ಮಠಗಳ ಅಭಿವೃದ್ಧಿಗೆ ಭಕ್ತರ ಸಹಕಾರ ಮುಖ್ಯ; ಯಚ್ಚರ ಸ್ವಾಮೀಜಿ
ಶಿರೋಳ ಯಚ್ಚರಸ್ವಾಮಿಗಳ ಗವಿಮಠ ಸುಮಾರು 300 ವರ್ಷಗಳ ಇತಿಹಾಸ ಹೊಂದಿದೆ
Team Udayavani, Feb 15, 2023, 3:06 PM IST
ನರಗುಂದ: ನಮ್ಮ ಭಾರತ ದೇಶದಲ್ಲಿ ಮಠಗಳು ಭಕ್ತರಿಂದ ನಿರ್ಮಾಣವಾಗಿವೆ. ಭಕ್ತರು ಮಠಗಳನ್ನು ಸಂದರ್ಶಿಸುವ ಮೂಲಕ ತಮ್ಮ ಹಾಗೂ ಕುಟುಂಬದಲ್ಲಿ ಒಳ್ಳೆಯ ಸಂಸ್ಕಾರ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಮಠಗಳ ಅಭಿವೃದ್ಧಿಗೆ ಭಕ್ತರ ಸಹಕಾರ ದೊಡ್ಡದು ಎಂದು ಶಿರೋಳ ಯಚ್ಚರಸ್ವಾಮಿಗಳ ಗವಿಮಠದ ಅಭಿನವ ಯಚ್ಚರ ಸ್ವಾಮೀಜಿ ಹೇಳಿದರು.
ತಾಲೂಕಿನ ಶಿರೋಳ ಯಚ್ಚರಸ್ವಾಮಿಗಳ ಗವಿಮಠದ ದಾಸೋಹ ಭವನ, ಶ್ರೀಗುರು ಕುಟೀರ, ಮಹಾದ್ವಾರ, ವಿದ್ಯಾರ್ಥಿ ವಸತಿ ನಿಲಯ ಭೂಮಿಪೂಜಾ ಕಾರ್ಯಕ್ರಮದಲ್ಲಿ ಶ್ರೀಗಳು ಮಾತನಾಡಿ, ನಮ್ಮ ಮಠವನ್ನು ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿದ್ದೇವೆ. ಇದರ ಅಭಿವೃದ್ಧಿಗೆ ಸುತ್ತಮುತ್ತಲಿನ ಭಕ್ತರ ಶ್ರಮ, ಸಹಾಯ, ಸಹಕಾರ ಮುಖ್ಯವಾಗಿದೆ ಎಂದರು.
ಶಿರೋಳ ಯಚ್ಚರಸ್ವಾಮಿಗಳ ಗವಿಮಠ ಸುಮಾರು 300 ವರ್ಷಗಳ ಇತಿಹಾಸ ಹೊಂದಿದೆ. ಶ್ರೀಗಳು ಕಿರಿಯ ವಯಸ್ಸಿನಲ್ಲಿ ಶ್ರೀಮಠದ ಅಭಿವೃದ್ಧಿ ಕೈಗೊಂಡಿದ್ದಾರೆ. ಈ ಕಾರ್ಯಕ್ಕೆ ಭಕ್ತರ ಸಹಕಾರವಿರಲಿ ಎಂದು ಯರಗಟ್ಟಿಯ ರಾಜರಾಜೇಶ್ವರಿ ಆಶ್ರಮದ ಗಣಪತಿ ಮಹಾರಾಜರು ಹೇಳಿದರು.
ಪ್ರಾಸ್ತಾವಿಕವಾಗಿ ಮಾದಾರ ಚನ್ನಯ್ಯ ಕೈಗಾರಿಕೆ ತರಬೇತಿ ಕೇಂದ್ರದ ಜೆಟಿಒ ಎಸ್.ವಿ.ಕುಪ್ಪಸ್ತ, ತಾಪಂ ಮಾಜಿ ಅಧ್ಯಕ್ಷ ಪ್ರಕಾಶಗೌಡ ತಿರಕನಗೌಡ್ರ, ಬಾಪುಗೌಡ ತಿಮ್ಮನಗೌಡ್ರ ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಮಹಾದೇವಿ ಸೊಬರದ, ಉಪಾಧ್ಯಕ್ಷ ಈಶ್ವರಗೌಡ ತಿರಕನಗೌಡ್ರ, ಡಿ.ವೈ.ಕಾಡಪ್ಪನವರ, ಲೋಕಪ್ಪ ಕರಕೀಕಟ್ಟಿ, ಶಿವನಗೌಡ ಪಾಟೀಲ, ಎಸ್.ವೈ.ಮುಲ್ಕಿಪಾಟೀಲ, ಬಸಣ್ಣ ಕುಪ್ಪಸ್ತ, ರವೀಂದ್ರ ದೊಡಮನಿ, ಈಶಪ್ಪ ಪತ್ತಾರ, ಗುರುಶಾಂತಯ್ಯ ವಸ್ತದ, ನಜೀರಸಾಬ್ ಚಳ್ಳಮರದ, ಪ್ರವಿಣ ಸಂಗಳಶೆಟ್ಟರ, ಬಾಲಪ್ಪ ಮೂಲಿಮನಿ, ಬ್ರಹ್ಮಾನಂದ ಕಿತ್ತಲಿ, ಸದಾಶಿವಪ್ಪ ಮೆಣಸಗಿ, ಮುದಿವೀರಪ್ಪ ಕರಕಿಕಟ್ಟಿ ಹಾಗೂ ಯುವ ಸೈನಿಕರ ಗೆಳೆಯರ ಬಳಗ, ಗ್ರಾಮಸ್ಥರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Gadag; ನಮ್ಮದು ಬಡವರಿಗೆ ಬದುಕು ಕಟ್ಟಿ ಕೊಡುವ ಪ್ರಣಾಳಿಕೆ: ಬಸವರಾಜ ಬೊಮ್ಮಾಯಿ
Panchmasali ಸಮಾಜಕ್ಕೆ ಬಿಜೆಪಿಯಿಂದ ಅನ್ಯಾಯ: ವಚನಾನಂದ ಸ್ವಾಮೀಜಿ
MUST WATCH
ಹೊಸ ಸೇರ್ಪಡೆ
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್
CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ
Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು
Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್
ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ