ನರಗುಂದ-ಗದಗ ಒಳರಸ್ತೆ ಸಂಚಾರ ಸ್ಥಗಿತ
Team Udayavani, Aug 16, 2019, 12:21 PM IST
ನರಗುಂದ: 2009ರಲ್ಲಿ ಉಕ್ಕಿ ಹರಿದ ಬೆಣ್ಣೆಹಳ್ಳದ ಪ್ರವಾಹಕ್ಕೆ ಕೊಚ್ಚಿಹೋಗಿ ಬಳಿಕ ಪುನರ್ ನಿರ್ಮಾಣಗೊಂಡಿದ್ದ ನರಗುಂದ-ಗದಗ ಒಳರಸ್ತೆಯಲ್ಲಿ ತಾಲೂಕಿನ ಕುರ್ಲಗೇರಿ-ತಡಹಾಳ ಮದ್ಯದ ಸೇತುವೆ ತಳಪಾಯ ಸಮೇತ ಕಿತ್ತು ಹೋಗಿದ್ದು, ಇದರ ಪರಿಣಾಮ ನರಗುಂದ-ಗದಗ ಒಳರಸ್ತೆ ಸಂಚಾರ ಸ್ಥಗಿತಗೊಂಡಿದೆ.
ಪುನರ್ ನಿರ್ಮಾಣಗೊಂಡಿದ್ದ ಸೇತುವೆ ಈಗ ಮತ್ತೇ ಕಿತ್ತು ಹೋಗಿ ಪಾದಚಾರಿಗಳು ಕಾಲ್ನಡಿಗೆಯಲ್ಲೂ ತೆರಳಲಾಗದ ರೀತಿಯಲ್ಲಿ ಸೇತುವೆ ಪ್ರವಾಹದ ಹೊಡೆತಕ್ಕೆ ಕೊಚ್ಚಿ ಹೋಗಿದೆ. ಇದನ್ನು ಸಂಪರ್ಕಿಸುವ ಅರ್ಧ ಕಿಮೀನಷ್ಟು ರಸ್ತೆ ಸಹಿತ ಸಂಪೂರ್ಣ ತಳ ಸಹಿತವಾಗಿ ಕಿತ್ತು ಕೊಚ್ಚಿ ಹೋಗಿ ತನ್ನ ಅಸ್ತಿತ್ವ ಕಳೆದುಕೊಂಡಿದೆ.
ನರಗುಂದ-ಗದಗ ಸಂಪರ್ಕ ಮಾಡುವ ಈ ರಸ್ತೆಯನ್ನೇ ಅವಲಂಬಿಸಿದ್ದ ನಾಯಕನೂರ, ತಡಹಾಳ ಕೊಂಗವಾಡ, ಕಡದಳ್ಳಿ, ನಾಗನೂರ, ಗುಡಿಸಾಗರ, ಶಲವಡಿ ಗ್ರಾಮಗಳಿಗೆ ತೆರಳಬೇಕಾದರೆ ಸುಮಾರು 20 ಕಿಮೀ ಹೆಚ್ಚು ಅಂತರ ಕ್ರಮಿಸಬೇಕಾದ ಅನಿವಾರ್ಯತೆ ಬೆಣ್ಣೆಹಳ್ಳದ ಪ್ರವಾಹ ಸೃಷ್ಟಿಸಿದೆ.
ಬೆಣ್ಣೆಹಳ್ಳದ ನೀರು ಬಳಕೆ ಮಾಡಿ ಬನಹಟ್ಟಿ, ಕುರ್ಲಗೇರಿ, ಸುರಕೋಡ, ಯಾವಗಲ್, ಹದಲಿ, ಖಾನಾಪುರ, ಗಂಗಾಪುರ ರಡ್ಡೇರನಾಗನೂರ ಗ್ರಾಮ ವ್ಯಾಪ್ತಿಗಳಲ್ಲಿ ಬೆಳೆದಿದ್ದ ಹತ್ತಿ ಗೋವಿನಜೋಳ, ಶೇಂಗಾ, ಹೆಸರು, ಸೋಯಾಬಿನ್, ಸೂರ್ಯಕಾಂತಿ ಪೈರುಗಳು ನೆಲಕಚ್ಚಿ ಕೋಟ್ಯಂತರ ರೂ. ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ನರಗುಂದ: ಬೆಣ್ಣೆಹಳ್ಳದ ಪ್ರವಾಹದ ರಭಸಕ್ಕೆ ಕೊಚ್ಚಿ ಹೋದ ಕುರ್ಲಗೇರಿ- ತಡಹಾಳ ಸೇತುವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಗದಗ: ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ