ದಲಿತರ ಮನೆಯಲ್ಲಿ ತಹಶೀಲ್ದಾರ್ ಭೋಜನ
Team Udayavani, Mar 22, 2021, 4:52 PM IST
ಮುಂಡರಗಿ: ತಾಲೂಕಿನ ಕೊರ್ಲಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದ ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ತಹಶೀಲ್ದಾರ್ ಆಶಪ್ಪ ಪೂಜಾರಿ ಹಾಗೂ ಸಿಬ್ಬಂದಿ ದಲಿತ ಕುಟುಂಬದ ಹೂವಕ್ಕ ಯಲ್ಲಪ್ಪ ಅವರ ಮನೆಯಲ್ಲಿ ಭೋಜನ ಸವಿದರು.
ಹೂವಕ್ಕ ಯಲ್ಲಪ್ಪ ಅವರ ಮನೆಯಲ್ಲಿ ತಯಾರಿಸಿದ್ದ ಅನ್ನ, ನುಗ್ಗೇಕಾಯಿ ಸಾರು, ಉಪ್ಪಿನಕಾಯಿ ನಂಚಿಕೊಂಡು ರಾತ್ರಿ ಊಟವನ್ನು ಸವಿದರು. ಗ್ರಾಪಂ ಅಧ್ಯಕ್ಷ ಮದಾರಸಾಬ ಸಿಂಗನಮಲ್ಲಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಉದಯಕುಮಾರ ಎಲಿವಾಳ, ಎಸ್.ಎಸ್ .ಬಿಚ್ಚಾಲಿ, ಮುತ್ತು ಪಾಟೀಲ ಮತ್ತಿತರರು ಸಾಥ್ ನೀಡಿದರು.
ಜಲ ಜೀವನ್ ಕಾಮಗಾರಿಗೆ ಚಾಲನೆ :ಮುಳಗುಂದ: ನಾಗಾವಿ ತಾಂಡಾದಲ್ಲಿರಾಷ್ಟ್ರೀಯ ಜಲ ಜೀವನ್ ಮಿಷನ್ಕಾಮಗಾರಿಗೆ ಶಾಸಕ ಎಚ್.ಕೆ. ಪಾಟೀಲ ಭೂಮಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದಅವರು, ಒಟ್ಟು 84 ಲಕ್ಷ ರೂ. ವೆಚ್ಚದ ಕಾಮಗಾರಿಯನ್ನುಗುಣಮಟ್ಟದಿಂದ ಶೀಘ್ರದಲ್ಲಿಯೇಪೂರ್ಣಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ತಿಳಿಸಿದರು.
ಜಿಪಂ ಮಾಜಿ ಅಧ್ಯಕ್ಷ ವಾಸಣ್ಣಕುರಡಗಿ, ಬಿ.ಆರ್.ದೇವರಡ್ಡಿ, ಗ್ರಾಪಂಉಪಾಧ್ಯಕ್ಷ ಸುರೇಶ ಪವಾರ, ಮಾಜಿಉಪಾಧ್ಯಕ್ಷ ದಯಾನಂದ ಪವಾರ, ಗೌರಿ ತೋಟದ, ಕುಮಾರ ಪವಾರ,ಯಮನಪ್ಪ ನಾಯಕ, ಮೀರವ್ವಲಮಾಣಿ, ಕುಬೇರಪ್ಪ ರಾಠೊಡ,ಮಾನಪ್ಪ ತೋಟದ,ರಾಮಪ್ಪ ಪವಾರ,ತುಕಾರಾಮ ಕಟ್ಟಿಮನಿ,ಸುಭಾಷಲಮಾಣಿ, ಈರಪ್ಪ ನಾಯಲ, ಅನಿಲ ಪವಾರ ಇತರರಿದ್ದರು.
ಗ್ರಾಪಂ ಅಧ್ಯಕ್ಷರು-ಸದಸ್ಯರಿಗೆ ಸನ್ಮಾನ :
ನರಗುಂದ: ತಾಲೂಕಿನ ಸಂಕದಾಳ ಗ್ರಾಮದಲ್ಲಿ ವೀರಭದ್ರ ಸ್ವಾಮಿ ಬ್ರಹ್ಮೋತ್ಸವ ಹಾಗೂ ರಸಮಂಜರಿಕಾರ್ಯಕ್ರಮದ ಅಂಗವಾಗಿಬೆನಕನಕೊಪ್ಪ ಮತ್ತು ಚಿಕ್ಕನರಗುಂದಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಎಲ್ಲಸದಸ್ಯರನ್ನು ಸತ್ಕರಿಸಲಾಗಿದೆ.
ಕೆಪಿಸಿಸಿ ಸಂಯೋಜಕ ಡಾ.ಸಂಗಮೇಶ ಕೊಳ್ಳಿಯವರ ಹಾಗೂ ಬಿಜೆಪಿ ಯುವ ಮುಖಂಡ ಉಮೇಶಗೌಡ ಪಾಟೀಲ ನೇತೃತ್ವದಲ್ಲಿ ಗ್ರಾಪಂ ಅಧ್ಯಕ್ಷ ಮುತ್ತು ರಾಯರಡ್ಡಿ, ಉಪಾಧ್ಯಕ್ಷೆಮಲ್ಲವ್ವ ಮರೆಣ್ಣವರ, ಸದಸ್ಯರಾದಈರವ್ವ ಮುದಿಗೌಡ್ರ, ಶಂಕ್ರವ್ವಚಲವಾದಿ, ಶೋಭಾ ಕೋನಣ್ಣವರ, ಶರಣಬಸಪ್ಪ ಹಳೇಮನಿ,ಜಡಿಯಪ್ಪಗೌಡ ಚನ್ನಪ್ಪಗೌಡ್ರ, ಶ್ರುತಿ ಬ್ಯಾಳಿ, ಬಾಪುಗೌಡ ಹಿರೇಗೌಡ್ರ,ಶಿವಯೋಗಿ ಭೂಮಣ್ಣವರ, ಪತ್ರಪ್ಪ ಭೂಮಣ್ಣವರ, ದುಂಡವ್ವಮರ್ಚಕ್ಕನವರ, ಬಸು ಭೂಮಣ್ಣವರಅವರನ್ನು ಸತ್ಕರಿಸಲಾಗಿದೆ.ಕಾರ್ಯಕ್ರಮದಲ್ಲಿ ಗ್ರಾಮದಎಲ್ಲ ಹಿರಿಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗದಗ: ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ
Gadag; ತೋಂಟದಾರ್ಯ ಮಠದ ಅದ್ದೂರಿ ಮಹಾರಥೋತ್ಸವ
MUST WATCH
ಹೊಸ ಸೇರ್ಪಡೆ
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ