ಫಲಾನುಭವಿಗಳಿಂದ ಹೆಸ್ಕಾಂ ಕಚೇರಿಗೆ ಮುತ್ತಿಗೆ
Team Udayavani, Jul 2, 2019, 8:48 AM IST
ಶಿರಹಟ್ಟಿ: ವಿದ್ಯುತ್ ಯೋಜನೆ ಜಾರಿಗೆ ಹೆಸ್ಕಾಂ ನಿರ್ಲಕ್ಷ್ಯ ಖಂಡಿಸಿ ಫಲಾನುಭವಿಗಳು ಪಟ್ಟಣದ ಹೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಶಿರಹಟ್ಟಿ: ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಸೌಭಾಗ್ಯ ಯೋಜನೆಯಾದ ಬಿಜಲಿ ಹರ್ ಘರ್ ಯೋಜನೆ ಜಾರಿಗೆ ತಂದಿದ್ದರೂ ಪಟ್ಟಣದಲ್ಲಿ ಅನುಷ್ಠಾನಗೊಳಿಸುವಲ್ಲಿ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಪಪಂ ಸದಸ್ಯ ಫಕ್ಕಿರೇಶ ರಟ್ಟಿಹಳ್ಳಿ ನೇತೃತ್ವದಲ್ಲಿ ಫಲಾನುಭವಿಗಳು ಪಟ್ಟಣದ ಹೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಭಾರತೀಯ ಕಿಸಾನ್ ಸಂಘದ ಪ್ರಾಂತ ಕಾರ್ಯಕಾರಣಿ ಸದಸ್ಯ ವೀರಣ್ಣ ಮಜ್ಜಗಿ, ಸಹಜ ಬಿಜಲಿ ಹರ್ ಘರ್ ಎಂಬ ಯೋಜನೆ ಸಮೃದ್ಧಿಯಾಗಲು ಅಪಾರ ಹಣ ತೆಗೆದಿರಿಸಲಾಗಿತ್ತು. ಈ ಯೋಜನೆ ಅನುಷ್ಠಾನಗೊಳಿಸುವಲ್ಲಿ ಹೆಸ್ಕಾಂಗೆ ಇಚ್ಛಾಶಕ್ತಿಯಿಲ್ಲ. ಬರಿ ಹೆಸ್ಕಾಂ ಅಧಿಕಾರಿಗಳು ಲಾಭದಾಯಕವಾದ ವ್ಯವಹಾರದಲ್ಲಿ ತೊಡಗಲು ಮುಂದಾಗುತ್ತಾರೆ ಎಂದು ದೂರಿದರು.
ಜೂ. 30ರೊಳಗೆ ಬೇಡಿಕೆ ಈಡೇರಿಸಬೇಕೆಂದು ತಿಳಿಸಲಾಗಿತ್ತು. ಇಲ್ಲದಿದ್ದರೆ ಜು. 1ಕ್ಕೆ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಹೀಗಾಗಿ ಮುತ್ತಿಗೆ ಹಾಕಿ ಪ್ರತಿಭಟಿಸುತ್ತಿದ್ದೇವೆ ಎಂದರು.
ಈ ವೇಳೆ ಹೆಸ್ಕಾಂ ಅಸಿಸ್ಟಂಟ್ ಇಂಜಿನಿಯರ್ ಕೃಷ್ಣಪ್ಪ ಹೆಂಡಗರ್ ಧರಣಿ ನಿರತರೊಂದಿಗೆ ಮಾತನಾಡಿ, ಈ ಯೋಜನೆ ಕುರಿತು ಈವರೆಗೆ ಸ್ಥಳೀಯವಾಗಿ ತಾನೇ ಫಲಾನುಭವಿಗಳ ಮನೆ ಮನೆಗೆ ಭೇಟಿ ನೀಡಿದಾಗ ಅರ್ಜಿಯಲ್ಲಿ ತಿಳಿಸಿರುವ ಫಲಾನುಭವಿಗಳ ವಿಳಾಸ ಹಾಗೂ ವಿವರಗಳಲ್ಲಿ ಸ್ವಲ್ಪ ಗೊಂದಲವಾದ ಕಾರಣ ವಿಳಂಬವಾಗಿದೆ. ಬರುವ ಆ. 10ರೊಳಗೆ ಎಲ್ಲ ಫಲಾನುಭವಿಗಳ ಮನೆ ಮನೆಗೆ ಈ ಯೋಜನೆ ತಲುಪಿಸಿ ದೀಪ ಬೆಳಗುವಂತೆ ಕ್ರಮ ವಹಿಸುತ್ತೇನೆ ಎಂದು ಭರವಸೆ ನೀಡಿದರು.
ಹೆಸ್ಕಾಂ ಅಸಿಸ್ಟಂಟ್ ಇಂಜಿನಿಯರ್ ಕೃಷ್ಣಪ್ಪ ಹೆಂಡಗರ್ ಅವರಿಂದ ಲಿಖೀತ ರೂಪದ ಭರವಸೆ ಪಡೆದು ಧರಣಿ ಹಿಂಪಡೆದರು. ಪಪಂ ಸದಸ್ಯ ಮಹದೇವ ಗಾಣಿಗೇರ, ಡೊಂಕಬಳ್ಳಿ ಪರಶುರಾಮ ಡೊಂಕಬಳ್ಳಿ,ಪ್ರಕಾಶ ಬಾರಬಾರ, ಗೌರವ್ವ ಕಪ್ಪತ್ತನವರ, ನೀಲಮ್ಮ ಲಕ್ಕುಂಡಿಮಠ, ಪಾರವ್ವ ಇಟ್ಟಪ್ಪನವರ, ದೇವಕ್ಕ ಇಟ್ಟಪ್ಪನವರ, ನೀಲವ್ವ ಕುಳಗೇರಿ, ರೇಣವ್ವ ಕುರಿ, ಫಕ್ಕೀರವ್ವ ದಂಡಿನ, ಕರಿಯಪ್ಪ ಬಾಳೂಟಗಿ, ಕೆ.ಬಿ. ಬಳೂಟಗಿ, ಬಸವರಾಜ ಬಕ್ಸದ, ಬಸಪ್ಪ ಬಕ್ಸದ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು
Honeybee Attack: ಹೆಜ್ಜೇನು ದಾಳಿ: ಓರ್ವ ಮೃತ್ಯು, ಏಳು ಮಂದಿಗೆ ಗಾಯ
ಮತ್ತೆ ಎಲ್ಲೆಡೆ ಕಾಂಗ್ರೆಸ್ ಬಾವುಟ ರಾರಾಜಿಸುವುದು ಸೂರ್ಯ ಚಂದ್ರರಷ್ಟೇ ಸತ್ಯ: ಎಚ್.ಕೆ. ಪಾಟೀಲ
Gadag; ಬಸವರಾಜ ಬೊಮ್ಮಾಯಿ ಹಿಂದೆ ದೊಡ್ಡದೊಂದು ಲಗೇಜ್ ಇದೆ: ಎಚ್.ಕೆ.ಪಾಟೀಲ್
Gadag; ಹಾವೇರಿ ಲೋಕಸಭಾ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರಿಂದ ಟೆಂಪಲ್ ರನ್
MUST WATCH
ಹೊಸ ಸೇರ್ಪಡೆ
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್
Hassan Lok sabha Constituency: ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Bike thief: ಬಜಪೆ ಪೊಲೀಸರಿಂದ ಅಂತರ್ ಜಿಲ್ಲಾ ಬೈಕ್ ಕಳ್ಳನ ಬಂಧನ