ಮಹದಾಯಿ ಹೋರಾಟಗಾರರಿಗೆ ಇನ್ನು ಸಮವಸ್ತ್ರ
Team Udayavani, Jul 15, 2019, 2:36 PM IST
ನರಗುಂದ: ಮಹದಾಯಿ ಹೋರಾಟದಲ್ಲಿ ಪಾಲ್ಗೊಳ್ಳುವ ಮಹಿಳಾ ಹೋರಾಟಗಾರರಿಗೆ ಹೋರಾಟದ ಚಿಹ್ನೆಯುಳ್ಳ ಸೀರೆಗಳನ್ನು ರೈತ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಸ್ವಾಮೀಜಿ ವಿತರಿಸಿದರು.
ನರಗುಂದ: ಜೀವ ಜಲಕ್ಕಾಗಿ ಸುದೀರ್ಘ 4 ವರ್ಷಗಳ ಹೋರಾಟ ಕಂಡಿರುವ ಮಹದಾಯಿ ಹೋರಾಟಗಾರರು ಇನ್ನು ಎಲ್ಲಿಯೇ ಹೋರಾಟ ಮಾಡಿದರೂ ಹೊಸದೊಂದು ಸಂಚಲನ ಮೂಡಿಸಲಿದ್ದಾರೆ. ಕಾರಣ ಎಲ್ಲ ಮಹದಾಯಿ ಹೋರಾಟಗಾರರಿಗೆ ಸಮವಸ್ತ್ರ ವ್ಯವಸ್ಥೆ ಮಾಡಲಾಗಿದೆ.
ಮಹದಾಯಿ ಹೋರಾಟದಲ್ಲಿ ಪಾಲ್ಗೊಳ್ಳುವ ಎಲ್ಲ ಹೋರಾಟಗಾರರಲ್ಲಿ ಮಹಿಳೆಯರು ಹೋರಾಟದ ಚಿಹ್ನೆಯಿರುವ ಸೀರೆಯುಟ್ಟು, ಪುರುಷರು ಹೋರಾಟ ಚಿಹ್ನೆಯಿರುವ ಹಸಿರು ಟವೆಲ್ ಧರಿಸಲಿದ್ದಾರೆ. ಶನಿವಾರ ಮಹದಾಯಿ ಮತ್ತು ಕಳಸಾ-ಬಂಡೂರಿ ಹೋರಾಟದ 1459ನೇ ದಿನ ನಿರಂತರ ಸತ್ಯಾಗ್ರಹ ವೇದಿಕೆಯಲ್ಲಿ ನೂತನ ಸಮವಸ್ತ್ರಗಳನ್ನು ರೈತ ಸೇನಾ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಹೋರಾಟಗಾರರಿಗೆ ವಿತರಿಸಿದ್ದು ಗಮನ ಸೆಳೆಯಿತು. ಮಹದಾಯಿ ಹೋರಾಟದ ರೂವಾರಿ ರೈತ ಸೇನಾ ಕರ್ನಾಟಕ ಸಂಘಟನೆ ಚಿಹ್ನೆಯಿರುವ ಸೀರೆಗಳನ್ನು ಸೂರತ್ನಲ್ಲಿ ತಯಾರಿಸಲಾಗಿದೆ. ಪ್ರತಿ ಸೀರೆಗೆ 200 ರೂ. ವ್ಯಯಿಸಿದ್ದು, ಮಹಿಳಾ ಹೋರಾಟಗಾರರು 100 ರೂ. ಭರಿಸಿ ಸೀರೆ ಪಡೆದುಕೊಳ್ಳಬಹುದಾಗಿದೆ. ಉಳಿದ 100 ರೂ. ದಾನಿಗಳಿಂದ ಭರಿಸಲಾಗಿದೆ ಎಂದು ಸೊಬರದಮಠ ಸ್ವಾಮೀಜಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gajendragad; ದಕ್ಷಿಣ ಕಾಶಿ ಕಾಲಕಾಲೇಶ್ವರ ಅದ್ದೂರಿ ರಥೋತ್ಸವ
Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’
Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ
Gadag; ಮನೆ ಮಗನಿಂದಲೇ ಸುಪಾರಿ; ನಾಲ್ವರ ಹತ್ಯೆ ಪ್ರಕರಣ ಬೇಧಿಸಿದ ಪೊಲೀಸರು; 8 ಜನರ ಬಂಧನ
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ