು. ಆದರೆ, 73ನೇ ತಿದ್ದುಪಡಿ ಮೂಲಕ ಮೂರು ಹಂತದ ಪಂಚಾಯತ್‌ ವ್ಯವಸ್ಥೆಗೆ ನೇರವಾಗಿ ಜನರಿಂದಲೇ ಸದಸ್ಯರ ಆಯ್ಕೆಗೆ ಒತ್ತು ನೀಡಿದರು.

ತಾಪಂ ಕೈತಪ್ಪಿದ ಅಧಿಕಾರ: ಕಳೆದ ಒಂದು ದಶಕದಿಂದೀಚೆಗೆ ವರ್ಷದಿಂದ ವರ್ಷಕ್ಕೆ ತಾ.ಪಂ. ಅಧಿಕಾರವನ್ನು ಒಂದೊಂದಾಗಿ ಗ್ರಾ.ಪಂ. ಹಾಗೂ ಜಿ.ಪಂ.ಗೆ ವಹಿಸಲಾಗಿದೆ. ಹಿಂದಿನ ಯುಪಿಎ ಸರಕಾರದಲ್ಲಿ ಜಾರಿಗೆ ಬಂದಿರುವ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ, ಆಶ್ರಯ ಫಲಾನುಭವಿಗಳ ಆಯ್ಕೆ, ಭೂ ರಹಿತರಿಗೆ ಸಾಗುವಳಿ ಜಮೀನು ಒದಗಿಸುವುದು, ವಸತಿ ರಹಿತರಿಗೆ ನೀವೇಶನ ಹಂಚಿಕೆ ಸೇರಿದಂತೆ ಇನ್ನಿತರೆ ಯೋಜನೆಗಳ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಗಳೆಲ್ಲವೂ ತಾಪಂಗಳಿಂದ ಗ್ರಾ.ಪಂ. ಹಾಗೂ ಜಿ.ಪಂ. ವ್ಯಾಪ್ತಿಗೆ ಜಾರಿದೆ. ಹೀಗಾಗಿ ತಾ.ಪಂ. ಚುನಾಯಿತ ಮಂಡಳಿ ಯೋಜನೆಗಳಿಗೆ ಅನುಮೋದನೆ ನೀಡಲು ಸೀಮಿತವಾಗಿದೆ.

ಅಲ್ಲದೇ, ಕಂದಾಯ ಮತ್ತು ಪೊಲೀಸ್‌ ಇಲಾಖೆ ಹೊರತಾಗಿ ಶಿಕ್ಷಣ, ಆರೋಗ್ಯ, ಲೋಕೋಪಯೋಗಿ, ಸಮಾಜ ಕಲ್ಯಾಣ, ಕೃಷಿ, ತೋಟಗಾರಿಕೆ, ಹೆಸ್ಕಾಂ ಸೇರಿದಂತೆ ಸುಮಾರು 23 ಇಲಾಖೆಗಳು ತಾ.ಪಂ. ವ್ಯಾಪ್ತಿಗೆ ಬರುತ್ತವೆ. ಆದರೆ, ಆಯಾ ಇಲಾಖೆಗಳ ಯೋಜನೆಗಳ ಅನುಷ್ಠಾನದ ಮೇಲ್ವಿಚಾರಣೆಯನ್ನಷ್ಟೇ ನಡೆಸಬಹುದು. ಲೋಪದೋಷಗಳು ಕಂಡುಬಂದಲ್ಲಿ ಅವರ ವಿರುದ್ಧ ಕ್ರಮಕ್ಕೆ ಮಾಡಿದ ಶಿಫಾರಸು ಪತ್ರಗಳನ್ನು ಆಯಾ ಇಲಾಖೆ ಉನ್ನತಾಧಿಕಾರಿಗಳು ಕೆಲವೊಮ್ಮೆ ಗಮನಿಸುವುದೂ ಇಲ್ಲ. ಹೀಗಾಗಿ ಕೆಲ ಇಲಾಖೆಗಳ ಮೇಲೆ ತಾ.ಪಂ. ಹಿಡಿತ ಕಳೆದುಕೊಂಡಿದೆ. ಅನಾರೋಗ್ಯ, ಇತರೆ ಜಿಲ್ಲಾಧಿಕಾರಿಗಳ ಸಭೆ, ಕಾರ್ಯನಿಮಿತ್ತ ಪ್ರವಾಸ ನೆಪ ಹೇಳಿ ಕೆಲ ಅಧಿಕಾರಿಗಳು ತಾ.ಪಂ. ಸಾಮಾನ್ಯ ಸಭೆಗೂ ಹಾಜರಾಗುವುದಿಲ್ಲ ಎಂಬುದು ಮುಂಡರಗಿ ತಾ.ಪಂ. ಅಧ್ಯಕ್ಷೆ ರೇಣುಕಾ ಗೋಣೆಬಸಪ್ಪ ಕೊರ್ಲಹಳ್ಳಿ ಅವರ ಬೇಸರದ ನುಡಿ.

ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ: ತಾಪಂಗಳಿಗೆ ಸರಕಾರ ನೀಡುವ ಅನುದಾನ ಆನೆ ಹೊಟ್ಟೆಸಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ಪ್ರಸಕ್ತ ಸಾಲಿನಲ್ಲಿ 15ನೇ ಹಣಕಾಸು ಯೋಜನೆಯಡಿ ಕೋಟಿ ರೂ. ಅನುದಾನ ಲಭಿಸಿದೆ. ಇನ್ನುಳಿದ ವರ್ಷಗಳಲ್ಲಿ ಸಿಕ್ಕಿದ್ದು ಕೇವಲ 10-15 ಲಕ್ಷ ರೂ. ಮಾತ್ರ. ಆದರೆ, ಪ್ರತಿ ತಾ.ಪಂ. ಕ್ಷೇತ್ರದಲ್ಲಿ 6-7 ಹಳ್ಳಿಗಳಿದ್ದು, ಅಲ್ಲಿನ ಜನರು ಕೇಳುವ ಸಣ್ಣಪುಟ್ಟ ಕೆಲಸಗಳನ್ನೂ ಮಾಡಲಾಗದ ದುಸ್ಥಿತಿ ಎದುರಿಸುವಂತಾಗಿದೆ. ಜಿಲ್ಲೆಯ ಹೊಳೆಆಲೂರು ತಾ.ಪಂ. ಕ್ಷೇತ್ರದಲ್ಲಿ 10 ಹಳ್ಳಿಗಳಿದ್ದು, 6-7 ಲಕ್ಷ ರೂ. ಅನುದಾನ ಯಾವುದಕ್ಕೆ ಸಾಲುತ್ತದೆ. ಈ ಬಾರಿ ರೋಣ ತಾ.ಪಂ.ಗೆ ಬರಬೇಕಿದ್ದ ಸ್ಟಾÂಂಪ್‌ ಡ್ನೂಟಿ ಸೆಸ್‌ ಮರಳಿ ಹೋಗಿದೆ. ಆರ್ಥಿಕ ಪರಿಸ್ಥಿತಿ ಹೀಗಾದರೆ ಕ್ಷೇತ್ರದ ಮತದಾರರ ಆಶೋತ್ತರ ಈಡೇರಿಸುವುದು ಹೇಗೆ ಎಂಬುದು ರೋಣ ತಾ.ಪಂ. ಸದಸ್ಯರ ಪ್ರಶ್ನೆ. ಇನ್ನುಳಿದಂತೆ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ಹಳ್ಳಕ್ಕೆ ಪರಿಸಿ ಹಾಕಿಸುವುದು, ಗ್ರಾಮದಲ್ಲಿ ಸಣ್ಣ ಮೊತ್ತದಲ್ಲಿ ಚರಂಡಿ, ರಸ್ತೆ ನಿರ್ಮಾಣ, ಕುಡಿಯುವ ನೀರಿನ ಪೈಪ್‌ಲೈನ್‌ ಅಳವಡಿಕೆ, ಶಾಲಾ ಒಂದೆರಡು ಕೊಠಡಿಗಳ ದುರಸ್ತಿ ಹಾಗೂ ನರಗುಂದ ತಾ.ಪಂ.ನಿಂದ ವಿವಿಧ ಗ್ರಾಮಗಳಲ್ಲಿ ಹಳೇ ಬಸ್‌ ನಿಲ್ದಾಣಗಳಿಗೆ ಹೈಟೆಕ್‌ ಆಗಿ ನವೀಕರಿಸಿದ್ದೇ ಪ್ರಮುಖ ಸಾಧನೆಗಳಾಗಿವೆ.

ಆಗಬೇಕಿದೆ ತಾಪಂಗಳ ಬಲವರ್ದನೆ: ಪ್ರತಿ ತಾಪಂಗಳಿಗೆ ಹೆಚ್ಚಿನ ಅನುದಾನ ಮತ್ತು ಅಧಿಕಾರವನ್ನು ನೀಡಬೇಕು. ತಾ.ಪಂ. ಮೂಲಕ ನರೇಗಾ, ವಸತಿ ಯೋಜನೆ ಅನುಷ್ಠಾನಕ್ಕೆ ತರಬೇಕು. ತಾಪಂಗೆ ಆದಾಯ ತರುವ ಮಾರ್ಗಗಳನ್ನು ಒದಗಿಸಬೇಕು. ಪ್ರತ್ಯೇಕವಾಗಿ ಬಜೆಟ್‌ ಮಂಡಿಸುವ ಶಕ್ತಿ ತುಂಬಬೇಕು. ಅದಕ್ಕಾಗಿ ವಿವಿಧ ತೆರಿಗೆಗಳನ್ನು ವಿಧಿಸುವ ಅಧಿಕಾರ ನೀಡಬೇಕು. ಗ್ರಾಮೀಣ ಭಾಗದಲ್ಲಿ ದೊಡ್ಡಮಟ್ಟದ ಯೋಜನೆ ಅನುಷ್ಠಾವನ್ನು ತಾ.ಪಂ.ಗೆ ವಹಿಸಬೇಕು ಎಂಬದು ತಾ.ಪಂ. ಅಧ್ಯಕ್ಷರ ಅಭಿಪ್ರಾಯ.

ಇದನ್ನೂ ಓದಿ:ನೀರು ನಿರ್ವಹಣೆಯಲ್ಲಿ ಸಹಭಾಗಿತ್ವ ಅಗತ್ಯ; ಶರಣಪ್ಪ ತಳವಾರ

ಗ್ರಾಮೀಣ ಭಾಗಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಲು ಯೋಜನೆಗಳನ್ನು ರೂಪಿಸುವುದೇ ಸ್ಥಳೀಯ ಶಾಸಕರು ಮತ್ತು ತಾ.ಪಂ. ಹೊಣೆಗಾರಿಕೆಯಾಗಿರುತ್ತದೆ. ಗ್ರಾಮೀಣ ಭಾಗದ ಅಭಿವೃದ್ಧಿಯಲ್ಲಿ ತಾ.ಪಂ. ಪಾತ್ರ ಮಹತ್ವದ್ದಾಗಿದೆ. ಅದನ್ನು ಸರಿಯಾದ ಮಾರ್ಗದಲ್ಲಿ ಬಳಸಿಕೊಳ್ಳಬೇಕಿದೆ. ಅಲ್ಲದೇ, ಪಂಚಾಯತ್‌ ವ್ಯವಸ್ಥೆಯಲ್ಲಿ ತಾ.ಪಂ. ಕೈಬಿಡುವುದು ಹೇಳಿದಷ್ಟು ಸುಲಭವೂ ಅಲ್ಲ. ಪಾರ್ಲಿಮೆಂಟ್‌ನಲ್ಲಿ 2/3 ನಷ್ಟು ಬಹುಮತ ಬೇಕಾಗುತ್ತದೆ. ಸದ್ಯಕ್ಕೆ ಅದು ಸಾಧ್ಯವೂ ಇಲ್ಲ. ಅದರ ಬದಲಾಗಿ ತಾ.ಪಂ.ಬಲವರ್ದನೆಗೆ ಒತ್ತು ನೀಡಿ, ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳಿಸಬೇಕು.

 ಡಿ.ಆರ್‌. ಪಾಟೀಲ, ಕರ್ನಾಟಕ ಪಂಚಾಯತ್‌ ಪರಿಷತ್‌ ಉಪಾಧ್ಯಕ್ಷ

ವೀರೇಂದ್ರ ನಾಗಲದಿನ್ನಿ

ಟಾಪ್ ನ್ಯೂಸ್

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Honeybee Attack: ಹೆಜ್ಜೇನು ದಾಳಿ: ಓರ್ವ ಮೃತ್ಯು, ಏಳು ಮಂದಿಗೆ ಗಾಯ

Honeybee Attack: ಹೆಜ್ಜೇನು ದಾಳಿ: ಓರ್ವ ಮೃತ್ಯು, ಏಳು ಮಂದಿಗೆ ಗಾಯ

ಮತ್ತೆ ಎಲ್ಲೆಡೆ ಕಾಂಗ್ರೆಸ್ ಬಾವುಟ ರಾರಾಜಿಸುವುದು ಸೂರ್ಯ ಚಂದ್ರರಷ್ಟೇ ಸತ್ಯ: ಎಚ್.ಕೆ. ಪಾಟೀಲ

ಮತ್ತೆ ಎಲ್ಲೆಡೆ ಕಾಂಗ್ರೆಸ್ ಬಾವುಟ ರಾರಾಜಿಸುವುದು ಸೂರ್ಯ ಚಂದ್ರರಷ್ಟೇ ಸತ್ಯ: ಎಚ್.ಕೆ. ಪಾಟೀಲ

ಬಸವರಾಜ ಬೊಮ್ಮಾಯಿ ಹಿಂದೆ ದೊಡ್ಡದೊಂದು ಲಗೇಜ್ ಇದೆ: ಎಚ್.ಕೆ.ಪಾಟೀಲ್

Gadag; ಬಸವರಾಜ ಬೊಮ್ಮಾಯಿ ಹಿಂದೆ ದೊಡ್ಡದೊಂದು ಲಗೇಜ್ ಇದೆ: ಎಚ್.ಕೆ.ಪಾಟೀಲ್

Gadag; ಹಾವೇರಿ ಲೋಕಸಭಾ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರಿಂದ ಟೆಂಪಲ್ ರನ್

Gadag; ಹಾವೇರಿ ಲೋಕಸಭಾ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರಿಂದ ಟೆಂಪಲ್ ರನ್

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Arrested: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Arrested: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

10

Missing: ಚುನಾವಣಾ ಕರ್ತವ್ಯದಲ್ಲಿದ್ದ ಸರಕಾರಿ ನೌಕರ ನಾಪತ್ತೆ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.