ಉದ್ಘಾಟನೆಯಾದರೂ ಬಳಕೆಗೆ ಬಾರದ ಘಟಕ
Team Udayavani, Sep 22, 2019, 10:55 AM IST
ಗಜೇಂದ್ರಗಡ: ಪಟ್ಟಣದ ಜನತೆಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಲಕ್ಷಾಂತರ ರುಪಾಯಿ ವ್ಯಯಿಸಿ ನಿರ್ಮಾಣ ಮಾಡಿದ ಶುದ್ಧ ನೀರಿನ ಘಟಕ ಉದ್ಘಾಟನೆಗೊಂಡು ಒಂಭತ್ತು ತಿಂಗಳು ಕಳೆದರೂ ಈವರೆಗೆ ಉಪಯೋಗಕ್ಕೆ ಬಂದಿಲ್ಲ.
ಪಟ್ಟಣದ 3, 15, 17 ಮತ್ತು 23ನೇ ವಾರ್ಡ್ನಲ್ಲಿ ಪುರಸಭೆಯ 2015-16ನೇ ಸಾಲಿನ ಎಸ್ಎಫ್ಸಿ, 2016-17ನೇ ಸಾಲಿನ 14ನೇ ಹಣಕಾಸು ಯೋಜನೆಯ ಸಾಮಾನ್ಯ ಮೂಲ ಅನುದಾನದಲ್ಲಿ ಅಂದಾಜು 20 ಲಕ್ಷ ರೂ. ವೆಚ್ಚದಲ್ಲಿ ನಾಲ್ಕು ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣವಾಗಿದೆ. ಜನತೆಗೆ ಪ್ಲೋರೈಡ್ನಿಂದ ಮುಕ್ತಿ ನೀಡಬೇಕೆನ್ನುವ ಉದ್ದೇಶದಿಂದ ವಿವಿಧ ಬಡಾವಣೆಗಳಲ್ಲಿ ಉದ್ಘಾಟಿಸಲಾಗಿದ್ದ ಘಟಕಗಳಿಗೆ ಶುರುವಾದ ದಿನದಿಂದ ಬೀಗ ಜಡಿಯಲಾಗಿದೆ. ಇರುವ ಕಿಟಕಿಗಳ ಗಾಜುಗಳು ಪುಡಿಯಾಗಿವೆ. ಪ್ರತಿ ಘಟಕಕ್ಕೆ 20 ಲಕ್ಷ ರೂ. ಖರ್ಚು ಮಾಡಿದ್ದು, ನಾಲ್ಕು ಘಟಕಕ್ಕೆ ಅಂದಾಜು 80 ಲಕ್ಷ ರೂ. ಖರ್ಚಾಗಿದೆ. ಪುರಸಭೆಯಿಂದ ಶ್ರೀ ಕಟ್ಟಿಬಸವೇಶ್ವರ ರಂಗ ಮಂದಿರ ಬಳಿ, ನೇಕಾರ ಕಾಲೋನಿಯಲ್ಲಿನ ನಾಗರಕಟ್ಟೆ, ಪುರಸಭೆ ಆವರಣದಲ್ಲಿ ಮತ್ತು ಉಣಚಗೇರಿ ಸೇರಿ ನೂತನವಾಗಿ ನಾಲ್ಕು ಘಟಕಗಳನ್ನು 25 ಡಿಸೆಂಬರ್ 2018ರಂದು ಶಾಸಕ ಕಳಕಪ್ಪ ಬಂಡಿ ಉದ್ಘಾಟಿಸಿದ್ದರು. ಇದಕ್ಕೂ ಒಂಭತ್ತು ತಿಂಗಳಿಂದ ಬೀಗ ಜಡಿಯಲಾಗಿದೆ.
ಇನ್ನು ಪುರಸಭೆ ಆವರಣದಲ್ಲಿಯ ಶುದ್ಧ ನೀರಿನ ಘಟಕ ಸುತ್ತಲೂ ಅಸುಚಿತ್ವ ರಾರಾಜಿಸುತ್ತಿದೆ. ಕಟ್ಟಡ ಸಂಪೂರ್ಣ ಗಬ್ಬೆದ್ದು ನಾರುತ್ತಿದೆ. ಅಲ್ಲದೇ ಶ್ರೀ ಕಟ್ಟಿಬಸವೇಶ್ವರ ರಂಗ ಮಂದಿರ ಮತ್ತು ನೇಕಾರ ಕಾಲೋನಿಯ ನಾಗರಕಟ್ಟಿ ಬಳಿಯ ಘಟಕದ ಸ್ಥಿತಿ ಹೇಳತೀರದಾಗಿದ್ದು, ಕೂಡಲೇ ಜಿಲ್ಲಾ ಧಿಕಾರಿಗಳು ಮಧ್ಯ ಪ್ರವೇಶಿಸಿ ಅಭಿವೃದ್ಧಿ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವ ಪುರಸಭೆ ಅ ಧಿಕಾರಿಗಳಿಗೆ ತಾಕೀತು ಮಾಡಿ, ಶುದ್ಧ ಕುಡಿಯುವ ನೀರಿನ ಘಟಕ ಆರಂಭಕ್ಕೆ ಕ್ರಮ ಜರುಗಿಸಬೇಕು ಎನ್ನುವುದು ಜನಸಾಮಾನ್ಯರ ಒತ್ತಾಯವಾಗಿದೆ.
ಉದ್ಘಾಟನೆಯಾಗಿ 9 ತಿಂಗಳಾಗಿದೆ. ಈವರೆಗೂ ನಾವು ಶುದ್ಧ ನೀರಿನ ಘಟಕದ ಬಾಗಿಲು ತೆರೆದಿದ್ದೆ ನೋಡಿಲ್ಲ. ನಮ್ಮ ಬಡಾವಣೆಯಲ್ಲಿ ಈ ಘಟಕ ಇದ್ದೂ ಇಲ್ಲದಂತಾಗಿದೆ. ಹೀಗಾಗಿ ನಿತ್ಯ ಖಾಸಗಿಯವರಿಂದ 20ರಿಂದ 30 ರೂ. ಕೊಟ್ಟು ಶುದ್ಧ ನೀರು ಪಡೆಯೋ ಸ್ಥಿತಿ ಬಂದಿದೆ.-ಸುರೇಶ ಶಿಂಧೆ, 15ನೇ ವಾರ್ಡ್ ನಿವಾಸಿ
-ಡಿ.ಜಿ. ಮೋಮಿನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Gadag; ನಮ್ಮದು ಬಡವರಿಗೆ ಬದುಕು ಕಟ್ಟಿ ಕೊಡುವ ಪ್ರಣಾಳಿಕೆ: ಬಸವರಾಜ ಬೊಮ್ಮಾಯಿ
MUST WATCH
ಹೊಸ ಸೇರ್ಪಡೆ
Hubli; ಸ್ಪರ್ಧೆ ಮಾಡಲು ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್ ಬಂದಿದೆ: ಯತ್ನಾಳ್ ಆರೋಪ
Box office: ಈ ವಾರ ಬಾಲಿವುಡ್ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?
Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ